ನಾನು ಮುಗುಳ್ನಕ್ಕು, ಅವನೊಡನೆ ಸಮಿಪದ ಇರಾನಿ ಹೋಟೆಲನ್ನು ನುಗ್ಗಿದೆ.
.......ಹಾಗೆ ಅರಂಭವಾದ ಪರಿಚಯ ಅಲ್ಲಿಗೇ ಮುಕ್ತಾಯವಾ ಗಲಿಲ್ಲ. ನನಗೆ ತಿಳಿದಿದ್ದ ಓದುಬರಹ, ಅವನ ಮೆಚ್ಚುಗೆಗೆ ಪಾತ್ರ ವಾಯಿತು. ಅತನಿಗೆ ನನ್ನ ಕೈಯಲ್ಲಿ ಆದ ಮುಖಭಂಗ, ವಿಚಿತ್ರ ರೀತಿಯಲ್ಲಿ ಅವನನ್ನು ನನ್ನೆಡೆಗೆ ತಂದಿತು
"ಶೇಖರ್, ನನಗೂ ಸಂಬಂಧಿಕರು ಯಾರೂ ಇಲ್ಲ. ಪ್ರಪಂಚ ವಿಶಾಲವಾಗಿದೆ ಎಂತ ದೇಶವೆಲ್ಲಾ ಸುತ್ತಾಡ್ತಿದ್ದೇನೆ. ಕಲ್ಕತ್ತಾ, ಢಿಲ್ಲಿ ಗಳಾದ ಮೇಲೆ, ಈಗ ಬೊಂಬಾಯಿ".
ನಾನು ಮುಗುಳ್ನಕ್ಕೆ.
ಆತ ಮರುದಿನವೂ ನನ್ನನ್ನು ಹುಡುಕಿಕೊಂಡು ಬಂದ. ನೋಡು ವವರ ದೃಷ್ಟಿಯಲ್ಲಿ ಆತನೊಬ್ಬ ಕೆಳ ಮಟ್ಟದ ವ್ಯಕ್ತಿ. ಅವನದು ತುಂಡು ಸಿಗರೇಟನ್ನು ಕಿವಿಯಲ್ಲಿರಿಸಿಕೊಳ್ಳುವ ಸಂಸ್ಕೃತಿ. ಅವನ ಜೀವನ ಕ್ರಮವನ್ನು ತಿಳಿದವರ ದೃಷ್ಟಿಯಲ್ಲಿ, ಆತನೊಬ್ಬ ಜೇಬುಗಳ್ಳ. ಜೇಬುಗಳ್ಳ ರು ಓಳ್ಳೆಯ ಮನುಷ್ಯರಾಗಿ ಇರುವುದು ಎಂದಾದರೂ ಸಾಧ್ಯವೆ? ಒಳ್ಳೆಯ ಮನುಷ್ಯರೆನ್ನಿಸಿಕೊಳ್ಳಬೇಕಾದುದು ಯಾರ ದೃಷ್ಟಿಯಲ್ಲಿ? ಒಳ್ಳೆತನವೆಂದರೇನು?
ನಾನು ಅವನ ಜೇವನದ ಒಳಹೊಕ್ಕು ಪರೀಕ್ಷಿಸ ಬಯಸಿದೆ, ಕೊನೆಯಿಲ್ಲದೆ ಪತ್ತೇದಾರಿ ಕಥೆ ಚಲಚ್ಚಿತ್ರ ತಾರೆಯರ ಜೀವನಗಳ ಬಗ್ಗೆ ಮಾತನಾಡುತ್ತಿದ್ದ ಮರಾಠಿ ಹುಡುಗನ ಸಹವಾಸಕ್ಕಿಂತ ಇದು ಹಿತಕರವಾಗಿತ್ತು.
"ನಿಮ್ಮನ್ನು ಏನೆಂದು ಕರೀಲಿ?"
"ಜನ ಕೂಗೋದು ಭಾಷ ಎಂತ. ನಮ್ಮ ತಾಯಿ ಇಟ್ಟ ಹೆಸರು ಅಮಿರ್. ನೀನು ಅಮಿರ್ ಅಂತಾನೆ ಕೂಗು."
"ಅಮಿರ್, ನಿನ್ನ ಒಂದು ವಿಷಯ ಕೇಳ್ಬೇಕೂಂತ"
"ಅದಕ್ಕೇನಂತೆ, ಧಾರಾಳವಾಗಿ ಕೇಳು."
"ಈ ವೃತ್ತಿ ನಿನಗೆ ತುಂಬ ಇಷ್ಟಾನ?"