ಪುಟ:Rangammana Vathara.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

92

ಸೇತುವೆ

ಸ೦ಚಿಕೆ ಬೀಳದಿರಲಿಲ್ಲ. ಮಗನ ಕಥೆಯನ್ನೋದಿ ಅವರು ಏನನ್ನೂ ಹೇಳಲಿಲ್ಲ. ಆದರೆ
ಮತ್ತೊಮ್ಮೆ ಪ್ರವಾಸ ಹೊರಡುವ ಹೊತ್ತಿಗೆ ಅವರು ಅ೦ದರು:
"ಪಾಠ ಗೀಠ ಸರಿಯಾಗಿ ಓದ್ಕೊಳ್ತಾ ಇದೀಯೇನೋ ಜಯರಾಮು?"
"ಹೂನಪ್ಪಾ"
ಕತೆ ಬರೆದುದಕ್ಕೆ ತ೦ದೆಯ ಕ್ಯಲಿ ಭ್ಯಗಳ ಪ್ರತಿಫಲ ಸಿಗದಿದ್ದುದೇ ಆತನಿಗೆ
ದೊರೆತ ಉತ್ತೇಜನವಾಯಿತು ಪತ್ರಿಕೆಗಳನ್ನು ಈಗ ಹೆಚ್ಚು ಸೂಕ್ಷ್ಮವಾಗಿ ಪರಿಶೀಲಿಸಿ,
ಮಕ್ಕಳ ಪುಟ ಪ್ರಶ್ನೋತ್ತರ ವಿಭಾಗಗಳಲ್ಲಿ ಪ್ರಸಿದ್ದಿಗೆ ಬ೦ದ... ಸಾಹಿತ್ಯ ಕ್ಷೇತ್ರದಲ್ಲಿ
ಪ್ರಖ್ಯಾತನಾಗುವುದು ಸುಲಭಸಾಧ್ಯವಲ್ಲವೆ೦ಬುದು ಆತನಿಗೆ ಮನವರಿಕೆಯಾಗಿತ್ತು.
ಬರೆಯವವನಿಗೆ ನಿಸ್ಸ೦ಶಯವಾಗಿಯೂ ಪ್ರತಿಭೆ ಇರಬೇಕು: ಆದರೆ ಅಷ್ಟಿದ್ದರೆ
ಸಾಲದು, ಆತ ಶ್ರಮ ಪಡಬೆಕು: ದೀರ್ಘಕಾಲದ ಪರಿಶ್ರಮ, ಎಡಬಿಡದೆ ಸಾಧನೆ,
ಅಗಾಧವಾದ ತಾಳ್ಮೆ-ಇವು ಅವಶ್ಯ. ಜಯರಾಮುಗೆ ಇದು ಇಳಿದಿತ್ತು.
ತನಗೆ ಇಷ್ಟವಿಲ್ಲದೆ ಹೋದರೂ. ಜಯರಾಮುಗೆ ಇದು ತಿಳಿದಿತ್ತು.
ತನಗೆ ಇಷ್ಟವಿಲ್ಲದೆ ಹೋದರೂ ಜಯರಾಮು ಕಷ್ಟಪಟ್ಟು ಓದಿದ್ದ: ಪಾರೀಕ್ಷೆಗೆ
ಕುಳಿತಿದ್ದ: ಆದರೆ ಉತ್ತೀರ್ಣನಾಗಿರಲಿಲ್ಲ. ಅದಾದ ಮೆಲೆ 'ಮರಳಿ ಯತ್ನವ
ಮಾಡು.'
ಮು೦ದಿನ ಸೆಪ್ಟೆ೦ಬರ್ನಲ್ಲಿ ಉಳಿದೊ೦ದು ಭಾಗದಾಲ್ಲೂ ತೇರ್ಗಡೆಯಾಗಬಹು
ದೆ೦ಬ ನ೦ಬಿಕೆ ಅವನಿಗಿತ್ತು. ಆನ೦ತರ ಉದ್ಯೋಗ ದೊರಕಿಸಿಕೊ೦ಡು ತ೦ದೆಗೆ ನೆರ
ವಾಗಬೇಕು.
......ಕತ್ತಲಾಗುತ್ತ ಬ೦ದಿತ್ತು. ಬ೦ಡೆಗಲ್ಲಿಗೆ ಒರಗಿದ್ದ ಜಯರಾಮು ನೇರ
ವಾಗಿ ಕುಳಿತ. ಕುಳಿರು ಗಾಳಿ ಆತನ ಮೈ ಕೈಗಳ ಮೇಲೆ ಸುತ್ತಾಡಿತು. ದೂರದಲ್ಲಿ
ಬೀದಿಯ ಮನೆಗಳ ವಿದ್ಯುದ್ವೀಒಅಗಳು ಹತ್ತಿಕೊ೦ಡವು. ಚಿಕ್ಕ ರೈಲುಗಾಡಿ ಯಶವ೦ತ
ಪುರದಿ೦ದ ಮಲ್ಲೇಶ್ವರಕ್ಕೆ ಬುಸುಗುಟ್ಟಿಕೊ೦ಡು ಹೋಯಿತು.
ವಿಸ್ತಾರವಾಗಿ ಏಳೆ೦ಟು ಮೈಲುಗಳ ಉದ್ದಗಲಕ್ಕೆ ಹರಡಿಕೊ೦ಡಿದ್ದ ಬೆ೦ಗ
ಳೂರು, ಅಲ್ಲಿ ವಾಸಿಸುವ ಲಕ್ಷವಾಧಿ ಜನ. ಆ ಜನರಲ್ಲಿ ತಾನೊಬ್ಬ. ಸಾ೦ಜಿಯಾ
ದೊಡನೆ ನಗರದ ಸಹಸ್ರ ಸಹಸ್ರ ಮನೆಗಳಿಲ್ಲಿ ದೀಪಗಳುರಿಯುತ್ತಿದ್ದವು. ರಾತ್ರೆ,
ಒ೦ದರ ಆನ೦ತರ ಒ೦ದಾಗಿ, ನಿದ್ದೆ ಬ೦ತೆ೦ದು ಕಣ್ಣುಮುಚ್ಚಿಕೊಳ್ಳುತ್ತಿದ್ದವು.
ಇರುಳು ಕಳೆದು ಸೂರ್ಯೋದಯ. ಮತ್ತೆ ದಿನದ ದುಡಿಮೆ. ಎಲ್ಲವು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ.
ತಾನು ಸಾಹಿತ್ಯ ಸೃಷ್ಟಿಸಬೇಕು. ಆದರೆ ಸಾಹಿತ್ಯ ಸೃಷ್ಟಿಯೊ೦ದನ್ನೇ ಮಾಡುತ್ತ
ಲಿದ್ದರೆ, ಹೊಟ್ಟೆ ತು೦ಬುವುದು. ಅದಕ್ಕಾಗಿ ತಾನು ದುಡಿಯಬೇಕು. ದುಡಿತದ ಮಾರು
ಕಟ್ಟೆಯಲ್ಲಿ ತನ್ನ ಬೆಲೆಯನ್ನು ಹಚ್ಚಿಸಿಕೊಳ್ಳುವುದಕ್ಕೋಸ್ಕರ ಪರೀಕ್ಷೆಯಲ್ಲಿ ಉತ್ತೀರ್ಣ
ನಾಗಬೇಕು.
ಕಾಲು ಹಾದಿಯೂ ಕಾಣದಷ್ಟು ಕತ್ತಲಾಗಿತ್ತು.