ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

194 ಕಥಾಸಂಗ್ರಹ-೪ ನೆಯ ಭಾಗ ಯರು ಸೀತೆಯೊಡನೆ ಸುಖಸಲ್ಲಾಪಗಳನ್ನು ಮಾಡುತ್ತ ಬರಲಿ ಎಂದು ಹೇಳಲು ; ಹಾಗೇ ಸಿದ್ದ ರಾದ ಅವರೆಲ್ಲರೊಡನೆ ಹೊರಟು ವಿಮಾನವನ್ನು ನಡಿಸುತ್ತ ಭರದ್ವಾಜಾ ಶ್ರಮದ ಸಮೆಕ್ಕೆ ಬರಲು ; ಆ ಕೂಡಲೆ ಆ ಮಹರ್ಷಿಯು ಪರಮ ಸಂತೋಷದಿಂದ ಕೂಡಿದವನಾಗಿ ಸಾವಿರಾರು ಜನ ಮುನಿಗಳೊಡನೆ ಕೂಡಿ ಬಂದು ಶ್ರೀರಾಮನನ್ನು ಎದುರ್ಗೊಂಡು ವೇದಘೋಷಗಳನ್ನು ಮಾಡುತ್ತ ರಾಮನ ಮೇಲೆ ಮಂತ್ರಾಕ್ಷತೆಗ ಳನ್ನು ತಳೆದು ಪುಷ್ಟ ಫಲಾದಿಗಳನ್ನು ಕೊಟ್ಟು--ಎಲೈ ರಘುರಾಜೇಂದ್ರನೇ, ಈ ದಿವಸ ನಮ್ಮ ಆಶ್ರಮದಲ್ಲಿದ್ದು ನಾವು ಮಾಡುವ ಆತಿಥ್ಯವನ್ನು ಸ್ವೀಕರಿಸಿ ಬೆಳಗಾಗು ತಲೇ ಹೊರಟು ಭರತನನ್ನು ಕಾಣಬಹುದು ಎಂದು ಹೇಳಲು ; ಆಗ ರಾಮನುಪೂಜ್ಯರಾದ ಭರದ್ವಾಜ ಮಹರ್ಷಿಗಳೇ, ತಮ್ಮ ಅಪ್ಪಣೆಯ ಮೇರೆಗೆ ನಡೆಯುವುದು ಎಹಿತವೇ ಎಂದು ತಿಳಿದಿರುವೆನು, ಆದರೆ ನಾನು ಈ ದಿವಸ ಹೋಗಿ ಭರತನನ್ನು ಕಾಣದೆಹೋದರೆ ಆತನು ಖಂಡಿತವಾಗಿ ಯಕ್ಷೇಶ್ವರನಿಗೆ ಆಹುತಿಯಾಗುವನು. ಇದರಲ್ಲಿ ಏನೂ ಸಂದೇಹವಿಲ್ಲ, ಇದಕ್ಕೆ ಏನು ಯೋಚನೆಯನ್ನು ಮಾಡಒಹುದು. ಅಪ್ಪಣೆಯಾದಂತೆ ನಡೆದುಕೊಳ್ಳುತ್ತೇನೆ ಎಂದು ರಾಮನು ಹೇಳಿದುದಕ್ಕೆ ಭರದ್ವಾಜ ಮಹರ್ಷಿಯು-ನೀನು ಈ ದಿವಸ ಮಾತ್ರ ನಮ್ಮ ಆಶ್ರಮದಲ್ಲಿರುವ ವರ್ತಮಾನ ವನ್ನು ತಿಳಿಸುವ ಹಾಗೆ ಹೇಳಿ ಶೀಘ್ರವಾಗಿ ಭರತನ ಬಳಿಗೆ ಹನುಮಂತನನ್ನು ಕಳು ಹಿಸು ಎನ್ನ ಲು; ಆಗ ಶ್ರೀರಾಮನು--ಆಗಲಿ, ಅದಕ್ಕೇನೆಂದು