ಪುಟ:Rangammana Vathara.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

148

ಸೇತುವೆ

ಜತೆಯಲ್ಲಿ ಸಿಗರೇಟು ಸೇದಲಿಲ್ಲ. ದೊಡ್ಡವನು ಹುಡುಗಿಯರನ್ನು ನೋಡಿ ನಗೆ
ಮಾತನಾಡಿದಾಗ ಚಿಕ್ಕವನು ನಕ್ಕನೇ ಹೊರತು, ತಾನು ಸ್ವತಃ ಯಾವ ಮಾತನ್ನೂ
ಅಡలిల్ల.
ಚಿಕ್ಕವನು ಸಹವಾಸದೋಷದಿಂದ ಕೆಟ್ಟು ಹೋಗುತ್ತಿದ್ದಾನಲ್ಲಾ ಎಂದು ರಾಜ
ಶೆಖರನಿಗೆ ಕೆಡುಕೆನಿಸಿತ್ತು
ಆದರೆ ಅವನು ಕೆಟ್ಟು ಹೋಗಲಿಲ್ಲ. ಆ ಪುಟ್ಟ ಹುಡುಗನಿಗೆ ಬೇಗನೆ ಪಂದ್ಯಾ
ಟದ ಹುಚ್ಚು ಹಿಡಿಯಿತು. ಎಚ್ಚರದಲ್ಲವೂ ನಿದ್ದೆಯಲ್ಲೂ ಆತ ಕ್ರಿಕೆಟ್ ಮಂತ್ರ
ಜಪಿಸಿದ. ಸ್ವತಃ ಕಣಕ್ಕಿಳಿಯದಿದ್ದರೂ ಕ್ರಿಕೆಟ್ ಪ್ರೇಮಿಯಾದ.
ಆಟಗಳಲ್ಲಿ ಆಸಕ್ತಿಯಿಲ್ಲದ ರಾಜಶೇಖರನಿಗೆ ಆ ಹುಡುಗನ ಕ್ರಿಕೆಟ್ ಪ್ರೇಮ
ಒಪ್ಪಿಗೆಯಾಗದೆ ಹೋದರೂ, ದೇವಯ್ಯನ ಪೋಲಿತನಕ್ಕಿಂತ ಇದು ಸಹಸ್ರ ಪಾಲು
ಮೇಲು ಎನ್ನುವುದು ಅತನ ಅಭಿಪ್ರಾಯವಾಗಿತ್ತು,
ರಂಗಮ್ಮ ಬೇಗ ದೀಪ ಆರಿಸುತ್ತಿದ್ದುದರಿಂದ ರಾಜಶೇಕರನಿಗೆ ಓದಿಕೊಳ್ಳಲು
ಕಷ್ಟವಾಯಿತು. ಒಂದು ರೂಪಾಯಿ ಕೊಟ್ಟ ಆತ ಬೆಡ್‌ಲ್ಯಾಂಪ್ ಕೊಂಡು ತಂದ.
ಆತ ತರುತ್ತಲಿದ್ದಾಗ ಅದನ್ನು ನೋಡಿದ ಜಯರಾಮು ಕೇಳಿದ:
"ರಾತ್ರೆ ಓದೋಕೆ ದೀಪ ಇಲ್ದೆ ತೊಂದರೆ ಆಗುತ್ತೆ ಅಲ್ವೆ?"
"ಹೂಂ. ಕಣ್ರೀ."
'ಸಾರ್' ಹೊರಟು ಹೋಗಿತ್ತು. ಅವರು ಆತ್ಮೀಯ ಗೆಳೆಯರಾಗದೆ ಹೋದರೂ
ಒಳ್ಳೆಯ ಪರಿಚಿತರಾಗಿದ್ದರು.
"ನಮ್ಮನೇಲೂ ಅಂಥದೇ ಓಂದಿದೆ."
ಇನ್ನು ರಾಜಶೇಖರ ಒಂದು ಶೀಷೆ ಸೀಮೆ ಏಣೆ ತರಬೇಕು. ಅದಕ್ಕಾಗಿ ಖಾలి
ಶೀಷೆಯೊಂದನ್ನು ಕೊಳ್ಳಬೇಕು. ತಮ್ಮ ಮನೆಯಲ್ಲಿ ಒಂದು ಖಾಲಿ ಶೀಷೆ ಇದ್ದುದು
ಜಯರಾಮೂಗೆ ನೆನಪಾಗಿ, ಅದನ್ನು ಆತನಿಗೆ ಕೊಟುಬಿಡೋಣವೆನಿಸಿತು. ಆ ವಿಚಾರ
ಮಾತನಾಡಬೇಕೆಂದು ನಾಲಿಗೆ ಸಿದ್ಧವಾಗುತ್ತಿದ್ದಾಗಲೆ 'ತಡೆ' ಎಂದಿತು ಮೆದುಳು.
'ಹಳೇ ಪೇಪರ್-ಶೀಷೆ'ಯವನಿಗೆ ಅದನ್ನು ಮಾರಬೇಕೆಂದು ರಾಧಾ ಆಗಲೇ ಲೆಕ್ಕ
ಹಾಕಿದ್ದಳು. ಅವರ ಮನೆಯ, ಮುಖ ನೋಡುವ ಕನ್ನಡಿ ಒಡೆದು ಹೋಗಿತ್ತು.
ದುಡ್ಡು ಕೂಡಿಟ್ಟು ಅದಷ್ಟು ಬೇಗನೆ ಮತ್ತೊಂದನ್ನು ಕೊಳ್ಳಬೇಕೆಂಬುದು ರಾಧೆಯ
ಯೋಜನೆ...ಅದೇ ಸರಿಯಾಗಿತ್ತು. ಔದಾರ್ಯವನ್ನು ತೋರಿಸೋಣವೆಂದು ಭಾವಿ
ಸಿದ್ದ ಜಯರಾಮು ಆ ಯೋಚನೆಯನ್ನು ಬಿಟ್ಟುಕೊಟ್ಟು ತೆಪ್ಪಗಾದ.
ಅದರೆ ಅ ಬೆಡ್‌ಲ್ಯಾಂಪಿನ ಅಗತ್ಯದ ವಿಷಯವಾಗಿ ಕೊಠಡಿಯಲ್ಲಿ ಏಕಾಭಿಪ್ರಾ
ಯುವಿರಲಿಲ್ಲ. ಅಷ್ಟೇ ಅಲ್ಲ. ಹೊಸ ದೀಪ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು
ತೀವ್ರಗೊಳಿಸಿತು.

ರಾಜಶೇಖರನ ಸ್ವರವನ್ನೆ ಅಣಕಿಸುತ್ತ ದೇವಯ್ಯ ಹೇಳಿದ: