ಧಾರಿಯ ಮಹಿಮೆಯಂದವನೀಗ ||
ಒಡೆಯ ಕೋಪಿಸಬಾರದೆಂದು ಪನ್ನಗರಾಜ |
ನಡುವಿರುಳಿನೊಳೆದ್ದು ಬಂದನು - ಮಳೆ |
ಹೊಡೆಯಲಂಜುವದನ್ನು ಕಂಡನು -ತನ್ನ |
ಹಡೆಯನಂಬರಕೆತ್ತಿ ನಿಂದನು ಮಾಣಿ |
ಕ್ಯಗಳನು-ಪ್ರಕಾ |
ಶಗಳನು-ಮಾಡಿ |
ಕೊಡುತಾಡುತಲೆ ನಡೆತಂದನು-ಭೋ |
ರ್ಗುಡಿಸುವ ಯಮುನೆಯ ಕಂಡನು ||
...............................
...............................
ಯಮುನೆಯನ್ನು ದಾಟಿ ನಂದಗೋಕುಲಕ್ಕೆ ಬಂದ ವಸುದೇವನು-
ಪೊತ್ತುಕೊಂಡಿರ್ದ ಗೋವಿಂದನಾನಂದದ |
ಮೂರ್ತಿಯನತ್ತಿ ತಗ್ಗಿರಿಸಿದ ಕೈಯೊಳ್ |
ಮತ್ತೆ ಮಾಯಾಂಗಿಯ ಧರಿಸಿದ ಕಾ |
ಣುತ್ತ ಮನದೊಳು ಕಾತರಿಸಿದ-ತಿರು |
ಗಿದ ಬೇಗ ಸೆರೆ |
ಮನೆಗಾಗ-ಬಳಿ |
ನಿತ್ತೊಳಪೊಗಲು ಮುಚ್ಚಿತು ಕದ ಕಾಲಿ |
ಗೊತ್ತೆ ಸಂಕಲೆ ಹೇಳಲೇನದ ||
ಆಗ ಶಿಶುವಳುವುದನ್ನು ಕೇಳಿ ಎಚ್ಚತ್ತ ಕಂಸ-
ತ್ರಿವುಡೆ :
ಪುಟ್ಟಿದನು ಪಗೆ ಎಂದು ಮನದಲಿ |
ಬಿಟ್ಟಮಂಡೆಯೊಳೊದರಿ ಬಲುಬುಸು |
ಗುಟ್ಟುತೇಳುತ ಬೀಳುತಲೆ ಕಂ | ಗೆಟ್ಟುಭರದಿ |
ತಡವುತೆಡವುತ ಒಂದುಬಾಗಿಲ |
ನೊಡೆದು ಹುಂಕರಿಸುತ್ತ ಶಿಶುವನು |
ಕೊಡುಕೊಡೆನುತಾರ್ಭಟಿಸಿನಿಂದನು | ಹೊಡೆದುಕೈಯ ||
ಇದೊಂದು ಹೆಣ್ಣು ಮಗುವನ್ನಾದರೂ ಉಳಿಸಲಾರೆಯಾ? ಎಂದು ದೇವಕಿಯು ಅಣ್ಣನಾದ ಕಂಸನನ್ನು ಪ್ರಾರ್ಥಿಸುವ ಹತ್ತಕರುಳಿನ ಮರುಕವು ಹೀಗಿದೆ :
ಅಷ್ಟತಾಳ :
ಅಣ್ಣಾ ಕೊಲ್ಲುವುದೇಕೊ ಮಗಳ ಇಕೊ |
ಹೆಣ್ಣು ಹುಟ್ಟಿತು ನೋಡು ಪುಣ್ಯಭಾಗ್ಯಗಳ || ಪಲ್ಲ
ಗಗನದ ನುಡಿ ತಪ್ಪಿತಲ್ಲ-ನಿನ್ನ |
ಪಗೆಯನೆಂಬಾ ಮಾತು ಪುಸಿಯಾಯಿತಲ್ಲ ||