ಪುಟ:Vimoochane.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ಥಿತಿಯಲ್ಲಿ ಘಂಟೆ ನಿಮಿಷಗಳ ಪರಿಜ್ಞಾನ ಬೇಕಷ್ಟು ಇರಲಿಲ್ಲವೆಂದು ನನಗೆ ಗೊತ್ತಿತ್ತು.

ಅಜ್ಜಿ ತಂದು ಇರಿಸಿದ್ದ ಅನ್ನ ಹುಳಿ ಅಲ್ಲಿದ್ದುವು. ಊಟಕ್ಕೆಂದು ತಂದೆಯನ್ನು ನಾನು ಎಬ್ಬಿಸಿದೆ.

ಕೆಲವು ದಿನಗಳ ಮೇಲೊಮ್ಮೆ ತಂದೆ ಆ ದೊಡ್ಡ ಮನುಷ್ಯರ ವಿಷಯ ಕೇಳಿದ.

"ಅವರ್ನಾದರೂ ಹೋಗಿ ಕೇಳ್ನೋಡ್ಬಾರ್ದ? ನಿನ್ನ ಸ್ಕೂಲ್ ಖರ್ಚಿಗಾದರೂ ಕೊಡ್ಬಹುದು. ನೀನು ಎಲ್ಲಾರು ಒಂದಿಷ್ಟು ಕೆಲಸಾನೂ ನೋಡ್ಕೊಂಡು ಅಜ್ಜಿಗೆ ನಾಲ್ಕು ಬಿಡಿಕಾಸು ತಂದ್ಕೊಟ್ಟೀಯಂತೆ.ನನ್ನ ಯೋಚನೆಬಿಟ್ಬುಡು ಮಗ."

ತನ್ನ ಮನಸಿನಲ್ಲಿದ್ದುದನ್ನೆಲ್ಲಾ ತಂದೆ ಮೆಲ್ಲಮೆಲ್ಲನೆ ಹೊರ ಹಾಕುತ್ತಿದ್ದ. ತಾನು ಬಹಳ ಕಾಲ ಬದುಕುವೆನೆಂಬ ನಂಬಿಕೆಯೇ ಆತನಿಗೆ ಇರಲಿಲ್ಲವೇನೂ. ಆದರೆ ಆತ ವಾಸ್ತವನಾದಿಯಾಗಿದ್ದ. ನನಗೆ ಪರಿಚಿತರಾಗಿದ್ದ ಆ ದೊಡ್ಡ ಮನುಷ್ಯರಿಂದ ನೂರಾರು ರೂಪಾಯಿ ತರುವ ಯೋಚನೆ ಅವನಿಗಿರಲಿಲ್ಲ . ಅವನು ಅಪೇಕ್ಷೆಪಟ್ಟುದು ನನ್ನ ಶಾಲೆಯ ಖರ್ಚಿಗಾಗಿ ಹತ್ತಾರು ರೂಪಾಯಿ.

ನನ್ನ ಅನುಭವವನ್ನು ನಾನು ವಿವರಿಸಿ ಹೇಳಲಿಲ್ಲ. ತಂದೆಗೆ ಸ್ವಲ್ಪವಾದರೂ ನೆಮ್ಮದಿ ಉಳಿಯಲೆಂದು,"ಅವರು ಊರಲ್ಲೆ ಇಲ್ಲ. ಬೊಂಬಾಯಿಗೆ ಹೊರಟುಹೋದರಂತ್ತಪ್ಪಾ" ಎಂದೆ. ಬೊಂಬಾಯಲ್ಲಿ ಏನಿರುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ.ಆದರೆ ದೊಡ್ಡ ಮನುಷ್ಯರು ಹಲವರು ಆ ಊರಿಗೆ ಹೋಗುತ್ತಿರಬಹುದೆಂದು ಊಹಿಸಿದ್ದೆ.

ನನ್ನ ಮಾತು ಕೇಳಿ ತಂದೆ ತಣ್ಣಗಾದೆ.

ನಾನು ಕೆಲಸ ಹುಡುಕಿದೆ. ಹಿಂದಿನ ವರ್ಷ ನನ್ನ ಸಹಪಾಠಿಯಾಗಿದ್ದ ಬಡಹುಡುಗನೊಬ್ಬ ಪತ್ರಿಕೆ ಮಾರುತ್ತಿದ್ದ. ಆದರಿಂದ ಒಮ್ಮೊಮ್ಮೆ ದಿನಕ್ಕೆ ನಾಲ್ಕು ಆರು ಆಣೆಗಳಷ್ಟು ಅವನಿಗೆ ಸಂಪಾದನೆ ಯಾಗುತ್ತಿತ್ತು.<