ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಕಥಾಸಂಗ್ರಹ-೪ ನೆಯ ಭಾಗ ಚಂದ್ರನಂತಿರುವ ಮುಖವುಳ್ಳವನಾಗಿ ಬಂದು ರಾಮನ ಪಾದಕಮಲಗಳಿಗೆ ಭಕ್ತಿ ಯಿಂದ ನಮಸ್ಕರಿಸಲು ; ಆಗ ಶ್ರೀರಾಮಚಂದ್ರನು ಆತನನ್ನು ತೆಗೆದು ಆಲಿಂಗಿಸಿ ಕೊಂಡು ತನ್ನ ತೊಡೆಯೆಂಬ ಸಿಂಹಾಸನದ ಮೇಲೆ ಕುಳ್ಳಿರಿಸಿ ತನ್ನ ನೇತ್ರಗಳೆಂಬ ಪೊಂಗೊಡಗಳಲ್ಲಿ ತುಂಬಿದ ಆನಂದಬಾಷ್ಪಗಳೆಂಬ ಪರುಗಳಿಂದ ತಾನೂ ಆತನಿಗೆ ಲಂಕಾರಾಜ್ಯಾಭಿಷೇಕವನ್ನು ಮಾಡಿ -ಚಿರಂಜೀವಿಯಾಗಿದ್ದು ಕೊಂಡು ಈಗಿರುವ ಬ್ರಹ್ಮಕಲ್ಪದ ಪರ್ಯ೦ತರವೂ ಈ ಅಂಕಾರಾಜ್ಯವನ್ನು ಅನುಭವಿಸಿಕೊಂಡಿರು ಎಂದು ತಲೆಯ ಮೇಲೆ ಕೈಗಳನ್ನಿಟ್ಟು ಆಶೀರ್ವಾದವನ್ನು ಮಂಡಿ-ಎಲೈ ಪ್ರಿಯನಾದ ವಿಭೀಷಣನೇ, ಈಗ ನಾವು ರಾವಣನ ಮೇಲೆ ಮಾಡಬೇಕಾಗಿರುವ ರಾಜಕಾರ್ಯಕ್ಕೆ ಸಮುದ್ರರಾಜನು ತಡೆಯಾಗಿರುವನಲ್ಲ ! ಈ ಶತಯೋಜನ ವಿಸ್ತಾರವಾದ ಸಮುದ್ರ ವನ್ನು ನಾವೂ ನಮ್ಮ ಸೇನೆಗಳೂ ನಿರಾಯಾಸವಾಗಿ ದಾಟಿ ಲಂಕೆಯನ್ನು ಸೇರುವು ದಕ್ಕೆ ಯಾವ ಉಪಾಯವನ್ನು ಮಾಡಬೇಕು ? ಈ ವಿಷಯದಲ್ಲಿ ನಿನ್ನ ಬುದ್ದಿಗೆ ಏನು ತೋಚುತ್ತದೆ ? ಎಂದು ಕೇಳಿದನು. ಅದಕ್ಕೆ ವಿಭೀಷಣನು ಕೈಮುಗಿದು ನಿಂತು ಕೊಂಡು--ಸ್ವಾಮಿ ಸರ್ವಜ್ಞನೇ, ಭಕ್ತರಾದ ಸರ್ವಜನರನ್ನೂ ಅಪಾರವಾದ ಸಂಸಾರಸಾಗರದಿಂದ ಸುಲಭವಾಗಿ ದಾಟಿಸುವ ಮಹಾತ್ಮನಾದ ನಿನಗೆ ನಿನ್ನಿಂದ ಸೃಷ್ಟಿ ಸಲ್ಪಟ್ಟ ಈ ಬ್ರಹ್ಮಾಂಡದಲ್ಲಿ ಸ್ವಲ್ಪ ಮಾತ್ರವಾಗಿರುವ ನೂರು ಯೋಜನೆ ವಿಸ್ತೀ ರ್ಣ ಸಮುದ್ರವನ್ನು ದಾಟುವುದು ಅಸಾಧ್ಯ ಕಾರ್ಯವೇ ? ಆದರೂ ಧರ್ಮ ಸಂಸ್ಥಾಪ ನಾರ್ಥವಾಗಿ ನರರೂಪವನ್ನು ಧರಿಸಿ ಲೋಕದವರಂತೆ ನಟಿಸುತ್ತಿರುವ ಪರಮಪುರುಷ ನಾದ ನಿನ್ನ ಲೀಲಾನಾಟಕಕ್ಕೆ ಅನುಸಾರವಾಗಿ ಈ ಸಮುದ್ರರಾಜನನ್ನು ಕುರಿತು ತಪಸ್ಸನ್ನು ಮಾಡಿ ಆತನು ಪ್ರಸನ್ನನಾಗುವಂತೆ ಮಾಡಿಕೊಳ್ಳಬೇಕೆಂದು ನನ್ನ ಬುದ್ಧಿಗೆ ತೋಚುತ್ತದೆಂದು ಅರಿಕೆಮಾಡಿಕೊಂಡನು. ಆ ಮಾತುಗಳನ್ನು ಕೇಳಿ ಶ್ರೀರಾಮಚಂದ್ರನು ತನ್ನ ಮನೋಗತವಾದ ಅಭಿಪ್ರಾಯವನ್ನೇ ಭಕ್ತನಾದ ವಿಭೀಷಣನೂ ಹೇಳಿದನೆಂದು ಭಾವಿಸಿ ಆತನ ಬುದ್ಧಿ ಕೌಶಲ್ಯಕ್ಕೆ ಬಹಳವಾಗಿ ಸಂತೋಷಿಸಿ ಆ ಕ್ಷಣದಲ್ಲಿಯೇ ಕೈಕಾಲ್ನೋಗಗಳನ್ನು ತೊಳೆ ದುಕೊಂಡು ಶುದ್ಧಾ ಚಮನವನ್ನು ಮಾಡಿ ಕಡಲ್ಗಡದಲ್ಲಿ ದರ್ಭೆಯನ್ನು ಹಾಕಿ ಕುಳಿತು ಕೊಂಡು ಸಮುದ್ರರಾಜನನ್ನು ಕುರಿತು-ಎಲೈ ಸರ್ವಪ್ರಾಣಿಗಳಿಗೂ ಆಧಾರಭೂತ ನಾದ ರತ್ನಾಕರನೇ, ಮಹಾ ಗಾಂಭೀರ್ಯಸಂಪನ್ನನೇ, ನಿನ್ನ ಶರಣಾಗತನಾದ ನಾನು ಸೇನೆಯೊಡನೆ ಸುಖವಾಗಿ ಲಂಕೆಗೆ ಹೋಗುವುದಕ್ಕೆ ದಾರಿಯನ್ನು ಕೊಟ್ಟು ನನ್ನನ್ನು ಕಾಪಾಡುವವನಾಗಬೇಕು. ನೀನು ಹಾಗೆ ಮಾಡದಿದ್ದರೆ ನಾನು ನಿರಾಹಾರಿಯಾಗಿ ನಿನ್ನ ಸನ್ನಿಧಾನದಲ್ಲೇ ಪ್ರಾಣಗಳನ್ನು ಬಿಡುವೆನು ಎಂದು ನಿರಶನವ್ರತವನ್ನು ಕೈಕೊಂಡು ದರ್ಭಶಯ್ಕೆಯಲ್ಲಿ ಮಲಗಿಕೊಂಡನು. ಶ್ರೀರಾ ಮನು ಹೀಗೆ ಮರು ದಿನಗಳ ಪರ್ಯಂತರವೂ ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡುತ್ತ ಮಲಗಿಕೊಂಡಿದ್ದಾಗ್ಯೂ ಸಮುದ್ರರಾಜನು ಪ್ರಸನ್ನನಾಗಿ ಬಂದು ಮೈ ದೋರದಿರಲು ; ನಾಲ್ಕನೆಯ ದಿನದಲ್ಲಿ ಶ್ರೀರಾಮನು ಕಣ್ಣೆರದು ಮಹಾ ಕೋಪದಿಂದ