ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚರಿತ್ರೆ

೯೧

ಕೃಷ್ಣ ಪರಮಹಂಸರು ಹೇಳಿದ ಒಂದೊಂದು ವಿಷಯವನ್ನು ತೆಗೆದುಕೊ೦ಡೂ ಒಂದೊಂದು ದೊಡ್ಡ ಗ್ರಂಥವನ್ನು ಬರೆಯಬಹುದೆಂದರಂತೆ. ಆಗ ಅವರು “ಹಾಗೆ! ಎಲ್ಲಿ ನೋಡೋಣ; ಯಾವುದಾದರೂ ಒ೦ದು ವಿಷಯವನ್ನು ಪ್ರಸ್ತಾಪಿಸಿ!” ಎಂದರಂತೆ. ಆಗ ಸ್ವಾಮಿಗಳು. ಅದನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ತಕ್ಕ ಸಾಮರ್ಥ್ಯವಿರಬೇಕಷ್ಟೆ!” ಎಂದುಹೇಳಿ, ನಾರಾಯಣನು ಎಲ್ಲೆಲ್ಲಿಯೂ ಇದ್ದಾ ನೆ ಎಂದು ಬೋಧಿಸುವ “ಆನೆಯೂ ನಾರಾಯಣ, ಮಾಹುತನೂ ನಾರಾಯಣ" ಎಂಬ ಕಥೆಯನ್ನು ಕುರಿತು ಹೇಳುವುದಕ್ಕೆ ಮೊದಲು ಮಾಡಿ, ದೈವಾಯತ್ತ ಪುರುಷಕಾರಗಳ ಪ್ರಸ್ತಾಪವನ್ನೆತ್ತಿ, ಈ ವಿಚಾರವಾಗಿ ನಮ್ಮವರು ಮತ್ತು ಪರದೇಶದವರು ಬಹುಕಾಲದಿಂದಲೂ ಮಾಡುತ್ತಿರುವ ತರ್ಕ ವಿತರ್ಕ, ಆದರೂ ಯಾವಸಿದ್ಧಾಂತವೂ ಸರಿಯಾಗಿಲ್ಲದೆ ಶ್ರೀ ಶ್ರೀ ಪರಮಹಂಸರವರು ಹೇಳಿರುವ ಒಂದು ಅಪೂರ್ವವಾದ ಸಮಾಧಾನ ಮುಂತಾದ ವಿಷಯಗಳನ್ನು ಕುರಿತು ಮರುದಿವಸ ಒಂದೇ ಸಮನಾಗಿ ತಿಳಿಯಹೇಳಿದರಂತೆ. ಹೀಗೆ ಅವರ ವಾಕ್ಕುಗಳು ಅಷ್ಟು ಅರ್ಥಗರ್ಭಿತವಾಗಿರುತ್ತವೆ.

ಪ್ರಾಯಶಃ ಪರಮಹಂಸರು ಹೊನ್ನು ಮಣ್ಣಗಳೆರಡೂ ಒಂದೇ ಎಂಬ ಬುದ್ಧಿ ಹುಟ್ಟುವುದಕ್ಕೆ ಮಾಡಿದ ಸಾಧನೆಯನ್ನು ಕೇಳದವರೇ ಇರಲಾರರು. ಹೀಗೆಯೇ ಪ್ರತಿಯೊಬ್ಬ ಸ್ತ್ರೀಯೂ ಜಗನ್ಮಾತೆಯ ರೂಪವೆಂಬ ಬುದ್ದಿ ಹುಟ್ಟುವಂತೆ ಸಾಧನೆಮಾಡಿ ಇವೆರಡರಲ್ಲಿಯೂ ತಾವು ಸಿದ್ಧರಾದ ಬಳಿಕ ಕೊನೆಯವರೆಗೂ ಕಾಮಿನೀಕಾಂಚನ'ಗಳನ್ನು ತ್ಯಾಗಮಾಡಬೇಕೆಂದು ಸಾರಿಸಾರಿ ಹೇಳುತ್ತಿದ್ದರು. ಇದು ಎಷ್ಟು ಸಾಮಾನ್ಯವಾಗಿ ಕಾಣುತ್ತದೆ! ಆದರೆ ಇವುಗಳನ್ನು ಬಿಡ ಬೇಕೆಂದರೆ ಎಷ್ಟು ಕಷ್ಟ ! ಒಂದುವೇಳೆ ನಾವು ಅವುಗಳನ್ನು ಬಿಟ್ಟರೂ ಅವು ನಮ್ಮನ್ನು ಬಿಡವು. ಬಾಯಲ್ಲಿ ಇವು ಬೇಡವೆಂದು ಹೇಳುವವರೇ ಅಪರೂಪ. ಆ೦ತರದಲ್ಲಿಯೂ ಇವುಗಳ ಮೇಲೆ ಆಶೆಯನ್ನು ಪೂರ್ತಿಯಾಗಿ ಬಿಡಬೇಕಾದರೆ ಎಲ್ಲರೂ ರಾಮಕೃಷ್ಣ