ಪುಟ:Rangammana Vathara.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

193

ಬಲ್ಲ, ಬರೆಹಗಾರನ ಕೈಯಲ್ಲಿ ವಾಸ್ತವವಾದದ ಪ್ರವೃತ್ತಿ ಸಂಜೀವಿನಿಯಾಗ್ಬೇಕು.
ಯಥಾರ್ಥವಾದಕ್ಕೆ ಕಟ್ಟುಬಿದ್ದು, ಸುಲಭ ಲಭ್ಯವಲ್ಲವೆಂಬ ಒಂದೇ ಕಾರಣದಿಂದ,
ಅಸ್ಪಷ್ಟವಾದ-ಆದರೆ ಒಳ್ಳೆಯ- ಚಿತ್ರಗಳನ್ನು ಎತ್ತಿ ತೋರಿಸದೇ ಇರುವುದೂ ಸರಿ
ಯಲ್ಲ. ನಿಜ ಸ್ಥಿತಿಯ ಚಿತ್ರಣದಲ್ಲಿ ಆಗಾಗ್ಗೆ ಅಪೇಕ್ಷಣೀಯ ಪರಿಸ್ಥಿತಿಯು ಸೂಕ್ಷ್ಮ
ಬಣ್ಣಗಳನ್ನೂ ಉಪಯೋಗಿಸ್ಬೇಕು."
"ಪೇಂಟರ್ ಶಂಕರನಾರಾಯಣಯ್ಯ ಮತ್ತು ಚಂಪಾ ಈ ಜೋಡಿಯ ವಿಷಯ
ದಲ್ಲಿ ಹಾಗೆ ಹೇಳಬಹುದಲ್ಲ?"
"ಹೌದು, ಸರಿಯಾಗಿಯೇ ಊಹಿಸಿದಿರಿ."
"ಪಾತ್ರಗಳನ್ನು ಒಂದೋ ಕರಿಯದಾಗಿ ಇಲ್ಲವೆ ಬಿಳಿಯದಾಗಿ ಚಿತ್ರಿಸುವುದು
ವಾಸ್ತವವಾದದ ಪ್ರವೃತ್ತಿ ವಿರುದ್ಧವೇ?”
"ವಿರುದ್ಧ. ನಮ್ಮ ಪಾತ್ರಗಳು ಒಮ್ಮೊಮ್ಮೆ ಸಕಲ ಸದ್ಗುಣ ಸಂಪನ್ನರು ಇಲ್ಲವೆ
ದುರಾಚಾರಗಳ ದಾನವರು. ಇದು ಸರಿಯಲ್ಲ. ಪ್ರತಿಯೊಬ್ಬನಲ್ಲಿ ಒಳ್ಳೆಯ ಗುಣ
ಗಳೂ ಇರ್ತವೆ; ಕೆಟ್ಟ ಗುಣಗಳೂ ಇರ್ತವೆ. ಗುಣಗಳ ದಾಮಾಶಯಕ್ಕೆ ತಕ್ಕಂತೆ ಆ
ವ್ಯಕ್ತಿಗಳನ್ನು ಒಳ್ಳೆಯವರೆಂದೋ ಕೆಟ್ಟವರೆಂದೋ ಕರೀತೇವೆ. ಆದರೆ 'ಒಳ್ಳೆಯವರು'
ಎಂದಾಗ ಅವರಲ್ಲಿ ದುರ್ಗುಣಗಳೇ ಇಲ್ಲ ಅನ್ನೋದಾಗಲೀ 'ಕೆಟ್ಟವರು' ಎಂದಾಗ
ಅವರು ಕಡು ಪಾಪಿಗಳೇ ಎಂದಾಗಲೀ ಅರ್ಥವಲ್ಲ."
"ರಂಗಮ್ಮನನ್ನು ಉದಾತ್ತ ವ್ಯಕ್ತಿಯಾಗಿ ನೀವು ಯಾಕೆ ಚಿತ್ರಿಸಿಲ್ಲ ಅನ್ನೋದು
ಈಗ ತಿಳೀತು"
"ರಂಗಮ್ಮನನ್ನು 'ದೇವತೆ'ಯಾಗಿ ಚಿತ್ರಿಸೋದು ಆದರ್ಶದ ಪರಮಾವಧಿ
ಯಾದೀತು. ಹಲವು ಒಳ್ಳೆಯ ಗುಣಗಳಿದ್ದರೂ ರಂಗಮ್ಮ 'ದೇವತೆ'ಯಾಗೋದು
ಸಾಧ್ಯವಿల్ల. ಆಕೆಯ ಜೀವನ ವಿಧಾನ, ಅದನ್ನು ಕೋದಿರುವ ಆರ್ಥಿಕ ಸೂತ್ರ,
ಅಂತಹ ಅವಕಾಶವನ್ನು ಆಕೆಗೆ ಕೊಡೋದಿಲ್ಲ."
“ಅದು ನಿಜ... ಇತರ ಪಾತ್ರಗಳೂ ಅಷ್ಟೆ. ಒಬ್ಬೊಬ್ಬರ ಮೂರ್ಖತನ ಕಂಡು
ನಗು ಬಂದರೂ ಬುದ್ಧಿವಂತಿಕೇನ ನೋಡಿ ಮೆಚ್ಚಬೇಕೆನಿಸಿದರೂ ಅವರ ಒಟ್ಟು ಬದು
ಕಿನ ಬಗೆಗೆ ಮರುಕ ಅನಿಸ್ತದೆ."
"ಸಮಾಜ ವ್ಯವಸ್ಥೆ ಅವರನ್ನು ಇರಿಸಿದೆಯಲ್ಲಾ ಅಂತ ಮರುಕ
ವಾಗ್ಬೇಕು."
"ಆ ಉದ್ದೇಶದಿಂದಲೆ ನೀವು ಕೃತಿ ರಚಿಸಿದ್ದೀರಿ ಅಲ್ಲವೆ?"
"ಹೌದು.... ಆದರೆ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ!"
"ಅದನ್ನು ಹೇಳಬೇಕಾದವರು ನಾವು."
"ತಲೆ ಬಾಗಿದೆ"

25