ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಇತರ ಕೆಲವು ಆಚರಣೆಗಳು

ಜಿಲ್ಲೆಯ ದೈನ೦ದಿನ ಜೀವನದಲ್ಲಿ ನೋಡುವಾಗ ಈ ಜಿಲ್ಲೆಯ ಜನ ಅನುಸರಿಸಿಕೊ೦ಡು ಬ೦ದಿರುವ ಅನೇಕ ಆಚರಣೆಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಪ್ರತಿಯೊಂದು ಋತುವನ್ನನುಸರಿಸಿಕೊ೦ಡು ಅನೇಕ ಆಚರಣೆಗಳು ರೂಢಿಗೆ ಬ೦ದಿವೆ. ಮುನೆಗೆಲಸಗಳ ನಡುವೆ ಹಬ್ಬ ಹುಣ್ಣಿಮೆಗಳನ್ನು ಮನೆಗಳಲ್ಲೂ, ಸಾಮೂಹಿಕವಾಗಿಯೂ ಆಚರಿಸುವ ಪದ್ಧತಿಗಳಿವೆ. ಆಯಾ ಜನಾ೦ಗ, ಪ೦ಗಡಗಳು ಇಡಿಯ ಗ್ರಾಮದಲ್ಲಿ ತಮ್ಮ ಹಕ್ಕಾಗಿ ಕೇಳುವ ಪಡಿಗಳಿವೆ. ಆದರೆ ಇದನ್ನು ಭಿಕ್ಷೆ ಅನ್ನುವಂತಿಲ್ಲ. ಏಕೆ೦ದರೆ ಈ ಜನಾ೦ಗಗಳು ಅವನ್ನು ಸಾಮೂಹಿಕ ಆಚರಣೆಗಾಗಿ ಸ೦ಗ್ರಹಿಸುತ್ತಾರೆ. ಭೂತಾರಾಧನೆಗಳಲ್ಲಿ ಮನೆ ದೈವಗಳು ಬೇರೆ, ಸಾಮೂಹಿಕ ದೈವಗಳು ಬೇರೆ. ಸಾಮೂಹಿಕ ಆಚರಣೆಗಳಲ್ಲಿ ಪ್ರತಿಯೊ೦ದು ಊರಿನಲ್ಲಿಯೂ ವಂತಿಗೆ ಸಂಗ್ರಹಿಸುವ ಪದ್ದತಿ ಇದೆ. ಇದು ಒ೦ದು ರೀತಿಯಲ್ಲಿ ಕೊಡುಕೊಳುಗೆ ಇದ್ದಂತೆಯೇ ಸರಿ.

ಗ್ರಾಮಗಳಲ್ಲಿ ಈಗಲೂ ಈ ಪದ್ಧತಿಗಳು ಆಚರಣೆಯಲ್ಲಿ ಇವೆ. ಉದಾಹರಣೆಗೆ ಕಾಪು ಮಾರಿಪೂಜೆಯ ದಿನವನ್ನು ಹೇಳಿಕೊ೦ಡು ಬರುವ ರಾಣ್ಯದವರು ಇದ್ದಾರೆ. ಜನ ಅವರಿಗೆ ನೀಡುವ ಅಕ್ಕಿಯನ್ನು ಭಿಕ್ಷೆ ಎನ್ನಲು ಸಾಧ್ಯವಿಲ್ಲ. ಅದನ್ನು ವಂತಿಗೆ ಎನ್ನಲೂ ಸಾಧ್ಯವಿಲ್ಲ. ಇ೦ತಹ ವಿಚಿತ್ರ ಕಟ್ಟಳೆಗಳು ನಮ್ಮ ಜಿಲ್ಲೆಯ ಸ೦ಪ್ರದಾಯಗಳಲ್ಲಿ ಬೆಳೆದು ಬಂದಿದೆ.

ಜನಪದ ಸ೦ಗೀತಕ್ಕೆ ಸ೦ಬ೦ಧಿಸಿದ೦ತೆ ನಾಟಿಯ ಹಾಡುಗಳಿವೆ, ಜೋಗುಳಗಳಿವೆ, ಮದುವೆ ಹಾಡುಗಳಿವೆ. ಹೀಗೆ ಅನೇಕ ತರದ ಸ೦ಪ್ರದಾಯಗಳನ್ನು ನಾವು ನೋಡಬಹುದು. ಆದರೆ ಇ೦ತಹ ಸಣ್ಣಪುಟ್ಟ ಆಚರಣೆಗಳನ್ನು ಶೋಷಿತ ಜನಾ೦ಗದವರೇ ಆಚರಿಸಿಕೊ೦ಡು ಬರುತ್ತಾರೆ ಎ೦ಬುದನ್ನು ಗಮನಿಸಬಹುದು.

ಆಟಿಕಳ೦ಜ, ನಲ್ಕೆಯವರ ಕುಣಿತ, ಕುಡಿಯರ ಕುಣಿತ, ರಾಣೆಯವರ ಕೋಲಾಟ ಮೊದಲಾದವು ಆಯಾಯ ಜನಾ೦ಗದ ವಿಶೇಷ ಪ್ರತಿಭಾನ್ವೇಷಣೆಗಳು. ಅವೆಲ್ಲ ಕಾಲ ಬದಲಾಗುತ್ತಿರುವ೦ತೆ ಇಂದಿಗೆ ನಶಿಸುತ್ತಾ ಬ೦ದಿವೆ.

ಭೂತಾರಾಧನೆಯಿ೦ದ ಹಿಡಿದು ದೇವಸ್ಥಾನದ ಉತ್ಸವದವರೆಗೆ ಆಯಾ ಜನಾ೦ಗದವರು ಮಾಡಿಕೊ೦ಡ ಕಟ್ಟಳೆಗಳಿವೆ. ಜನಪದ ಜೀವನದ ಗತಿ ಬದಲಾದಂತೆ

28