ಪುಟ:ರಾಣಾ ರಾಜಾಸಿಂಹ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ರಾಣಾ ರಾಜಸಿಂಹ [ಪ್ರಕರ ಳಾದ ತಪಸ್ಸಿನಿಯು ಸೂರ್ಯವಂಶಕುಲತಿಲಕನಾದ ಅಂಬರಾಧಿಪತಿ ಜಯಸಿಂಹನನ್ನು ಇಂಧ ಕರೋರಮಾತುಗಳಿಂದ ತಿರಸ್ಕರಿಸುವೆಯಾ ?” ಎಂದು ಗರ್ಜಿಸಿದನು ತಪಸ್ಸಿಸಿಯು “ ಯಾಕೆ ತಿರಸ್ಕರಿಸಬಾರದು? ಸೂರ್ಯವಂಶಕುಲಾಂಗಾರಾ! ನೀನು ಅಂಬರಾಧಿಸತಿಯೇ ಪಾಪಿಯಾದ ಔರಂಗಜೇಬನ ಜೋಡು ಎತ್ತುವ ಗುಲಾಮನು ಎಂದಾದರೂ ಆಂಬ ರದ ರಾಜಾಧಿರಾಜನಾಗಬಲ್ಲನೇ ? ” ಎಂದಳು ಆಗಮಾತ್ರ ಜಯಸಿಂಹನ ಶಿಟ್ಟು ಹಿಡಿಯಲಾರದಾಯಿತು - ಆತನು ಒಳ್ಳೆ ಆವೇಶದಿಂದ “ ಏನೇ, ನೀನೊಬ್ಬ ತಿರಿದುಣ್ಣುವ ಭಿಕ್ಷುಕಿ, ಆರ್ಯಕುಲಶಿರೋಮಣಿಯಾದ ಜಯಸಿಂಹನನ್ನೂ ಪರಮಪೂಜ್ಯನಾದಶ ಹನಶಹಾ ಔರಂಗಜೇಬನನ್ನೂ ಅಪಮಾನ ಪಡಿಸುವಷ್ಟು ಸೊಕ್ಕೆ? ನಾಲಿಗೆ ಯನ್ನು ಬಿಗಿಹಿಡಿ , ಇಲ್ಲದಿದ್ದರೆ ತುಂಡು ತುಂಡಾಗಿ ಕತ್ತರಿಸುವೆನು ??? ಕೂಡಲೆ ತಪಸ್ವಿನಿಯು ಶಿಟ್ಟಿನಿಂದ " ಎಲೋ' ಆರ್ಯ ಕುಲಕ ಲಂಕಾ'ದುರಾತ್ಮ' ಯವನನಾದ ಔರಂಗಜೇಬನು ಯಾರಿಗೆ ಬಾದಶಹನು? ಆನರಾಧಮನು ನಮ್ಮ ಬಾದಶ ತನ್ನ” ಎಂದು ಹೇಳಿದಳು - ಅದಕ್ಕೆ ಜಯಸಿಂಹನು ಹಲ್ಲು ಕಡಿಯುತ್ತಾ ಸಕಲ ಭರತ ಖಂ ಡದ ಬಾದಶಹನನ್ನು ಕುರಿತು ಈ ತರಹದ ರಾಜದ್ರೋಹದ ಮಾತುಗಳನ್ನು ಆಡುವಷ್ಟು ಎದೆಯ? ಏನು ಮಾಡ೨, ಸೀನು ತಪಸ್ವಿನಿಯಾದ ಹಂಗಸು ಇಲ್ಲದಿದ್ದರೆ ನಿನ್ನ ಸೊಕ್ಕಿನ ಪರಿಣಾವನ್ನು ಈ ಕತ್ತಿಯಿಂದ ಈಗಲೇ ತೋರಿಸುತ್ತಿದ್ದೆನು ” ಹೀಗೆ ಹೇಳುತ್ತಾ ರತ್ನ ಖಚಿತವಾದಕತ್ತಿಯನ್ನು ಭಂಗಾರದ ಒರೆಯಿಂದ ಹೊರಗೆಳದನು ಇದನ್ನು ಕಂಡು ತಪಸ್ವಿನಿಯು ಲೇಶಮಾತ್ರವೂ ಹದರದೆ ತಿರಸ್ಕಾರದಮಂದಹಾಸದಿಂದ “ಸಾಕುಸಾಕು, ನೀನು ನಿನ್ನ ಕತ್ತಿಯನ್ನು ಹೊರಗೆಳೆದು ನಿನ್ನ ವೀರತ್ವವನ್ನು ಪ್ರಕಾಶ ಪಡಿ ಸಿದ್ದರಿಂದಲೇ ನಿನ್ನಲ್ಲಿ ಕ್ಷಾತ್ರ ತೇಜವು ಎಷ್ಟಿರುವದಂದು ಗೊತ್ತಾಯಿತು ಪಂಢಾ ಆ ಕತ್ತಿಗೂ ನಾಚಿಕೆಯನ್ನುಂಟುಮಾಡುವಿ ನನ್ನ ಂಧ ತಪಸ್ವಿ