ಭವತೀ ಕಾತ್ಯಾಯನೀ/೩೮ನೆಯ ಗ್ರಂಥ/೩ ನೆಯಪ್ರಕರಣ

ವಿಕಿಸೋರ್ಸ್ದಿಂದ

19

೩ ನೆಯಪ್ರಕರಣ.

ಸ್ವಾರ್ಥಪರಿತ್ಯಾಗೇಚ್ಛೆ!

ನಿರ್ಮಲಾಂತಃಕರಣದ ಪ್ರಭಾವವೇ ವಿಲಕ್ಷಣವಾದದ್ದು. ಶುದ್ಧಾಂತಃಕರಣವನು

ಶುಭ್ರವಾದ ಗಂಜಿಯ ಅರಿವೆಗೆ ಹೋಲಿಸಬಹುದು. ಗಂಜಿಯ ಅರಿವೆಯ ಮೇಲೆ ಮೂಡಿದ ಬಣ್ಣವು ವ್ಯಕ್ತವಾಗಿ ತೋರುವಂತೆ, ಶುದ್ಧಾಂತಃಕರಣದಲ್ಲಿ ಮೂಡಿದ ವಿಕಾರ ಗಳು ವ್ಯಕ್ತವಾಗಿ ತೋರುವವು; ಇದಲ್ಲದೆ ಅವು ಅನುಕೂಲ ಪರಿಸ್ಥಿತಿಯಲ್ಲಿ ಉತ್ತರೋ ತ್ತರ ವೃದ್ಧಿಂಗತವಾಗುತ್ತಲೂ ಹೋಗುವವು. ಅದರಂತೆ, ಕಾತ್ಯಾಯನಿಯ ಶುದ್ಧಾಂತಃ ಕರಣದಲ್ಲಿ ಮೂಡಿದ ಮೈತ್ರೇಯಿಯ ವಿಷಯದ ಪ್ರೇಮವೆಂಬ ವಿಕಾರವು, ಮೈತ್ರೇಯಿಯ ಘನತರವಾದ ಯೋಗ್ಯತೆಯ ಅನುಕೂಲಪರಿಸ್ಥಿತಿಯಲ್ಲಿ ಅಭಿವೃದ್ಧವಾಗುತ್ತ ಹೋಯಿತು. ಆಕೆಯು ಮೈತ್ರೇಯಿಯನ್ನು ಕಾಣಲಿಕ್ಕೆ ಮೇಲೆ ಮೇಲೆ ಹೋಗಹತ್ತಿದಳು. ಬರಬರುತ ಆಕೆಯ ವಿಯೋಗದ ಕಲ್ಪನೆಯಿಂದ ಕಾತ್ಯಾಯನಿಯ ಹೃದಯವು ಕಂಪಿಸ ಹತ್ತಿತು. ದಿನದಂತೆ ಕಾತ್ಯಾಯನಿಯು ಮೈತ್ರೇಯಿಯನ್ನು ಕಾಣಲಿಕ್ಕೆ ಹೋದಾಗ, ಆ ಮಾತು ಈಮಾತು ಹೊರಟು ಕಡೆಗೆ ಕಾತ್ಯಾಯನಿಯು ಮೈತ್ರೇಯಿಯನ್ನು ಕುರಿತು-

ಕಾತ್ಯಾಯನಿ--ತಂಗೀ, ಮೈತ್ರೇಯಿಾ, ನಿನ್ನ ಲಗ್ನವಾದಬಳಿಕ ನೀನು ಇಲ್ಲಿ ಯಾಕೆ

ಇರುವೆ ? ನಿನ್ನ ವಿಯೋಗವು ನನಗೆ ಹ್ಯಾಗೆ ಸಹನವಾದೀತೆಂಬ ಚಿಂತೆಯು ಈಗಿನಿಂದಲೇ ಹಗಲು-ರಾತ್ರಿ ನನ್ನನ್ನು ಬಾಧಿಸಹತ್ತಿದೆ. ಇನ್ನು ನಿನ್ನ ಲಗ್ನದಕಾಲವು ಸಮೀಪಿಸಿತೆಂದು ಹೇಳಬಹುದು ! ನನ್ನ ಪ್ರತಿ ಒಬ್ಬ ತಂಗಿಯ ವಿವಾಹವೆಂದರೆ, ನನ್ನ ಮನಸ್ಸಿಗೆ ವಿಯೋಗ ದುಃಖವು ಎಷ್ಟರಮಟ್ಟಿಗೆ ಆಗುವದೆಂಬದನ್ನು ಪರೀಕ್ಷಿಸುವ ಒರೆಗಲ್ಲಾಗಿರುತ್ತದೆ. ಆ ನನ್ನ ತಂಗಿಯರ ವಿಯೋಗದ ದುಃಖವನ್ನು ಈಗೀಗ ನಾನು ಸ್ವಲ್ಪ ಮರೆಯುತ್ತಿರಲು, ಪುನಃ ನಿನ್ನ ವಿಯೋಗದುಃಖವನ್ನು ಅನುಭವಿಸುವ ಪ್ರಸಂಗವು ಬಂದೊದಗಿರುತ್ತದೆ. ಈವರೆಗೆ ನಾನು ಅನುಭವಿಸಿದ ವಿಯೋಗದುಃಖಗಳನ್ನೆಲ್ಲ, ನಿನ್ನ ಸಂಬಂಧದ ವಿಯೋಗ ದುಃಖವು ಮೀರುವಹಾಗೆ ತೋರುತ್ತದೆ.

ಈಮೇರೆಗೆ ನುಡಿಯುವಾಗ ಕಾತ್ಯಾಯನಿಯಕಣ್ಣೊಳಗಿಂದ ಬಳ ಬಳ ನೀರು ಸುರಿ

ಯಹತ್ತಿದವು. ಆಕೆಯು ಅತ್ಯಂತ ಪ್ರೇಮದಿಂದ ಮೈತ್ರೇಯಿಯನ್ನು ನೋಡಹತ್ತಿದಳು. ಆಗಿನ ಆ ಕರುಣಾಮೂರ್ತಿಯ ನಿರ್ಮಲ ಸ್ವರೂಪವನ್ನು ನೋಡಿ ಮೈತ್ರೇಯಿಯ ಮನಸ್ಸೂ ಕರಗಿ ಆಕೆಯ ನೇತ್ರಗಳೂ ಅಶ್ರುಪೂರ್ಣವಾದವು. ಸಹೃದಯರ ಹೃದಯ ಗಳ ಚಾರಿತ್ರ್ಯದ ಮಹಿಮೆಯೇ ಅಂತಹದು. ಅವರು ಕಲ್ಲನ್ನು ಕೂಡ ಕರಗಿಸಬ ಲ್ಲರು. ಹೀಗೆ ಕಾತ್ಯಾಯನೀ-ಮೈತ್ರೇಯಿಯರಿಬ್ಬರೂ ಅಕೃತ್ರಿಮ ಪ್ರೇಮದಿಂದ ಒಬ್ಬ ರನ್ನೊಬ್ಬರು ನೋಡುತ್ತಿರುವಾಗ, ಮೈತ್ರೇಯಿಯು ಕಾತ್ಯಾಯನಿಯನ್ನು ಕುರಿತು-

ಮೈತ್ರೇಯಿ-ಅಕ್ಕಾ, ನಿನ್ನ ಹೃದಯವು ಎಷ್ಟು ಕೋಮಲವಮ್ಮಾ, ನಿನ್ನ ಮನಸ್ಸಿನ

ನೈರ್ಮಲ್ಯವಾದರೂ ಎಷ್ಟಿರುವದದು ? ಗೆಳತೀ, ಕಾತ್ಯಾಯನೀ, ನನ್ನ ವಿಯೋಗಕ್ಕಾಗಿ ನೀನು ಸರ್ವಥಾ ದುಃಖಿಸಬೇಡ ಕಂಡೆಯಾ ! ನಮ್ಮಿಬ್ಬರ ವಿಯೋಗವು ಎಂದಿಗೂ ಆಗ ಲಾರದು. ಇನ್ನಾದರೂ ನಿನಗೆ ಸಮಾಧಾನವಾಗಬಹುದಲ್ಲವೆ ?

ಕಾತ್ಯಾಯನಿ--" ವಿಯೋಗವಾಗಲಾರದು ! ಈ ನಿನ್ನ ಮಾತಿನ ಅರ್ಥವೇನು?

ಇಲ್ಲಿಯೇ ಎಲ್ಲಿಯಾದರೂ ಸಮೀಪದಲ್ಲಿ ನಿನ್ನನ್ನು ಕೊಟ್ಟರೆ, ಮೇಲೆಮೇಲೆ ನಾನುನಿನ್ನನ್ನು ಕಾಣಬಹುದೆಂಬದು ನಿ ಜ ವು; ಆದರೆ ನಿನ್ನ ಅತಿ ಯಮನೆಯು ಸಮೀಪದಲ್ಲಿಯೇ ದೊರೆಯುವದೆಂದು ಯಾರು ಹೇಳಬೇಕು ? ಪ್ರಶಸ್ತ ಮನೆತನ ನೋಡಿ ನಿನ್ನನು ಕೊಡಬೇಕಾಗುತ್ತದೆ.”

ಮೈತ್ರೇಯಿ-ನಾನು ಲಗ್ನ ಮಾಡಿಕೊಳ್ಳುವೆನೆಂದಾದರೂ ನೀನು ಯಾತರ ಮೇಲಿಂದ ಹೇಳುತ್ತೀ ?

ಕಾತ್ಯಾಯನಿ-- ಏನಂದಿ ? ನೀನು ಲಗ್ನ ಮಾಡಿಕೊಳ್ಳುವದಿಲ್ಲವೆ ? ಅವಿವಾಹಿತ

೪ಾಗಿಯೇ ಇರುವೆಯಾ ? ಅವ್ವಯ್ಯಾ,ಸಖೀ, ಮೈತ್ರೇಯಿಾ, ಸ್ತ್ರೀಯರು ಅವಿವಾಹಿತ ರಾಗಿ ಇರುವ ಕಲ್ಪನೆಯೇ ನನಗೆ ವಿಲಕ್ಷಣವಾಗಿ ತೋರುತ್ತದೆ. ಅದರಲ್ಲಿ ನಿನ್ನಂಥವಳ ಪಾಣಿಗ್ರಹಣಕ್ಕೆ ಯಾರು ಆತುರಪಡಲಿಕ್ಕಿಲ್ಲ ? ತಂಗೀ, ನಿನ್ನಂಥವರು ಹಾದಿಯಲ್ಲಿ ಬಿದ್ದಿರು

ವರೇ ? ಮನೆಮನೆಗೆ ಒಟ್ಟಿರುವರೇ ?

20

ಮೈತ್ರೇಯಿ--ನನ್ನ ಪಾಣಿಗ್ರಹಣಕ್ಕೆ ಬಹುಜನರು ಸಿದ್ದರಾಗಿರಬಹುದು; ಆದರೆ

ಅವರಲ್ಲಿ ಯಾರೂ ನನ್ನ ಮನಸ್ಸಿಗೆ ಬಾರದಿದ್ದರೆ ?

ಕಾತ್ಯಾಯನಿ--ಹಾಗಾದರೆ ನೀನು ಅವಿವಾಹಿತಳಾಗಿಯೇ ಇರುವವಳೇನು ? ಸೇರ

ದಮ್ಮಾ ನನಗೆ ಈ ನಡತೆ ! ಸಂಸಾರವೇ ಸ್ತ್ರೀಯರ ಕರ್ತವ್ಯವೆಂದು ನನಗೆ ಯಾವಾಗಲೂ ತೋರುತ್ತದೆ. ನಿರಾಶ್ರಿತರಾಗಿ ಹೆಂಗಸರು ಇರಬಹುದೆ? ಹಾಗೆ ಇದ್ದರೆ ಚಂದಕಾಣಬಹುದೆ?

ಮೈತ್ರೇಯಿ-ಸಖೀ,ನಿನ್ನ ಮಾತನ್ನು ನಾನು ಅಲ್ಲಗಳೆಯುವದಿಲ್ಲ. ಸ್ತ್ರೀ

ಯರು ಬ್ರಹ್ಮಚರ್ಯದಿಂದಿರುವದು ಸುಲಭವಲ್ಲ. ಇದ್ದರೆ ಚಂದವೂ ಕಾಣುವದಿಲ್ಲ. ಅಂತೇ ಸ್ತ್ರೀಯರು ಬ್ರಹ್ಮಚರ್ಯದಿಂದಿರುವದು ತೀರಕಡಿಮೆ;ಆದರೆ ಸಂಸಾರವು ಕೇವಲ ಸ್ತ್ರೀಯರ ಸಲುವಾಗಿಯೇಯಿರುತ್ತವೆಂಬಮಾತು ನನಗೆ ಒಪ್ಪಿಗೆಯಾಗಿರುವದಿಲ್ಲ. ಅದು ಸ್ತ್ರೀಯರ ಸಲುವಾಗಿ ಇರುವಂತೆ ಪುರುಷರ ಸಲುವಾಗಿಯೂ ಇರುತ್ತದೆ. ಸ್ತ್ರೀ-ಪುರುಷ ರಿಬ್ಬರಿಗೂ ಸಂಸಾರವು ಸಂಬಂಧಿಸಿರುವುದು. ಗೃಹಕೃತ್ಯವು ಕೇವಲ ಸ್ತ್ರೀಯರದೇ ಎಂದು ಮುಖ್ಯವಾಗಿ ಪುರುಷರು ತಿಳಿದು ನಡೆಯುತ್ತಿರುವದರಿಂದ, ಗೃಹಕೃತ್ಯದಹೊರತು ಸ್ತ್ರೀಯರು ಬೇರೆ ಏನೂ ಮಾಡತಕ್ಕವದಿಲ್ಲವೆಂದು ಎಲ್ಲರೂ ತಿಳಿದಿರುವರು.

ಕಾತ್ಯಾಯನಿ-ಗೃಹಕೃತ್ಯದ ಹೊರತು ನಾವು ಹೆಂಗಸರು ಬೇರೆ ಏನು ಕೆಲಸ

ಮಾಡಬೇಕಾಗಿರುವದು ? ಪಾರಮಾರ್ಥಿಕವಿಚಾರವೆ? ಆಗಲಿ.ಸಂಸಾರಕೃತ್ಯಗಳಲ್ಲಿ ಪಾರ ಮಾರ್ಥಿಕ ಸಂಗತಿಗಳು ಪೋಣಿಸಲ್ಪಟ್ಟೇಇರುವವಲ್ಲ  ? ಯಜ್ಞ-ಯಾಗಗಳಲ್ಲಿ ಪತಿಗೆ ಸಹಾಯ ಮಾಡುವದು, ಈಶಸ್ತವನ, ಜಪ, ತಪ ಮೊದಲಾದವುಗಳು ಪಾರಮಾರ್ಥಿಕ ಸಂಗತಿಗಳಲ್ಲದೆ ಮತ್ತೇನು ? ಇವೆಲ್ಲ ಕೆಲಸಗಳನ್ನು ವಿವಾಹಿತ ಸ್ತ್ರೀಯು ಮಾಡಲೇಬೇ ಕಾಗುವದು. ಅಂದಬಳಿಕ ಸಂಸಾರಕೃತ್ಯಗಳೊಡನೆ ಆಕೆಯು ಪಾರಮಾರ್ಥಿಕ ವಿಚಾರ ವನ್ನೂ ಮಾಡಿದಹಾಗಾಗುವದಿಲ್ಲವೊ ? ಪತಿಯು ದೈವವೆಂದು ತಿಳಿದು ನಡೆಯುವದ ರಿಂದಲೇ ಸತಿಗೆ ಸದ್ಗತಿಯಾಗುವದವಲ್ಲವೆ?

ಮೈತ್ರೇಯಿ--ನೀನಾಡುವದು ಸರಿಯಾದದ್ದು; ಇವುಗಳ ಹೊರತು ಸ್ತ್ರೀಯರ

ಕರ್ತವ್ಯವೇನೂ ಇರುವುದಿಲ್ಲವೆ? ಆತ್ಮಜ್ಞಾನವನ್ನು ಪಡೆಯುವದು ಸ್ತ್ರೀಯರ ಮಹತ್ವದ ಕರ್ತವ್ಯವೆಂದು ನಿನಗೆ ತೋರುವದಿಲ್ಲವೆ ?

ಕಾತ್ಯಾಯನಿ--ತೋರುವುದು ನಿಜವು , ಆದರೆ ಈ ಕೆಲಸವು ವಿದ್ವಾಂಸರದು,

ನಮ್ಮ೦ಥ ಹೆಂಗಸರದ್ದಲ್ಲ. ಈಗ ವಿದುಷಿಯರಾದ ಸ್ತ್ರೀಯರು ಎಷ್ಟು ಜನರಿರುವರು ? ನಿನ್ನ ಅಬಚಿಯಾದ ಗಾರ್ಗಿಯಂತ ಬುದ್ಧಿವೈಭವವೂ, ಕಾಲಾನುಕೂಲವೂ ಉಳ್ಳ ಸ್ತ್ರೀ ಯರೇ ಆತ್ಮಜ್ಞಾನಪ್ರಾಪ್ತಿಗಾಗಿ ಪ್ರಯತ್ನ ಮಾಡುವರು; ಆದರೆ ಇಂಥ ಸ್ತ್ರೀಯರು ಒಟ್ಟಿ ನಲ್ಲಿ ಬಹು ಸ್ವಲ್ಪ ಜನವಾದ್ದರಿಂದ, ಆತ್ಮಜ್ಞಾನದ ಕೆಲಸವು ಮುಖ್ಯವಾಗಿ ಪುರುಷರದಾ ಗಿರುವದು.ನಾವು ಆ ಕೆಲಸಕ್ಕೆ ತಕ್ಕವರಲ್ಲ.

ಮೈತ್ರೇಯಿ--ನಿನ್ನ ಮಾತನ್ನು ಕೇಳಿ ನನಗೊಂದು

ಕಾತ್ಯಾಯನಿ--ನಾನಂತು ಕಥೆಯ ಭಕ್ತಳು. ನನಗೆ ಆ ಕಥೆಯನ್ನು ಹೇಳು.



21

ಮೈತ್ರೇಯಿ--ನಾನು ಹೇಳುವದು ಕಥೆಯಂತೂ ಸರಿಯೆ; ಆದರೆ ಅದು ಬಹು

ಮಹತ್ವದ್ದಾಗಿರುವದು. ಆ ಕಥೆಯು ಕೇವಲ ಮನೋರಂಜನಕ್ಕಾಗಿ ಕೇಳತಕ್ಕದ್ದಲ್ಲ. ಅದರ ರಹಸ್ಯವನ್ನು ಚನ್ನಾಗಿ ವಿಚಾರಿಸತಕ್ಕದು . ಇಂಥ ಕಥೆಗಳನ್ನು ಕೇಳಿ ಆನಂ ದಪಡುವದಕ್ಕಿಂತ, ಅವುಗಳೊಳಗಿನ ಮೂಲತತ್ವವನ್ನು ನೆನಪಿನಲ್ಲಿಟ್ಟು ಅದರಂತೆ ನಡೆ ಯುವದು ಹಿತಕರವಾಗಿರುವದು.

ಕಾತ್ಯಾಯನಿ -ದಾಗಿಯೇ ಆಗಲಿ, ನಿನ್ನ ಕಥೆಯು ಬೋಧಪ್ರದವಾಗಿದರೂ

'ಚಿಂತೆಯಿಲ್ಲ. ಹೇಳು, ನಾನು ಮನಸ್ಸುಗೊಟ್ಟು ಕೇಳುವೆನು . ಮೈತ್ರೇಯಿ, ನನಗೆ ಎಷ್ಟು ಕಥೆ ಕೇಳಿದರೂ ಬೇಸರವಿಲ್ಲ ನೋಡು ! ಕಥೆ ದೊಡ್ಡದಿದ್ದಷ್ಟುಟ ಸಂತೋಷ !

ಮೈತ್ರೇಯಿ-ಒಳ್ಳೆದು, ಬೀಳುತ್ತೇನೆ ಕೇಳು. ಒಂದು ಪೂರ್ಣ ಗರ್ಭಿಣಿ

ಯಾದ ಸಿಂಹವು ಹಸಿವೆಯಿಂದ ವ್ಯಾಕುಲವಾಗಿ ಆಹಾರ ಹುಡುಕಲಿಕ್ಕೆ ತನ್ನ ಗವಿಯಿಂದ ಹೊರಬಿದ್ದಿತು. ಅದು ದೂರ ಹೋಗುವದರೊಳಗೆ ಒಂದು ಕುರಿಯ ಹಿಂಡು ಮೇಯುತ್ತಿ ರುವದು ಅವರ ಕಣ್ಣಿಗೆ ಬಿದ್ದಿತು. ಸಿಂಹವು ಸರಾಸರಿ ಹಿಂಡಿನ ಸನಿಯಕ್ಕೆ ಹೋಗಿ ಒಂದು ಕುರಿಯ ಮೇಲೆ ಜಿಗಿಯಲು ಜಪ್ಪುಹಾಕಿತು. ಹಸಿವೆಯು ಬಹಳವಾದದ್ದರಿಂದಲೂ, ತನ್ನ ಮಾಕ್ರಮದ ವಿಷಯವಾಗಿ ಅದಕ್ಕೆ ನಂದಿಗೆಯು ವಿಶೇಷವಾಗಿದ್ದ್ದದರಿಂದಲೂ ಆ ಸಿಂಹವು ಅಷ್ಟು ದೂರದಿಂದಲೇ ಕುರಿಯ ಮೇಲೆ ಹಾರಿತು; ಆದರೆ ಪೂರ್ಣ ಗರ್ಭಿಣಿ ಯಿದ್ದದ್ದರಿಂದ ಜಿಗಿತವು ತಪ್ಪಿ ಅದು ಕಸುವಿನಿಂದ ನೆಲಕ್ಕೆ ಅಪ್ಪಳಿಸಿತು. ಆದ್ದರಿಂದ ಹೊಟ್ಟೆಯೊಳಗಿನ ಗಂಡುಮುರಿಯು ಹೊರಬಿದ್ದು, ಸಿಂಹವು ಮರಣಹೊಂದಿತು. ತನ್ನ ಮರಿಯ ಮೋಹಪಾಶದಲ್ಲಿ ಸಿಕ್ಕಿಕೊಳ್ಳಲಿಕ್ಕೆ ಆ ಸಿಂಹವು ಬದುಕಿಉಳಿಯಲಿಲ್ಲ.

ಕಾತ್ಯಾಯನಿ--ಇದೇನೇ ಮೈತ್ರೇಯಿ, ಮಕ್ಕಳ ಮೋಹವು ನಿನಗೆ ಪಾಶವಾಗಿ

ತೋರುವದೆ? ತಮ್ಮ ಮಕಳು ತಮ್ಮ ಸುತ್ತು ಮುತ್ತು ಆಡುತ್ತಿರುವಾಗ ಆಗುವ ಆನಂ ದವು ಸ್ವರ್ಗದಲ್ಲಿಯಾದರೂ ದೊರೆಯಬಹುದೆ? ತಾಯಿಯ ಕರಳು ಹ್ಯಾಗಿರುತ್ತದೆಂಬುದು ಮಕ್ಕಳ ತಾಯಂದಿರಾದವರಿಗಲ್ಲದೆ ಅನ್ಯರಿಗೆ ತಿಳಿಯುವದಿಲ್ಲೆಂಬ ಮಾತು ಸುಳ್ಳಲ್ಲ. ಹಾಗ ಲ್ಲದಿದ್ದರೆ ಹುಚ್ಚಿಯ ಹಾಗೆ ನೀನು ಹೀಗೆ ಅನ್ನುತ್ತಿದಿಲ್ಲ. ಮಕ್ಕಳನ್ನು ಹೀಗೆ ನಿರಾ ಕರಿಸಬಾರದಮ್ಮಾ! ಮಕ್ಕಳ ತಾಯಂದಿರಾಗಲಿಕ್ಕೆ ಪುಣ್ಯಬೇಕು !

ಮೈತ್ರೇಯಿ -- ಅದೇನೇ ಇರಲಿ ; ಮಕ್ಕಳೇನು ಜೀವಕ್ಕೆ ಮುಕ್ಕಳೋ, ಅವು

ಮೊಹಪಾಶವಾಗಿರುವವೋ, ಅವುಗಳಿಂದ ಮೋಕ್ಷವು ಸಾಧಿಸುವದೋ? ಎಂಬದನ್ನು ಹಿಂದುಗಡೆ ನೋಡೋಣವಂತೆ ; ಸದ್ಯಕ್ಕೆ ಕಥೆಯನ್ನಂಶು ಕೇಳು.

ಕಾತ್ಯಾಯನಿ -- ಹಾಗೆ ಆಗಲಿ ಹೇಳು , ದುರ್ದೈವಿಯಾದ ಆ ಹೆಣ್ಣು ಸಿಂಹವು

ತನ್ನ ಮರಿಯ ಲಾಲನ-ಪಾನವ, ಹಾಗು ಬಾಲಕ್ರೀಡೆಯ ಸುಖವನ್ನು ಅನುಭವಿಸು ಪದಕ್ಕಾಗಿ ಬದುಕಿ ಉಳಿಯಲಿಲ್ಲ. ಹು ಮುಂದೇನಾಯಿತು ?

ಮೈತ್ರೇಯಿ (ನಕ್ಕು) – ಒಳ್ಳೇದು , ನೀನುದಂತೆಯೇ ಆಗಲಿ, ಆ ಹಿಂದಿ

22

ನಲ್ಲಿ ಕುರಿಗಳು ಬಹಳ ಇದ್ದವು , ಆ ಪರದೇಶಿಮರಿಯನ್ನು ನೋಡಿ ಅವಕ್ಕೆ ದಯವು ಉತ್ಪನ್ನವಾಯಿತು ; ಆದ್ದರಿಂದ ಅನಾಥವಾದ ಆ ಮರಿಯನ್ನು ಸಂರಕ್ಷಿಸುವ ಇಚ್ಛಯು ಅವಕ್ಕೆ ಆಯಿತು .

ಕಾತ್ಯಾಯನಿ (ನಡುವೇ ಬಾಯಿಹಾಕಿ)- ಪಾಪ! ಇಚ್ಛೆಯಾಗದೇನು ಮಾಡೀ

ತು. ಮಕ್ಕಳ ತಾಯಂದಿರ ಅನುಭವವು ಆ ಕುರಿಗಳಿಗಿದ್ದಬಳಿಕ ಪರದೇಶಿಕೂಸಿನಸಂರ ಕ್ಷಣ ಮಾಡದೆ ಅವು ಯಾಕೆ ಬಿಟ್ಟಾವು ? ಹು ಮುಂದೆ ಹೇಳು.

ಮೈತ್ರೇಯಿ-- ಬಳಿಕ ಕುರಿಗಳು ಸಿಂಹದ ಆ ಗಂಡುಮರಿಯನ್ನು ತಕ್ಕೊಂಡು

ಹೋಗಿ ಅದರ ಸಂಗೋಪನ ಮಾಡತೊಡಗಿದವು . ಆಡು-ಕುರಿಗಳು ತಿನ್ನುವ ಪದಾ ರ್ಥಗಳನ್ನೇ ಆ ಸಿಂಹದ ಮರಿಯು ತಿನ್ನತೊಡಗಿತು , ಕುರಿಗಳು ಕುಡಿಯುವ ನೀರನ್ನೇ ಅದು ಕುಡಿಯಹತ್ತಿತು. ಅದು ಯಾವಾಗಲೂ ಕುರಿಗಳ ಸಹವಾಸದಲ್ಲಿದ್ದು, ಅವುಗ ಳೊಡನೆ "ಬ್ಯಾ ಬ್ಯಾ” ಎಂದು ಕೂಗುತ್ತ ಓಡಾಡುತ್ತಿತ್ತು. ಹೀಗೆ ಆಕುರಿಗಳ ಸಹ ವಾಸದಿಂದ ಸಿಂಹದ ಮರಿಗೆ -- " ನಾನು ಕುರಿಯೇ ಇರುತ್ತೇನೆಂಬ ಭ್ರಾಂತಿಯು ಉತ್ಪನ್ನವಾಯಿತು. ಅದಕ್ಕೆ ತನ್ನ ನಿಜವಾದ ಸ್ವರೂಪದ ವಿಸ್ಮೃತಿಯು ಪೂರ್ಣ ವಾಗಿ ಆಗಿಹೋಯಿತು. ಸಿಂಹಾದಿ ಮೃಗಗಳನ್ನು ನೋಡಿದ ಕೂಡಲೆ ಬಾಯಲ್ಲಿ ಎಸ ರುಇಲ್ಲದಂತೆ ಕುರಿಗಳು ಓಡುವಾಗ, ಆ ಸಿಂಹದ ಮರಿಯು ತಾನೂ ಅವುಗಳ ಸಂಗಡ ಓಡಿಹೋಗುತ್ತಿತ್ತು . ಶತ್ರುವಿನೊಡನೆ ಕಾದಿ ತನ್ನ ಪ್ರತಾಪವನ್ನು ತೋರಿಸುವ ಅದರ ಜನ್ಮಸ್ವಭಾವದ ವಿಸ್ಮೃತಿಯು ಅದಕ್ಕೆ ಪೂರ್ಣವಾಗಿ ಆಗಿಹೋಯಿತು . ಒಟ್ಟಿಗೆ ಹೇಳತಕ್ಕದ್ದೇನಂದರೆ, ಅದರ ಆತ್ಮಸ್ವರೂಪದ ಸುತ್ತಲು ಅಜ್ಞಾನದ ಮುತ್ತಿಗೆಯು ಬಿದ್ದು , ನಾನು ಎಲ್ಲ ಬಗೆಯಿಂದಲೂ ಕುರಿಯೇ ಇರುತ್ತೇನೆಂದು ಅದು ತಿಳಿದುಕೊಂಡಿತು.

ಕಾತ್ಯಾಯನಿ (ನಡುವೆ ಆತುರದಿಂದ) -- ಛೀ ಛೀ! ಮೈತ್ರೇಯಿಾ , ವನರಾಜ

ನೆನಿಸುವ ಸಿಂಹವು ಕ್ಷುದ್ರಪ್ರಾಣಿಯಾದ ಕುರಿಯಾಗಿ ಹೋಯಿತಲ್ಲ! ಪಾಪ, ಅದರ ತಾಯಿಯಾದರೂ ಯಾಕೆ ಸತ್ತಿದ್ದೀತೇ ? ಆ ಮರಿಯು ಬಲು ದೈವಗೇಡಿಯು ! ಸಖೀ , ಕಡೆಗೂ ಆ ಸಿಂಹದ ಮರಿಗೆ ತಾನು ಸಿಂಹನೆಂಬ ಅರಿವು ಆಗಲೇ ಇಲ್ಲವೇನು ? ಅದು ಕುರಿಯಾಗಿ ಹೋಯಿತೆ ?

ಮೈತ್ರೇಯಿ-- ಅಕ್ಕಾ, ಸ್ವಲ್ಪ ಸಮಾಧಾನತಾಳು. ಎಷ್ಟಾದರೂ ಅದು

ಸಿಂಹವಲ್ಲವೆ ? ಅದು ಕುರಿಯು ಹ್ಯಾಗಾದೀತು ? ನನ್ನ ಕಥೆಯನ್ನು ಪೂರ್ಣವಾಗಿ ಕೇಳು, ಅಂದರೆ ಎಲ್ಲಾ ನಿನಗೆ ತಿಳಿಯುವದು . ಒಂದು ದಿನ ಆ ಕುರಿಯ ಹಿಂಡು ಆ ಸಿಂಹದ ಮರಿಯೊಡನೆ ಒಂದು ಹಳ್ಳದಲ್ಲಿ ನೀರು ಕುಡಿಯುತಿ ತ್ತು. ಅಷ್ಟರಲ್ಲಿ ವಿಶಾಲ ದೇಹಿಯಾದ ಒಂದು ಸಿಂಹವೂ ನೀರು ಕುಡಿಯುವದಕ್ಕಾಗಿ ಅದೇ ಹಳ್ಳಕ್ಕೆ ಬಂದಿತು . ಸಿಂಹವು ನೀರು ಕುಡಿಯುತ್ತಿದ್ದಲ್ಲಿಂದ ಅದಕ್ಕೆ ಕುರಿಗಳ ಹಿಂಡು ಕಾಣುತಿ ತ್ತು; ಕುರಿಗ

ಳಿಗೆ ಮಾತ್ರ ಸಿ೦ಹವು ಕಾಣುತ್ತಿದ್ದಿಲ್ಲ. ಕುರಿಗಳ ಹಿಂಡಿನಲ್ಲಿ ಸಿಂಹದ ಮರಿಯು ನೀರು ಕುಡಿಯುತ್ತಿರುವದನ್ನು ನೋಡಿ ಆ ಸಿಂಹಕ್ಕೆ ಬಹಳ ಆಶ್ಚರ್ಯವಾಯಿತು. ಅದು

23

ತನ್ನೊಳಗೆ-- “ ಇದೇನಾಶ್ಚರ್ಯವು ! ಕುರಿಯ ಹಿಂಡಿನಲ್ಲಿ ಸಿಂಹದ ಮರಿಯೇ ! ಈ ಮರಿಯು ಜಪ್ಪು ಹಾಕಿ ಕುರಿಗಳನ್ನು ಹಿಡಿಯುತ್ತದೆನ್ನಬೇಕೆಂದರೆ ಹಾಗೇನು ಕಾಣು ವದಿಲ್ಲ ! ಕುರಿಗಳನ್ನು ಹಿಡಿಯುವದಂತು ಇರಲಿ , ತಾನೂ ಕುರಿಗಳಂತೆ "ಬೇ ಬೇ ಬೇ ” ಎಂದು ಒದರುತ್ತದಲ್ಲ ಎಂದು ಅಂದುಕೊಂಡು, ಬಹಳ ಅಸಮಾಧಾನಪಟ್ಟಿತು. ಅದು ಸಿಂಹದಮರಿಗೆ ಎರಡು ಮಾತು ಹೇಳಿನೋಡಬೇಕೆಂದು ಮುಂದಕ್ಕೆ ಬರಲು , ಅದನ್ನು ನೋಡಿ ಕುರಿಗಳೆಲ್ಲ ದೆಸೆಗೆಟ್ಟು ಓಡತೊಡಗಿದವು. ಅವುಗಳ ಸಂಗಡ ಸಿಂಹದ ಮರಿಯ ಓಡತೊಡಗಿತು.

ಕಾತ್ಯಾಯನಿ (ಆತುರದಿಂದ) -- ಅಯ್ಯೋ ! ಎಂಥ ದುರ್ದೈವಿಯದು ! ತನ್ನನ್ನು

ಎಚ್ಚರಗೊಳಿಸಿ ಹಿತಮಾಡಬಂದ ಸಿಂಹನನ್ನು ತಿಳಿಯದೆ ಹೋಯಿತಲ್ಲ , ಮುಂದೆ ಗತಿಯೇನು ?

ಮೈತ್ರೇಯಿ -- ಸಖೀ , ಸ್ವಲ್ಪ ಸಮಾಧಾನತಾಳಿ ಕಥೆಯನ್ನು ಪೂರ್ಣವಾಗಿ

ಯಾದರೂ ಕೇಳು. ಸ್ವಜಾತಿಯ ಪ್ರಾಣಿಯು ಸ್ವಜಾತಿಯ ಪ್ರಾಣಿಗೆ ಬೆನ್ನು ತೋರಿಸಿ ಓಡಿಹೋಗುವದನ್ನು ನೋಡಿ ಸಿಂಹವು ಬಹಳ ವ್ಯಸನಪಟ್ಟಿತು. "ಇದಕ್ಕೆ ಮೂಲ ಸ್ವರೂಪದ ವಿಸ್ಕೃತಿಯು ಇನ್ನು ಯಾಕಾಗಿರಬಹುದೆಂ"ಬದರ ಗೊತ್ತು ಆ ಸಿಂಹಕ್ಕೆ ಆಗಲೊಲ್ಲದು . "ಈಗ ಓಡಿಹೋಗಲಿ, ಇನ್ನೊಮ್ಮೆ ಇದನ್ನು ಏಕಾಂತದಲ್ಲಿ ಕಂಡು ಎಚ್ಚರಗೊಳಿಸೋಣ , ” ಎಂದು ಯೋಚಿಸಿ ಸಿಂಹವು ಅದನ್ನು ಆಗ ಸುಮ್ಮನೆ ಹೋಗ ಗೊಟ್ಟಿತು. ಮುಂದೆ ಹೊತ್ತು ಸಾಧಿಸಿ ಆ ಮರಿಯು ಒಂದೇ ಇದ್ದಾಗ ಅದಕ್ಕೆ ಸಿಂಹವು ಗಂಟುಬಿದ್ದಿತು . ಏಕಾಂತದಲ್ಲಿ ಆ ಭಯಂಕರ ಸಿಂಹವನ್ನು ನೋಡಿ ಸಿಂಹದ ಮರಿಯು ಗಡಗಡನೆ ನಡುಗಹತ್ತಿತು , ಅದು "ಬೇ ಬೇ” ಎಂದು ಒದರುತ್ತ ದೀನ ವಾಣಿಯಿಂದ ಸಿಂಹನನ್ನು ಕುರಿತು -=“ಮಹಾರಾಜ , ನೀವು ದೊಡ್ಡವರು , ಉದಾರ ಸ್ವಭಾವದವರು ; ನಾನೊಂದು ಕ್ಷುದ್ರ ಕುರಿಯವರಿಯು; ನನ್ನಂಥವನನ್ನು ಕೊಲ್ಲು ವದರಿಂದ ನಿಮಗಾಗುವ ಲಾಭವೇನು ? ಎಂದು ನುಡಿಯಲು, ಅದನ್ನು ಕೇಳಿ ಸಿಂಹಕ್ಕ ಬಹಳ ವ್ಯಸನವಾಯಿತು. ಅದು ಮರಿಗೆ-- "ತಮ್ಮಾ, ನಾನು ದೊಡ್ಡವನು , ನೀನು ಸಣ್ಣವನು ; ಶಕ್ತಿಯ ಮಾನದಿಂನ ನನಗಿಂತ ನೀನು ದುರ್ಬಲನೆಂದು ಹೇಳಬ ಹುದು ; ಆದರೆ ನಾನು ಸಿಂಹನೇ ಅಲ್ಲ , ಹೊಲಸುಜಾತಿಯ ಕುರಿಮರಿಯಿರುತ್ತೇನೆಂಬ ತಿಳುವಳಿಕೆಯು ನಿನಗೆ ಹ್ಯಾಗೆ ಆಯಿತು” ಎಂದು ಪ್ರಶ್ನೆ ಮಾಡಿತು. ಅದಕ್ಕೆ ಮರಿಯು- ಮಹಾರಾಜ , ಮೂಲತಃ ನಮ್ಮ ಜಾತಿಯೇ ಕುರಿಯದು , ಅಂದಬಳಿಕ ನಾನು ಕುರಿಯ ಮರಿಯೆಂದು ಹೇಳದೆ ಏನುಮಾಡಲಿ ? ನಾವು ಹೊಲಸು ಜಾತಿಯವರೆಂಬದು ನಿಜವು . ಅಂತೇ ನನ್ನನ್ನು ಬಿಟ್ಟುಬಿಡಬೇಕೆಂದು ನಿಮ್ಮನ್ನು ಪ್ರಾರ್ಥಿಸುವೆನು , ಎಂದು ಉತ್ತರ ಕೊಟ್ಟಿತು , ಕಾತ್ಯಾಯನೀ , ಇನ್ನು ಮುಂದೆ ಆದ ಅವುಗಳ ಸಂಭಾಷಣವನ್ನು ಲಕ್ಷ ಗೊಟ್ಟು ಕೇಳು; ಯಾಕಂದರೆ , ಯಾರಾದರೊಬ್ಬರು ತಾವು ಕೆಲಸಕ್ಕೆ ಬಾರದವರು,

ತಮ್ಮ ಯೋಗ್ಯತೆಯು ಹೀನವಾದದ್ದು, ನಾವು ಹೀಗೆಯೇ ಇರತಕ್ಕವರು, ಅಂಥವ

24

ರನ್ನು ನಾವು ಹಾಗೆ ಸುತ್ತಿ ನ ? ಎಂಬ ಭವನೆಯ, ತಾಳಿದರೆ, ಅವರ ಉದ್ಧಾ ರವಾಗುವದು ಎಷ್ಟಾ ಕುಣರಾಗುರನೆಂಬದು ಅದುವ ಯುವದು . ಸಿಂಹದ ಮರಿಯು ಅಜ್ಞಾವಿಂದ ಕುಲಯ ನ , ಎಂ ಸಿಡಿದು ಕುಳಿತವನ್ನು ನೋಡಿ ಸಿಂಹವು ಕನಿಕರವಂದ--

ಸಿಂಹ-- ತಮ್ಮಾ, ನ್ಮಲ್ರ ನಮಾತಾಳು, ಮತ-ನೀರು ಸೀರುಕುಡಿ

ಯುತ್ತಿರುವಾಗ ನಿನ್ನ ಪ್ರತಿ- ಸೀರಲ್ಲಿ ಮೂತ್ತಲ್ಲ, ಅದು ರುರಿಯದಾಗೆ ಏನು?

ಸಿ೦ಹದಮಂ-- ಇಲ್ಲ, ಕುಯಮನಾಗೆ ಇಲ್ಲ. ಬೇರೆ ವಿಧವಾಗಿ ಇತ್ತು.

ಸಿಂಹ--ನೀನು ಕವಿಯಾದೆ ? ನಿನು, ಪ್ರತಿ ಒವು ತಯನರಿಯ

ಹಾಗೆಯೇ ಇರಬೇಕು ? ದಾಗಿರನೆ ಅದು ಬೇರಧವರ ನವೇನು ?

ಸಿಂಹವನುಂ-- -- ಒಬ್ಬರುದಾತ್ತಾತರೆ ? ನಾನು ಕುರಿಗಿಂತ ಬೇರೆ

ವಿಧವಾಗಿರಬಹುದು; ಆದರೆ ಮದಾರಾಬ , ನಿಮ್ಮನ್ನು ಕಂದು ನನಗೆ ಬಹಳ ಅಂಬೆಗೆ ಬರುತ್ತದೆ. ನನ್ನನ್ನು ಬಿಟ್ಟು ದ ರಿ .

ಸಿಂಹ--, ಎಲ್ಲಗೆ ದೋಲುರ್ತೀ: ? ಒಬ್ಬರ ದಾಗೆ ಒಬ್ಬರು ಇರುವದಿಲ್ಲೆಂದು

ಹೇಳಿ, ನನ್ನನ್ನು ಸಮಾಧಾರಗೋ- - ಸಪಿದೆ, ", ಕುಂದು ಕೊರ`o- ತೀರ ಭಿನ್ನ ವಾದ ರೂಪವು ನಿನ್ನದಿರುವುದು ಅಪಿ: ಸಿನಗೆ ಇರುವ ಎಲ್ಲವೆ : ನರ, ಆ ಬಾವಿಯ ದಂಡೆಯಮೇಲೆ ನಿಂತು ನಿನ್ನನೆರೆ ನೋರುರೋ

ಈ ಮೇರೆಗೆ ನುಡಿದು ಬಾಲಾತಾ ರದಿಂದ ಆ ಸಿಂಹದ. ಮಯನ್ನು ಎಳ

ಕೊಂಡುಹೋಗಿ, ಅದನ್ನು ದಯಪಿಲ್ಲ ತನ್ನ ಬಗ್ಗೆ ನಿಲ್ಲಿಸಿಕೊಂಡು, ಆ ಬಾವಿಯೊಳುನ ಮುರುದಿನಾ."ನನ್ನ ನೋಡಿ ಸ್ವರಗಗೊಂಡಿತು. ಹ್ಯಾಗೆ ಕಾಣಿಸುತ್ತಟೆ ದೆಳೂ,” ಆಗ ಸಿರ ಮರು ಅಂತ್ತಜುಂ ಜುತ್ತ ಬಾವಿಕ ಎರದೊ ಬಂದೇ ಇದು ನ್ನನ ಸೊವಗೊಂಡಿತು? ಅದು ಮನಸ್ಸಿನಲ್ಲಿ---"ನಾನೊ ರ: ಹಿಂದೆ ಇರು? ನ್ನ ಸ್ವರೂಪವು ಭಿನ್ನ ವಾಗಿರುತ್ತದೆಂದು ನಾವು ಯಕೆ ಇದುನನ್ನ ? ಇದು ನಂದುಘಲವು. ನೀಚಸಂಗತಿಯಿಂದು. -ಸಮ ಸರದ ಅನ್ನ ತಿಯಿತು. ತಾನು ಸಿಂ ಹನು, ಕುರಿಯಲ್ಲ "ಎಂದು ಹರಿಸಿರುಸು ಸಿಂಪಂಬು ಗುರುತು ಹದಕೂ ಡಲೆ ಆ ಮರಿಗೆ ಆತ್ಯಾನಂದದಾ. ತು. ಲಮ ಆನಂದ ಇಂದ ಒಮ್ಮೆಮ್ಮೆ ಗರ್ಜಿಸಿತು. ಆ ವ್ರತಮಾತಾಮಿತುದ ಸಿಯದ ಮನಂದು. ನವ ವನ್ಯಪಶು ಮೃಗಗಳು ನಡು: ' ., ಕು ?, ಆ ಸಿನ ಮಗ' ನಿನಗೂ ಆತ್ಮವಿಸ್ಮ್ಯತಿಯಗಿರುತ್ತನೆ.

ಕಾತ್ಯಾಯ' --ನಬೀ, ನಿನ್ನ ಕಧೆಕೇಳಿ ನನಗೆ ಸ್ವಲ್ಪ ಗೊಂದದ್ದಾಗಿದೆ,

ಸ್ವಲ್ಪ ನಿಲ್ಲು, ವಿ.ರವಾಸಿ, ವಿವಾಏನಂದಿ ? ಸಿಂಹದ ಮರುಳಾಗೆ ನನಗೆ ಆತ್ಮ

ವಿಸ್ಕೃ ತಿಯಾಂದು ನೀನು ಹೇಳಿದಯ್ವಿಟೆ? ಆತ್ಮ್ರತಿಯೆಂದರೇನು ?

25

ಮೈತ್ರಯೋ••ನಾನೆಲ್ಲ ನಿನಗೆ ಹೇಳುವನು; ಆದರೆ ಕಥೆಯೆಲ್ಲ ನೆನಪಿನಲ್ಲಿರಲಿ.

ಸಖೀ , ನಾನು ಕೇಳುವ ಒಂದೆರಡು ಪ್ರಶ್ನೆಗಳಿಗೆ ಮೊದಲು ಉತ್ತರಕೊಡು , ಆತ್ಮನು ಬರಿಯ ಪುರುಷರಲ್ಲಿಯೇ ಇರುವನೋ, ಆತನು ಸ್ತ್ರೀಯರಲ್ಲಿಯೂ ಇರುವನೋ ?

ಕಾತ್ಯಾಯನೀ---( ನಕ್ಕು) ಇದೇನು ಕೇಳುವದು ? ಆತ್ಮನು ಪುರುಷರಲ್ಲಿದ್ದಂತೆ

ಸ್ತ್ರೀಯರಲ್ಲಿಯೂ ಇರುವನು; ಶರೀರರಚನೆಯಲ್ಲಿಯ ಅಲ್ಪಸ್ವಲ್ಪ ಭೇದವಲ್ಲದೆ ಉಳಿದ ಯಾವ ಮಾತುಗಳಲ್ಲಿಯೂ ಪುರುಷರಿಗೂ, ಸ್ತ್ರೀಯರಿಗೂ ಭೇದವಿರುವದಿಲ್ಲ. ಪುರುಷ ರಂತೆ ಸ್ತ್ರೀಯರಿಗೂ ಪಂಚಜ್ಞಾನೇಂದ್ರಿಯಗಳೂ, ಪಂಚಕರ್ಮೇಂದ್ರಿಯಗಳೂ, ಮನ ಸೈಂಬ ಅಂತರಿಂದ್ರಿಯವೂ ಇರುತ್ತವೆ; ಅಂದಬಳಿಕ ಇವನ್ನೆಲ್ಲ ಪ್ರೇರಿಸುವ ಆತನು ಇಬ್ಬ ರಲ್ಲಿಯೂ ಇರಲೇಬೇಕು ,

ಮೈತ್ರೇಯಿ~-ಒಳ್ಳೇದು, ಸ್ತ್ರೀ-ಪುರುಷರಿಬ್ಬರಲ್ಲಿ ಆತ್ಮನು ಸರಿಯಾಗಿರುವನೋ,

ಪುರುಷರಲ್ಲಿ ಹೆಚ್ಚು , ಸ್ತ್ರೀಯರಲ್ಲಿ ಕಡಿಮೆಯಾಗಿ ಇರುವನೋ?

ಕಾತ್ಯಾಯನೀ--( ಪುನಃ ನಕ್ಕು) ಇಬ್ಬರಲ್ಲಿಯೂ ಸರಿಯಾಗಿಯೇ ಇರುವನು.

ಹೆಚ್ಚು ಕಡಿಮೆಯಾಗಿರುವದಿಲ್ಲ; ಯಾಕಂದರೆ, ನಿತ್ಯ ವ್ಯವಹಾರದಲ್ಲಿಯ ಸಂಗತಿಗಳಿಂದ ಅದು ಅನುಭವಕ್ಕೆ ಬರುವ ಮಾತಾಗಿದೆ .

ಮೈತ್ರೇಯಿ,--ಸರಿ. ಆತ್ಮಜ್ಞಾನವಾಗದೆ ಮೋಕ್ಷವಾಗಲಾರದೆಂಬ ಮಾತನ್ನು

ಯಾಜ್ಞವಲ ಪತ್ನಿಗೆ ನಾನು ಹೇಳಲವಶ್ಯವಿಲ್ಲ. ಯಾಕಂದರೆ, ಮಹಾತ್ಮರಾದ ಅವರ ಅಗಾಧ ಜ್ಞಾನದ, ಹಾಗು ಅಲೌಕಿಕ ಮಾಹಾತ್ಮದ ಪ್ರಸಿದ್ಧಿಯು ಸಾರ್ವತ್ರಿಕ ವಾಗಿರುವದು .

ಕಾತ್ಯಾಯನೀ--ಹೌದಮಾ ಮೈತ್ರೇಯಿ, ನೀನು ಆ ಮಾತನ್ನು ಹೇಳಲವ

ಶ್ಯವಿಲ್ಲ. ನಾನು ಅದನ್ನು ಪತಿಮುಖದಿಂದ ಹಲವು ಸಾರೆ ಕೇಳಿದ್ದೇನೆ; ಮುಕ್ತಿಯನ್ನು ಸಂಪಾದಿಸುವದು ಪುರುಷರಿಗೆ ಅವಶ್ಯವಾಗಿರುವಂತೆ ಸ್ತ್ರೀಯರಿಗೂ ಅವಶ್ಯವಾಗಿರುತ್ತದೆ. ತಲೂ ಕೇಳಿದ್ದೇನೆ ,

ಮೈತೆಯಿ-ಅಂದಬಳಿಕ ಸಖೀ, ಆತ್ಮಜ್ಞಾನವ ಸಂಪಾದಿಸುವ ಸಂಬಂಧ

ದಿಂದ ಪುರುಷರ ಕರ್ತವ್ಯಗಳು ಭಿನ್ನವಾಗುವದು ಹ್ಯಾಗೆ ನೀನೇ ಹೇಳು, ಸಂಸಾರ ಕ ತ ಗ ಳಲ್ಲಿ ದಕ್ಷರಾಗಿರುವದಷ್ಟೇ ಸ್ತ್ರೀಯರಕರ್ತವ್ಯವಲ್ಲ. ಆ ತ್ಮ ಜ್ಞಾನ ಸಂಪಾಧಿಸುವದೂ ಸ್ತ್ರೀಯರಕರ್ತವ್ಯವಾಗಿರುತ್ತದೆ. ಅದನ್ನು ನಾವು ಸಂಪಾದಿಸ ದಿದ್ದರೆ ಆದಕ್ಕೆ ಪುರುಷರಾದರೂ ಏನುಮಾಡಬೇಕು ?

ಕಾತ್ಯಾಯನೀ-ಸಖೀ, ನಿನ್ನ ಮಾತು ನಿಜವು, ಆತ್ಮಜ್ಞಾನದ ಸಂಬಂಧದಿಂದ

ನಾನು ತೀರ ಉದಾಸೀನಳಾಗಿದ್ದೆನು. ನಿನ್ನ ಬೋಧದಿಂದ ಇಂದು ನನ್ನ ಕಣ್ಣುಗಳು ತೆರೆದವು. ನಾವೇ ಉದಾಸೀನರಾದರೆ ಪುರುಷರಾದರೂ ಏನುಮಾಡಬೇಕು? ನನ್ನನ್ನೇ ನೋಡಬಾರದೆ? ನಾನೇ ಉದಾಸೀನಳಾದದ್ದರಿಂದ ನಮ್ಮ ಯೋಗೀಶ್ವರರೂ ಈ ಸಂಬಂ ಧದಿಂದ ನನ್ನನ್ನು ಉದಾಸೀನಮಾಡಿರುವರು, ನನಗೇ ಸೃಸ್ವರೂಪಜ್ಞಾನವು ಬೇಡಾ 

26

ಗಿರುವಾಗ ಅವರಾದರೂ ಏನುಮಾಡಬೇಕು ? ಸಾಂಸಾರಿಕ ವಿಷಯಗಳಲ್ಲಿಯೇ ಸದಾ ಮಗ್ನಳಾಗಿರುವ ನನ್ನೊಡನೆ, ಆ ವಿಷಯಗಳನ್ನು ಕುರಿತೇ ಅವರು ಪ್ರಸ್ತಾಪಿಸುತ್ತಿರು ವರು. ಸಖಿ, ಯಾಜ್ಞವಲ್ಯ ಪತಿಯೆನಿಸುವ ನನಗೆ ಈ ಮಾತು ಅತ್ಯಂತ ಲಾಂಛನವೇ ಸರಿ! ನಮ್ಮಂಥ ಸ್ತ್ರೀಯರಿಗೆ ಸಿಂಹದ ಮರಿಯಂತೆ ಆತ್ಮವಿಸ್ಮತಿಯಾಗಿರುತ್ತದೆಂದು ನಿರ್ಬಾಧವಾಗಿ ಹೇಳಬಹುದು.

ಮೈತ್ರೇಯಿ – ಅಕ್ಕಾ, ನಿನಗೆ ನಾನು ಹೆಚ್ಚಿಗೆ ಹೇಳುವದೇನು? ದ್ರವ್ಯವನ್ನು

ಸಂಪಾದಿಸುವದು, ಸಂಸಾರದ ಬೇರೆ ಕೃತ್ಯಗಳನ್ನು ಮಾಡುವದು ಪುರುಷರ ಕರ್ತವ್ಯ ವಾಗಿರುವಂತೆ, ಮನೆಗೆಲಸಗಳನ್ನು ದಕ್ಷತೆಯಿಂದ ಮಾಡುವದು ಸ್ತ್ರೀಯರ ಕರ್ತವ್ಯ ವಾಗಿರುತ್ತದೆ. ಸ್ತ್ರೀ-ಪುರುಷರು ತಮ್ಮ ತಮ್ಮ ಈ ಕರ್ತವ್ಯಗಳನ್ನು ಯಥಾಸ್ಥಿತವಾಗಿ ಮಾಡಿಕೊಂಡು, ಇಬ್ಬರೂ ಮೋಕವಿಷಯಕ ವಿಚಾರವನ್ನು ಮಾಡತಕ್ಕದ್ದು; ಆದರೆ ಪುರುಷರಂತೆ ಸ್ತ್ರೀಯರು ಈ ಮಾತನ್ನು ಅವಶ್ಯವೆಂದು ಭಾವಿಸುವದಿಲ್ಲ. ಮನೆಗೆಲಸ ಮಾಡಿದರೆ ತಾವು ಕೃತಕೃತ್ಯರಾದೆವೆಂದು ಅವರು ತಿಳಿದುಬಿಡುತ್ತಾರೆ . ಇದಕ್ಕೂ ಹೆಚ್ಚಿನದೇನು ಮಾಡುವದಿರುವದಿಲ್ಲೆಂದು ಅವರು ಭಾವಿಸಿರುವರು.

ಕಾತ್ಯಾಯನೀ-ನೀನನ್ನುವದು ನಿಜವು. ನಮ್ಮ ಸಮಾಜದ ತಿಳುವಳಿಕೆಯೇ

ಹೀಗಿರುತ್ತದೆ; ಅದರಲ್ಲಿ ನಾನಂತು ಬಹಳ ನಾಚಬೇಕಾಗಿದೆ; ಯಾಕಂದರೆ ನನಗೆ ಎಲ್ಲ ಬಗೆಯ ಉತ್ತಮಸಾಧನಗಳು ಉಪಲಬ್ಬವಾಗಿದ್ದು, ಅವುಗಳ ಉಪಯೋಗವನ್ನು ನಾನು ಮಾಡಿಕೊಂಡಿರುವದಿಲ್ಲ.

ಮೈತ್ರೇಯಿ--ಸಖೀ, ಕಾತ್ಯಾಯನೀ, ನೀನು ಬಹುಭಾಗ್ಯವತಿಯು ಕಂಡೆಯಾ?

ವಿದ್ವಾಂಸನೂ, ಸದ್ಗುಣಸಂಪನ್ನನೂ ಆದಪತಿಯು ದೊರೆಯಲು ಪೂರ್ವಾರ್ಜಿತ ಪುಣ್ಯ ವು ಬೇಕು. ನೀನು ಬಹು ಪುಣಶಾಲಿಯು! ಅಂತೇ ಯಾಜ್ಞವಲ್ಕರಂಥ ಮಹಾತ್ಮರ ಪಾಣಿಗ್ರಹಣಮಾಡಿರುವೆ. ತಮ್ಮ ಪತಿಯನ್ನು ಆರಿಸಿಕೊಳ್ಳಲು ಸ್ವಾತಂತ್ರವಿರುವ ಸ್ತ್ರೀಯರಿಗೆ, ವಿಶೇಷವಾಗಿ, ಉಚ್ಚವರ್ಗದೊಳಗಿನ ಸ್ತ್ರೀಯರಿಗೆ ಕೇವಲ ಧನಿಕನೂ, ಸ್ವಸುಖಾಭಿಲಾಷಿಯೂ ಆದ ಪುರುಷನನ್ನೇ ಪತಿಯಾಗಿ ಆರಿಸಿಕೊಳ್ಳುವ ಮನಸ್ಸು ಯಾಕಾಗುತ್ತದೋ ನಾನರಿಯೆನು! ಗುಣಗಳಗಿಂತಲೂ ಐಶ್ವರ್ಯವೂ , ತೇಜಸ್ವಿತೆ ಗಿಂತಲೂ ಸುಖಲೋಲುಪತೆಯೂ, ಕರ್ತೃತ್ವಕ್ಕಿಂತಲೂ ವಿಷಯಾಸಕ್ತಿಯೂ ಹೆಚ್ಚಿ ನವೆಂದು ತಿಳಿಯುವ ಸ್ತ್ರೀಯರೇ ವಿಶೇಷವಾಗಿರುವರು. ನಿನ್ನಂಥ ವಿವೇಕಿಗಳು ತೀರ ಕಡಿಮೆ. ವಿದ್ಯಾಂಸನೂ, ವಿವೇಕಿಯೂ, ಸತ್ಪುರುಷನೂ, ಮೋಕ್ಷಪ್ರಾರ್ಥವಾಗಿ ಸಹಾಯಮಾಡುವವನೂ ಆದ ಭಗವಾನ್ ಯಾಜ್ಞವಲ್ಕರಂಥ ಪತಿಯನ್ನು ಆರಿಸಿ ನೀನು ಕೃತಕೃತ್ಯಳಾಗಿರುವೆ ! ಸಖೀ, ಕಾತ್ಯಾಯನೀ, ನಿನ್ನ ಮಹತ್ವವನ್ನು ನಾನೇನು ವರ್ಣಿ

