ಪುಟ:Vimoochane.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ವಿಮೋಚನೆ

ಸುವ ಮಾತನ್ನಾಡಿದ: "ರುಕ್ಕೂ ಅಂಗೇ ನಿಂತಿರು. ಚಂದ್ರೂನ
ಬಿಟ್ಬಿಟ್ಟು ಬರ್ರ್ತೀನಿ".

"ತಂದೆ ಮುಂದಕ್ಕೆ ನಡೆದ. ನಾನು "ಅಮ್ಮಾ ಅಮ್ಮಾ" ಎನ್ನುತ್ತಾ
ಕೂಗುತ್ತಲಿದ್ದೆ. ನನ್ನ ತಾಯಿ ಮುಗುಳುನಗುತ್ತಿದ್ದ ಹಾಗೆ ಜ್ಞಾಪಕ.
ಆಕೆಯ ಕಣ್ಣುಗಳಿಂದ ನೀರಹೊಳೆಗಳು ಎರಡು ಹರಿಯುತ್ತಿದ್ದುವು.
ಅದು ನದಿಯ ಕೊಳಕು ನೀರಲ್ಲ, ನಾನು ಬಲ್ಲೆ. ಅದು ನಿರ್ಮಲವಾದ
ಕಣ್ಣನೀರು. ತಾಯಿ ಮಗನಿಗಾಗಿ ಸುರಿಸುವ ಕಣ್ಣೀರು.....ತಂದೆ
ದಡ ತಲುಪಿ ನನ್ನನು ಆಲ್ಲೇ ಬಿಟ್ಟು ಮರುಕ್ಷಣದಲ್ಲೇ ನದಿಗೆ ಇಳಿದ.
ಆಗ---

ಈ ಘಟನೆಯ ಬಗ್ಗೆ ಹೇಗೆ ಬರೆಯಬೇಕೊ ನನಗೆ ತಿಳಿಯದು.
ನನ್ನ ಜೀವನದ ಮೊದಲ ಕಹಿ ಹೊಡೆತ ಆಗ,ನಾನು ಆರು ವರ್ಷದವ
ನಿದ್ದಾಗ, ನನ್ನ ಮೇಲೆ ಬಿತ್ತು. ನಾನು "ಅಮ್ಮ,ಅಪ್ಪ" ಎಂದು
ಕೂಗುತ್ತಲೇ ಇದ್ದೆ. ತಂದೆ ತಾಯಿಯ ಕಡೆಗೆ ವೇಗವೇಗವಾಗಿ
ಹೋಗುತ್ತಿದ್ದ. ಆತ ಆಕೆಯ ಕೈ ಹಿಡಿದುದನ್ನೂ ನಾನು ಕಂಡೆ.
ಮತ್ತೆ ನೀರು ದೇಹದ ನಡುವಿನ ತನಕ ಇಳಿದುದನ್ನೂ ಕಂಡೆ. ಅಂದರೆ
ತಾಯಿ ಮತ್ತು ತಂದೆ ಸುರಕ‍್ಷಿತವಾಗಿ ದಡ ಸೇರುವರೆಂದಾಯಿತು.
"ಅಲ್ಲೇ ನಿಂತ್ಕೋ" ಎಂದು ತಂದೆ ನನಗೆ ಹೇಳುತಿದ್ದ. ನಾನು ಅಲ್ಲೇ
ನಿಂತಿದ್ದೆ. ಅವರು ಮೆಲ್ಲಮೆಲ್ಲನೆ ಬರತೊಡಗಿದರು.

ಇಲ್ಲ, ಅವರಿಬ್ಬರು ದಡಸೇರಲಿಲ್ಲ. ಹೊಸ ನೀರಿನ ಪ್ರವಾಹ
ಹೇಗೆ ಬಂತೋ ನನಗೆ ತಿಳಿಯದು. ಕಣ್ಣು ಮುಚ್ಚಿ ತೆರೆಯುವುದ
ರೊಳಗೆ ತಂದೆ ತಾಯಿ ಇಬ್ಬರೂ ಕೆಳಕ್ಕೆ ತೇಲಿಹೋಗುತ್ತಿದ್ದರು.
ನಾನು ದಂಡೆಯುದ್ದಕ್ಕೂ ತೇಲುತ್ತಿದ್ದವರನ್ನು ನೋಡುತ್ತಾ ಓಡಿದೆ.
ಬಲು ದೂರ ಓಡಿದೆ, ಅಲ್ಲಿ ಮರ ಪೊದೆ ಪೊದರುಗಳು ದಟ್ಟವಾಗಿ
ಬೆಳೆದು ದಂಡೆಯ ಹಾದಿಯನ್ನು ಮರೆಮಾಡಿದ್ದವು. ನಾನು ಸುತ್ತು
ಬಳಸಿ ಓಡಿದೆ.ಮಳೆಸುರಿಯ ತೊಡಗಿತು. ನಾನು ಗಟ್ಟಿಯಾಗಿ
ಅತ್ತೆ. ಅದರೆ ಯಾರು ಉತ್ತರ ಕೊಡಲಿಲ್ಲ. ಬಲು ಹೊತ್ತಿನ
ಮೇಲೆ ಮತ್ತೆ ದಂಡೆ ಕಾಣಿಸಿದಾಗ, ಒಂದು ಬಂಡೆಯ ಮೇಲೆ ನನ್ನ