ಆಂಜನೇಯನನ್ನು ಕರೆದು ಹೇಳಬೇಕಾದ ಮಾತುಗಳನ್ನೆಲ್ಲಾ ಹೇಳಿ ಅವನನ್ನು ಭರತನ ಬಳಿಗೆ ಕಳುಹಿಸಿ ತಾನು ಪರಿವಾರಸಮೇತನಾಗಿ ಸುರಾಚಾರ್ಯನ ಮಗನಾದ ಭರದ್ವಾಜ ಮಹರ್ಷಿಯ ಆಶ್ರಮದಲ್ಲಿ ಪುಷ್ಪಕವಿಮಾನದಿಂದಿಳಿದು ಅಲ್ಲಿರುತ್ತಿದ್ದನು. ಆ ಬಳಿಕ ಭರದ್ವಾಜಮಹರ್ಷಿಯು ಕಾಮಧೇನುವನ್ನು ನೆನೆಯಲು; ಆ ಕೂಡಲೆ ಕಾಮಧೇನುವು ಬಂದು ದಿವ್ಯಭೋಜನಗಂಧಮಾಲ್ಯಾಂಬರವಿಭೂಷಣಾದಿಗ ಳಿಂದ ಸೀತಾರಾಮಲಕ್ಷ್ಮಣರನ್ನೂ ಕಪಿರಾಕ್ಷಸಸೇನೆಗಳನ್ನೂ ಸತ್ಕರಿಸಿದ ಬಳಿಕ ಶ್ರೀರಾಮನು ಮುನಿಪತಿಯ ಅಪ್ಪಣೆಯಿಂದ ಸರ್ವಪರಿವಾರಸಮೇತನಾಗಿ ಅಲ್ಲಿಂದ ಹೊರಟು ನಂದಿಗ್ರಾಮಕ್ಕೆ ಬರುತ್ತಿದ್ದನು. ರಾಮನ ಅಪ್ಪಣೆಯಿಂದ ಮೊದಲೇ ಹೊರಟಿದ್ದ ಆಂಜನೇಯನು ನಂದಿಗ್ರಾಮಕ್ಕೆ ಬಂದು ಶ್ರೀರಾಮನು ಬರಲಿಲ್ಲವೆಂದು ಪ್ರಾಣಗಳನ್ನು ತೊರೆದುಕೊಳ್ಳುವುದಕ್ಕಾಗಿ ಜ್ವಾಲಾಮಾಲೆಯಿಂದ ಕೂಡಿರುವ ಅಗ್ನಿ ಯನ್ನು ಪ್ರದಕ್ಷಿಣೆಮಾಡುತ್ತಿರುವ ಭರತನ ಭಕ್ತಿಭಾವವನ್ನು ನೋಡಿ ಅತಿಜಾಗ್ರತೆ ಯಿಂದ ಬಂದು ಆತನ ಕೈಯನ್ನು ಹಿಡಿದು ಕೊಂಡು--ಎಲೈ ಸತ್ಯಸಂಧನಾದ ಭರತನೇ, ಅಗ್ನಿಯನ್ನು ಪ್ರವೇಶಿಸಬೇಡ ! ಇದೋ ! ಶ್ರೀರಾಮನು ಬಂದನು. ಕೈಲಾಸ ಭದರದಂತೆ ಆಕಾಶಮಾರ್ಗದಲ್ಲಿ ಬರುತ್ತಿರುವ ಕುಬೇರನ ವಿಮಾನವನ್ನು ನೋಡು ! ಅದರ ನಡುಗಡೆಯಲ್ಲಿ ಪ್ರಕಾಶಮಾನವಾದ ಬೆಳ್ಳಡೆಯಿಂದಲೂ ಶ್ವೇತಚಾಮರಗಳಿ೦ ದಲೂ ಕೂಡಿರುವ ಮಣಿಪೀಠದಲ್ಲಿ ಕುಳಿತಿರುವವನೇ ನಿನ್ನ ಪ್ರಿಯಭ್ರಾತೃವಾದ ಶ್ರೀರಾಮನು, ನನ್ನ ಹೆಸರು ಹನುಮಂತನು, ಮತ್ತು ರಾಘವನಿಂದ ಕಳುಹಿಸಲ್ಪಟ್ಟ