ಸಲಿ! ವಿದೇಹಜನಕನೆಂದು ಪ್ರಸಿದ್ಧನಾಗಿದ್ದ ರಾಜನುಕೂಡ ನಿನ್ನ ಪತಿಯ ಶಿಷ್ಯಪ್ರಕೆ ಟಿಯಲ್ಲಿ ಸೇರಿರುವನು. ಮೊನ್ನಿನಮಹಾಸಭೆಯಲ್ಲಿ ನಿನ್ನ ಪತಿಯು ಬ್ರಹ್ಮನಿಷ್ಟರಲ್ಲಿ ಪರಮಶ್ರೇಷ್ಟನೆಂದು ಮಹಾಮಹಾಜ್ಞಾನಿಗಳು ಒಪ್ಪಿಕೊಂಡರು! ಅಂಥ ಮಹನೀ

27

ಯನ ಅರ್ಧಾಂಗಿಯೆನಿಸುವ ನಿನಗೆ ಆತ್ಮಜ್ಞಾನಪಡೆಯಲು ಏನು ಪ್ರಯಾಸವಾಗುವದು?

ಕಾತ್ಯಾಯನೀ-- ಮೈತ್ರೇಯಿಾ, ನಿನ್ನ ಮಾತು ಒಂದೂ ಸುಳ್ಳಲ್ಲ . ಹತ್ತರ

ಕಾಮಧೇನುವನ್ನಿಟ್ಟುಕೊಂಡು ಮಜ್ಜಿಗೆಗಾಗಿ ಮನೆಮನೆ ತಿರುಗಿದಂತೆ ನನ್ನ ಗತಿಯಾ ಗಿದೆ. ನನ್ನ ಪತಿಯಮಹತ್ವವನ್ನು ತಿಳಿದುಕೊಳ್ಳುವ ಯೋಗ್ಯತೆಯೂ ನನ್ನಲ್ಲಿಲ್ಲ. ಇಂದು ನನ್ನ ಮೇಲೆ ನೀನು ದೊಡ್ಡ ಉಪಕಾರ ಮಾಡಿದಂತಾಯಿತು . ಸಖೀ,ಆತ್ಮ ಜ್ಞಾನಪ್ರಾಪ್ತಿಗಾಗಿ ನಾನು ಇನ್ನು ಅವರಿಗೆ ಶರಣು ಹೋಗುವೆನು. ಪ್ರತ್ಯಕ್ಷ ನನ್ನ ಪತಿಯ ಚಿರಸಹವಾಸದ ಮಹಾತ್ಮ್ಯದಿಂದ ನನಗಾಗದೆಯಿದ್ದ ಜಾಗ್ರತಿಯು, ಇಂದು ನಿನ್ನ ಸಹವಾಸದಿಂದ ಆಗಿರುತ್ತದೆ. ನಿನ್ನ ಈ ಉಪಕಾರವನ್ನು ನಾನು ಎಂದೂ ಮರೆಯಲಾರೆನು .

ಈ ಮೇರೆಗೆ ಸಂಭಾಷಣವು ನಡೆದಿರುವಾಗ ಕಾತ್ಯಾಯನಿಯ ಒಬ್ಬ ಸೇವಕನು

ಪಲ್ಲಕ್ಕಿಯನ್ನು ತಕ್ಕೊ೦ಡು ಮಿತ್ರನ ಮನೆಯಬಳಿಗೆ ಬಂದನು . ಈ ವರ್ತಮಾನ ವನ್ನು ಆತನು ಕಾತ್ಯಾಯನಿಗೆ ತಿಳಿಸಲು, ಆಕೆಯು ಸೇವಕನನ್ನು ಒಳಗೆ ಕರೆಸಿಕೊಂ ಡಳು , ಸೇವಕನು ಭಗವತೀ-ಕಾತ್ಯಾಯನಿಯನ್ನು ನಮಸ್ಕರಿಸಿ--" ದೇವೀ, ತಾವು ಇಲ್ಲಿಗೆ ಬಂದು ಬಹಳ ಹೊತ್ತಾದದ್ದರಿಂದ ಹುಡುಗರು ತಮ್ಮ ಹಾದಿಯನೋಡುತ್ತ ಒಂದೇಸವನೆ ಚಡಪಡಿಸುತ್ತಿರುವವು . ತಮ್ಮನ್ನು ಯಾವಾಗ ನೋಡೇವೆನ್ನುವಹಾಗೆ ಅವಕ್ಕೆ ಆಗಿದೆ . ಹೊತ್ತು ಮುಣುಗುತ್ತ ಬಂದಿತು. ತಮ್ಮ ಪಲ್ಲಕ್ಕಿಯು ಹೊರಗೆ ಸಿದ್ದವಾಗಿದೆ. ದೇವಿಯವರ ಅಪ್ಪಣೆಯಂತೆ ನಡೆದುಕೊಳ್ಳುವೆನು ” ಎಂದು ಹೇಳಿ ದನು . ಸೇವಕನ ಈ ಮಾತುಗಳನ್ನು ಕೇಳಿದ ಕೂಡಲೆ ಕಾತ್ಯಾಯನಿಗೆ ಮಕಳ ನೆನ ಪಾಗಿ, ತಾನು ಮನೆಗೆ ಯಾವಾಗ ಹೋದೇನೆನ್ನುವಾಗೆ ಆಯಿತು . ಆಕೆಯು ಆಧ್ಯಾ ತ್ಮಿಕ ವಿಷಯವನ್ನು ಕುರಿತು ಮಾತಾಡುತ್ತ ಕುಳಿತುಕೊಂಡದ್ದು ಇದೇ ಮೊದಲು. ತನ್ನ ಮಕ್ಕಳ ನೆನಪಾದ ಕೂಡಲೆ ಆಕೆಗೆ ಚಡಪಡಿಕೆಯಾಯಿತು. ಇಷ್ಟು ಹೊತ್ತಿಗೆ ತಾನು ಮಾಡಿಸಬೇಕಾಗಿದ್ದ ಮನೆಗೆಲಸಗಳೆಲ್ಲ ಹಾಗೇ ಉಳಿದದ್ದರಿಂದ ಆಕೆಯ ಮನಸ್ಸು ಅಸ್ಥಿರವಾಯಿತು. ಒಣ ಮಾತಿನಿಂದ ಕಾಲಹರಣವಾದಾಗ ಕರ್ತವ್ಯನಿಷ್ಠರಿಗೆಲ್ಲ ಹೀಗೆಯೇ ಚಡಪಡಿಕೆಯಾಗುವದು . ಕಾತ್ಯಾಯನಿಯು ಅತ್ಯಂತ ಕರ್ತವ್ಯನಿಷ್ಠಳು; ಸುವ್ಯವಸ್ಥಿತಳು ; ಆಲಸ್ಯರಹಿತಳು. ಆಕೆಯ ಬಲವತ್ತರವಾದ ಸಂಸಾರವಾಸನೆಯು ಆಕೆಯನ್ನು ಹಿಡಿದೆಳೆಯಹತ್ತಿತು. ಆಕೆಯು ಅವಸರದಿಂದ ಕುಂಕುಮ ಹಚ್ಚಿಸಿ ಕೊಂಡು ಮೈತ್ರೇಯಿಯ ಅನುಜ್ಞೆಪಡೆದು ಪಲ್ಲಕ್ಕಿಯಲ್ಲಿ ಕುಳಿತು ಮನೆಗೆ ಬಂದಳು.