ಮುಟ್ಟದ ಮುನ್ನ ನರರು,

ವಿಕಿಸೋರ್ಸ್ದಿಂದ



Pages   (key to Page Status)   


ಮುಟ್ಟದ ಮುನ್ನ ನರರು
ಸುರರು
ಕಿನ್ನರರು ಮೊದಲಾದವರೆಲ್ಲರೂ ಪಿಂಡವೆಂಬ ಭಾಂಡದಲ್ಲಿ ಅಡಗಿದರಾಗಿ ನಾನವರ ರೂಪಿಸಬಲ್ಲೆ. ದೇವಗಣ ಪ್ರಮಥಗಣ
ರುದ್ರಗಣಂಗಳೆಂಬವರೆಲ್ಲರೂ ಬ್ರಹ್ಮಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ
ನಾನವರ ಭಾವಿಸಬಲ್ಲೆ. ಸತ್ಯರು
ನಿತ್ಯರು
ಮುಕ್ತರೆಂಬ ಮಹಾಮಹಿಮರೆಲ್ಲರೂ ಚಿದ್ಭಾಂಡವೆಂಬ ಭಾಂಡದಲ್ಲಿ ಅಡಗಿದರಾಗಿ
ನಾನವರನರಿದು ಬಲ್ಲೆ. ಇಂತೀ ತ್ರಿಭಾಂಡವನೊಳಕೊಂಡ ಆ ಅಖಂಡಿತದಿರವೆ ತಾನೆಂದರಿದ ಲಿಂಗೈಕ್ಯನ ರೂಹಿಸಲಿಲ್ಲಾಗಿ
ಭಾವಿಸಲಿಲ್ಲಾಗಿ
ಅರಿಯಲಿಲ್ಲ. ಅರಿವೆ ತಾನೆಂದರಿದ ಬಳಿಕ
ಗುಹೇಶ್ವರನೆಂಬುದು ಬಯಲು ನೋಡಾ !