ಪುಟ:ಕಥಾ ಸಂಗ್ರಹ - ಭಾಗ ೨.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಾವತಾರದ ಕಥೆ 243 ಗಳ ಮೇಲೆ ಕುಳ್ಳಿರಿಸಿಕೊಂಡನು. ಆಗ ಬ್ರಹ್ಮಾದಿ ದೇವತೆಗಳು ಸಂತೋಷದಿಂದ ನರ ಸಿಂಹನ ಮೇಲೆ ಪೂಮಳೆಗರೆದು ನರಸಿಂಹನ ಸನ್ನಿಧಿಗೆ ಬಂದು ಸಾಷ್ಟಾಂಗನಮಸ್ಕಾರ ವನ್ನು ಮಾಡಿ ಬಹು ವಿಧದಿಂದ ಸ್ತುತಿಸಿದರು. ಅನಂತರದಲ್ಲಿ ನರಸಿಂಹಮೂರ್ತಿಯು ಸಂತುಷ್ಟನಾಗಿ ಚತುರ್ಮುಖಾದಿ ದೇವತೆಗಳೊಡನೆ ಕೂಡಿ ಭಕ್ತನಾದ ಪ್ರಹ್ಲಾದನಿಗೆ ದೈತ್ಯರಾಜ್ಯಾಭಿಷೇಕವನ್ನು ಮಾಡಿ ಸ್ಥಿರಜೀವಿಯಾಗಿರು ಎಂದು ಹರಸಿ ತಾನು ಲಕ್ಷ್ಮಿ ಸಮೇತನಾಗಿ ವೈಕುಂಠಲೋಕಕ್ಕೆ ತೆರಳಿದನು, ಬ್ರಹ್ಮಾದಿ ದೇವತೆಗಳೂ ಕೂಡ ತಮ್ಮ ತಮ್ಮ ನಿವಾಸಸ್ಥಾನಗಳಿಗೆ ತೆರಳಿದರು. ಆ ಮೇಲೆ ಪ್ರಹ್ಲಾದನು ನಿರಂತರವೂ ಪರಮಭಕ್ತಿಯಿಂದ ಹರಿಧ್ಯಾನವನ್ನು ಮಾಡುತ್ತ ಧರ್ಮದಿಂದ ರಾಜ್ಯ ಪರಿ ಪಾಲನೆಯನ್ನು ಮಾಡಿಕೊಂಡು ಸುಖದಿಂದಿದ್ದನು. - W. 8, THE FIFTH OR DWARE INCARNATION. ೫, ವಾಮನಾವತಾರದ ಕಥೆ. ಅನಂತರದಲ್ಲಿ ಭಾಗವತಶಿರೋಮಣಿಯಾದ ಪ್ರಹ್ಲಾದನು ಶೋಣಿತಪುರದಲ್ಲಿ ಧರ್ಮದಿಂದ ರಾಜ್ಯ ಪರಿಪಾಲನೆಯನ್ನು ಮಾಡುತ್ತ ಹರಿಯೇ ಪರಮೋತ್ಕೃಷ್ಟ ದೇವತೆ ಯೆಂದೂ ಹರಿಯೇ ಸರ್ವಪಾಪನಿವಾರಕನೆಂದೂ ಹರಿಯೇ ಶರಣಾಗತ ರಕ್ಷಕನೂ ಸರ್ವಜಗದ್ಯಾಪಕನೂ ಎಂದೂ ಚೆನ್ನಾಗಿ ತಿಳಿದು ಅದೇ ಪ್ರಕಾರವಾಗಿ ಸಕಲ ಜನ ರಿಗೂ ಸಮಾಧಾನದಿಂದ ಉಪದೇಶಮಾಡುತ್ತ ಇದ್ದನು. ಹೀಗೆ ಒಹು ಕಾಲವು ಗತಿಸಿ ಹೋದ ಮೇಲೆ ರಾಜ್ಯದಲ್ಲಿ ವಿರಕ್ತತೆಯನ್ನು ಹೊಂದಿ ಒಂದಾನೊಂದು ದಿವಸ ತನ್ನ ಮೊಮ್ಮಗನಾದ ಬಲಿಯು ರಾಜ್ಯ ಭಾರಕ್ಕೆ ಯೋಗ್ಯವಾದ ಪ್ರಾಯವುಳ್ಳವನಾಗಿರುವು ದನ್ನು ತಿಳಿದು ಆತನನ್ನು ಕರೆದು ಏಕಾಂತದಲ್ಲಿ ಕುಳ್ಳಿರಿಸಿಕೊಂಡು--ಎಲೈ ಬುದ್ದಿ ಶಾಲಿಯಾದ ಮೊಮ್ಮಗನೇ, ನಿನ್ನ ತಂದೆಯಾದ ವಿರೋಚನನು ಬುದ್ದಿ ಹೀನತೆಯಿಂದ ಸಕಲ ದೇವತೆಗಳ ಗಂಡನೂ ಸರ್ವಲೋಕೈಕನಾಥನೂ ಆದ ಮಹಾವಿಷ್ಣುವಿಗೆ ದ್ರೋಹವನ್ನು ಮಾಡಿ ಕಾಲಗತಿಯನ್ನು ಹೊಂದಿದನು, ಬುದ್ಧಿಶಾಲಿಯಾದ ನೀನು ಒಂದು ಕಾಲದಲ್ಲಿಯಾದರೂ ಆ ರೀತಿಯಾಗಿ ಮಾಡದೆ ಮಹಾವಿಷ್ಣುವಿನಲ್ಲಿ ಪರಮ ಭಕ್ತಿಯುಳ್ಳವನಾಗಿ ಸದಾಕಾಲದಲ್ಲೂ ಏಕಚಿತ್ತದಿಂದ ಆತನ ಧ್ಯಾನವನ್ನು ಮಾಡುತ್ತ ಧರ್ಮದಿಂದ ರಾಜ್ಯ ಪರಿಪಾಲನೆಯನ್ನು ಮಾಡಿಕೊಂಡು ಸಕಲ ಪ್ರಾಣಿಗಳಲ್ಲೂ ದಯೆಯುಳ್ಳವನಾಗಿ ಸುಖದಿಂದಿರು, ನಾನು ನಿನಗೆ ರಾಜ್ಯಾಭಿಷೇಕವನ್ನು ಮಾಡಿ ತಪಸ್ಸಿಗೆ ಹೋಗುವೆನು, ಆದರೆ ದೈತ್ಯರಲ್ಲಿ ದೇವತೆಗಳಿಗೆ ಆಜನ್ಮಸಿದ್ಧ ವಾದ ಜಾತಿವೆ ರವಿರುವುದರಿಂದ ವಿವೇಕಶಾಲಿಯಾದ ನೀನು ವಿಷ್ಣು ಭಕ್ತಿಯಿಂದಲೂ ಧರ್ಮದಿಂದಲೂ ವರಬಲದಿಂದಲೂ ದೇವತೆಗಳನ್ನು ತಲೆಯೆತ್ತದಂತೆ ಅಡಗಿಸಿಕೊಂಡು ಬಾಳು ಎಂದು ಬುದ್ದಿಯನ್ನು ಹೇಳಿ ಸುಲಗ್ನದಲ್ಲಿ ಆತನಿಗೆ ಸಂಭ್ರಮದಿಂದ ರಾಜ್ಯಾಭಿಷೇಕವನ್ನು ಮಾಡಿ ತಾನು ಪಾರಮಾರ್ಥಿಕ ಬುದ್ಧಿಯಿಂದ ಪುಣ್ಯಾರಣ್ಯವನ್ನು ಕುರಿತು ತಪಸ್ಸಿಗೆ ಹೊರಟುಹೋದನು.