ಪುಟ:Rangammana Vathara.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

87

ಮರೆಯುತ್ತಿದ್ದ.
ತಾನು ಈ ಸಲ ಪರೀಕ್ಷೆ ಕಟ್ಟದಿರುವುದೇ ಮೇಲು, ಈ ಓದು ಇಷ್ಟವಿಲ್ಲವೆಂದು
ತಂದೆ ಬಂದೊಡನೆ ಹೇಳಬೇಕು ಎಂದೆಲ್ಲ ಯೋಚಿಸುತ್ತ ಜಯರಾಮು ಮನೆಗೆ
ಮರೆಳಿದ್ದ ಆ ಸಂಜೆ.
"ಯಾಕೊ ಇಷ್ಟು ತಡ?"
-ಎಂದು ಜಯರಾಮುವಿನ ತಾಯಿ ಕೇಳಿದಳು. ಮಗ ಉತ್ತರ ಕೊಡಲಿಲ್ಲ
ವೆಂದು ಆಕೆ ಸಿಟ್ಟಾದಳು.
"ಮಾತು ಕೂಡ ಆಡ್ಬಾರ್ದೇನೊ?" ಎಂದು ತಾಯಿ ರೇಗಿ ನುಡಿದು, ತಾನು
ಒಡೆದು ಮಗಳ ಕೈಯಲ್ಲಿ ಓದಿಸಿ ದೇವರ ಪಠದ ಹಿಂದಿರಿಸಿದ್ದ ಕಾಗದವನ್ನು ಮಗನಿಗೆ
ಕೊಟ್ಟಳು.
"ನೋಡು, ನಿಮ್ಮಪ್ಪ ಕಾಗದ ಬರೆದಿದ್ದಾರೆ. ಪರೀಕ್ಷೆ ದುಡ್ಡು ಕಟ್ಟೋಕೇಂತ
ಮನಿಯಾರ್ಡರೂ ಕಳಿಸಿದ್ದಾರೆ."
ತಂದೆಯ ಕಾಗದ ಓದಿದ ಮಗನ ಮನಸ್ಸು ಕುಗ್ಗಿ ಹೋಹಿತು. ಆತನ ವಿದ್ಯಾ
ಭ್ಯಾಸಕ್ಕೂ ಆ ಪರೀಕ್ಷೆಗೂ ಅವರು ಅಷ್ಟೊಂದು ಮಹತ್ವ ಕೊಟ್ಟಿದ್ದರು! "ಇನ್ನು
ಮುಂದಕ್ಕೆ ಓದಿಸುವ ಸಾಮರ್ಥ್ಯ ನನಗಿಲ್ಲ. ಆದರೆ ನನ್ನ ಮಗ ಇಂಟರ್ ಪರೀಕ್ಷೆ
ಯಾದರೂ ಪಾಸಾಗಬೇಕು. ನೀನು ಬೇಗನೆ ಸಂಪಾದಿಸುವಂತಾಗಬೇಕು. ನಮ್ಮ
ಸಂಸಾರದ ಪರಿಸ್ಥಿತಿ ನಿನಗೆ ಗೊತ್ತೇ ಇದೆ..."
ಇಯಿ ಕೇಳಿದ್ದಳು:
"ನಿದ್ದೆ ಬಂತೆ ಜಯರಾಮೂ?"
ಆ ಪ್ರಶ್ನೆ ಕೇಳಿಸಿದ್ದರೂ ಉತ್ತರ ಕೊಡಲಿಲ್ಲ ಆತ. ಅತ್ತಿತ್ತ ಮಿಸುಕದೆ ಮಲ
ಗಿದ. ಯೋಚನೆಯಿಂದ ಆ ಮೆದುಳು ಭಣಗುಟ್ಟಿತು...ತಂದೆಯ ಬಯಕೆಯನ್ನು
ಪೂರೈಸುವುದಕ್ಕಾದರೂ ತಾನು ಓದಬೇಕು, ಉತ್ತೀರ್ಣನಾಗಬೇಕು, ಎಷ್ಟೆಂದರೂ
ಇನ್ನು ಕೆಲವು ತಿಂಗಳು ಮಾತ್ರ ಎಂದುಕೊಂಡ.
ಆದರೆ ಆ ತೀರ್ಮಾನವನ್ನು ಕಾರ್ಯಗತಗೊಳಿಸುವುದು ಸುಲಭವಾಗಿರಲಿಲ್ಲ.
ಮತ್ತೆ ಮತ್ತೆ ಜಯರಾಮು ಪರೀಕ್ಷೆಗೆ ಕುಳಿತುಕೊಳ್ಳಬೇಕಾಯಿತು. ತಂದೆ ಅವಾಚ್ಯ
ಮಾತುಗಳಿಂದ ಗದರಿಸಲಿಲ್ಲವಾದರೂ ಅವರಿಗೆ ತುಂಬಾ ದುಃಖವಾಗಿದೆ ಎಂಬುದನ್ನು
ಜಯರಾಮು ತಿಳಿದ.
ಒಮ್ಮೆ ಆತನ ತಂದೆ ಕೇಳಿದರು:
"ಷಾರ್ಟ್ ಹ್ಯಾಂಡ್ ಟೈಪ್ ರೈಟಿಂಗ್ ಕಲೀತಿಯೇನೋ?"
ಜಯರಾಮು ಉತ್ತರ ಕೊಡಲಿಲ್ಲ. ಆದರೆ ಆ ಕಲಿಯುವಿಕೆಯಿಂದ ಮುಖ್ಯ
ಪರೀಕ್ಷೆಗೆ ಭಂಗ ಬರಬಹುದೆಂದು ಅಳುಕಿ ಅವರೇ ಹೇಳಿದರು: