ಅಕ್ಕ ನೀ ಸುಮ್ಮನಿರೆ ಆದರೆ ಕಳ್ಳ | ಸಿಕ್ಕದೆ ಪೋಪನೇನೆ |
ದಕ್ಕದು ಕಳವುಹಾದರವೆರಡಕು ಸಣ್ಣ |
ಮಕ್ಕಳಾದರು ಕಂಡು ಸೊಕ್ಕ ಮುರಿಯಬೇಕು ||
ಮರುದಿನ ಬೆಳಗಾಗಲು ಮತ್ತೊಬ್ಬಳು ತುರುಗೆಲಸದಲ್ಲಿರುವಾಗ ಚಿಣ್ಣ ಕೃಷ್ಣನು
ಮಿಣ್ಣನೆ ಮನೆಯೊಳ ಹೊಕ್ಕು 'ಕೆನೆ ಮೊಸರ ಸುರಿದೋಡು'ವುದನ್ನು ಕಂಡು ಓಡಿಬಂದು
ನೆರೆಮನೆಯ ಸಖಿಯೊಡನೆ ಹೇಳುತ್ತಾಳೆ :
ಝಂಪೆ :
ಅಕ್ಕ ಕೇಳೀ ಕೇರಿ ಒಕ್ಕಲೊಳು ಕಳುವವರು |
ಮಕ್ಕಳೊಳಗಲ್ಲದೆ ಬೇರೊಬ್ಬರಿಲ್ಲ ||
ನಂದಗೋಪ ಯಶೋದೆ ಕಂದನಲ್ಲದೆ ಮನೆಗೆ |
ಬಂದು ಕಳುವವರಿಲ್ಲ ಬದಲೊಬ್ಬರಲ್ಲ |
ಅರಸುಗಳ ಬಾಲಕರು ಅನ್ಯಾಯ ಮಾಡಿದರೆ |
ಪರರೊಡನೆ ಪೇಳ್ವರದ ಪರಿಹರಿಪರಿಲ್ಲ ||
'ಬೇಲಿಯೇ ಬೆಳೆ ತಿಂದು ಕೆಡಿಸಿದರೆ ನಾವಿನ್ನು ಹೇಗೆ ಬದುಕಲಿ? ಎಂದು ಎಲ್ಲರೂ
ಒಗ್ಗಟ್ಟಾಗಿ ಕೃಷ್ಣನ ಚಿಣ್ಣಾಟವನ್ನು ದೂರಲು ಅರಮನೆಗೆ ಬರುತ್ತಾರೆ. ಬಂದವರನ್ನು
ಕಂಡು ಗೋಪಿಯು 'ಊಟ ಮೀಹಗಳಲ್ಲಿ ತೊಡರು ಬಂದಡರಿತೆ ಏನಿರವ್ವ | ಬಲು |
ಕಾಟಕ, ಜನರಿಂದ ಕನವು ಬಂದೆಸಗಿತೆ ಏನಿರವ್ವ?' ಎಂದು ಎಲ್ಲರೊಟ್ಟಾಗಿ ಬಂದ
ಕಾರಣವನ್ನು ಕೇಳಲು ಅವರು ಕಳ್ಳ ಕೃಷ್ಣನಾಟಗಳನ್ನು ಮುದದಿಂದ ಹೀಗೆ ಹೇಳುತ್ತಾರೆ :
ಮಟ್ಟೆ ತಾಳ :
ಕೇಳೆ ಗೋಪಿ ರಂಗನಾಟವ ನಿನ್ನಲ್ಲಿ ನಾವು |
ಹೇಳದಿರುವುದುಚಿತವಲ್ಲ ಪೇಳ್ವರಿಷ್ಟು ಕಾರ್ಯವಿಲ್ಲ ||
ಸರಿಯ ರಾತ್ರಿಯೊಳಗೆ ಬಾಗಿಲ್ಕುರಿಯಲಾಗಿ ಬೆದರಿ ಕದವ |
ತೆರೆಯಲೊಳಗೆ ಬಂದು ನಾ | ವರಿಯದಂತೆ ಹಾಲು ಮೊಸರ |
ಸುರಿಯಲದರ ನೋಡಿ ಸುಮ್ಮನೆ ನಾವಿರಲು ಸ
ಕರೆಯ ಕದ್ದು ಮಲುವ ಗಮ್ಮ | ನನಗುತ ಮೇ |
ಗರಿಯ ಮಾಡಿ ಬಿಡುವ ನಮ್ಮ | ನೆ-ನೀ ಕರುಣದಿಂದ || ಕೇಳೆ
ಅಟ್ಟಿದ ಮೇಲಡಗಿಸಿ ಬಚ್ಚಿಟ್ಟರದರ ಬುಡಕೆ ಕೋಲ |
ಲಿಟ್ಟು ತೂತುಮಾಡಿ ಬಂ | ದಷ್ಟು ಬಾಯನಿಟ್ಟು ಸವಿಯು |
ತೊಟ್ಟಿನವರ ಕರೆದು ಕೊಡುವ | ನು ಬೆದರಿಸೆ ಕ |
ಲ್ಲಿಟ್ಟು, ಭಾಂಡಗಳನೆ ಒಡೆವ | ನುಸತಿಪತಿಯರ |
ಜುಟ್ಟುಜುಟ್ಟು ಕಟ್ಟಿಬಿಡುವ | ನುನೀ ಕರುಣದಿಂದ || ಕೇಳ
'ಸಂಜೆಯೊಳಂಗಳಕಿಳಿಯದ ಬಾಲ'ನ ಮೇಲೆ ಸಲ್ಲದ ದೂರುಗಳನ್ನು ಹೇಳಿದರೆ
ಗೋಪಿಯು ನಂಬುವಳೆ? ಅವಳು ಪರಿಹಾಸದಿಂದ...: