ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

36
ನೋಡಿ ಕೊಂಡಾಡಬೇಕೆಂಬುದು ಅವರ ಬಯಕೆ. ಅಷ್ಟರಲ್ಲಿ ಒಬ್ಬ ಹಳ್ಳಿಯವನು ಒದ್ದೆಯಿಂದ ಬಂದು ಸಂಗನ ಲಿಂಗದ ಮೇಲೆ ತನ್ನ ಚರಿಗೆಯಲ್ಲಿಯ ನೀರನ್ನು ಸುರಿದು, ಅದರ ಮೇಲೆ ನಾಲ್ಕು ಪತ್ರಿಗಳನ್ನಿರಿಸಿ, “ಶಂಭೋ! ಹರಹರ! ಎಂದು ಗದ್ಗರಿಸಿ, ಆತನನ್ನು ಅನನ್ಯಭಾವದಿಂದ ವಂದಿಸಿ, ಅಲ್ಲಿಂದ ಹೊರ ಬಂದನು. ಈ ಹುಂಬನು ತನ್ನ ಪೂಜಾಲಂಕಾರಗಳನ್ನೆಲ್ಲ ಕೆಡಿಸಿದನಲ್ಲ ! ಎಂಬ ವಿಚಾರದಿಂದ ವೈದಿಕರು ಕಿಡಿಕಿಡಿಯಾದರು. ಕೆಂಗಣ್ಣದಿಂದ ಆ ಹಳ್ಳಿಗನನ್ನು ದಿಟ್ಟಿಸಿದರು. ಆಗ ಅಕಸ್ಮಾತ್ತಾಗಿ ಅಲ್ಲಿಯೇ ಬಂದು ನಿಂತಿದ್ದ ಬಸವಣ್ಣನು ಅದನ್ನು ಕಂಡು ಹೀಗೆಂದನು :
ನಾದಪ್ರಿಯ ಶಿವನೆಂಬರು-ನಾದಪ್ರಿಯ ಶಿವನಲ್ಲವಯ್ಯಾ !
ವೇದಪ್ರಿಯ ಶಿವನೆಂಬರು-ವೇದಪ್ರಿಯ ಶಿವನಲ್ಲವಯ್ಯಾ !
ನಾದವ ಮಾಡಿದ ರಾವಳಂಗೆ ಅರೆಯಾಯುಷ್ಯವಾಯಿತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು!
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ !
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ |
ಈ ವಚನವನ್ನು ಕೇಳಿ ವೈದಿಕರು ನಾಚಿಕೊಂಡರು.

ಭಕ್ತಿಯು ಬೆಳೆಯಲಿರುವಾಗ ಸಾಧಕನಲ್ಲಿ ಕೆಲ ಸಿದ್ದಿಗಳು ಮೈದಳೆಯುವವು. ಅವನ್ನು ಆತನು ತೊರೆಯಬೇಕು. ಅವುಗಳ ಬಲೆಯಲ್ಲಿ ಎಂದೂ ಬೀಳಕೂಡದು. ಅವನ್ನೆಂದೂ ಬಳಸಕೂಡದು, ಎಂಬುದು ಭಕ್ತಿಶಾಸ್ತ್ರದ ಕಟ್ಟಪ್ಪಣೆ. ಏಕೆಂದರೆ ಅವುಗಳ ಬಳಕೆಯಿಂದ ಅಹಂಕಾರವು ಬೆಳೆದು, ಭಕ್ತಿಯು ಅಳಿಯತೊಡಗುವದು. ಗುರುಗಳಿಂದ ಇದನ್ನರಿತ ಬಸವಣ್ಣನು ಅವನ್ನು ಮೊದಮೊದಲು ಬಳಸುತ್ತಿರಲಿಲ್ಲ. ಪವಾಡಗಳನ್ನು ಮೆರೆಯುತ್ತಿರಲಿಲ್ಲ ಆದರೆ ಸಂಗನೇ ಆತನಿಗಾಗಿ, ಆತನ ಹಿರಿಮೆಯು ಜನರಿಗೆ ತಿಳಿಯಲಿ ಎಂದು ಕೆಲ ಪವಾಡಗಳನ್ನು ಅಲ್ಲಿ ಮೆರೆದನು. ಮುಂದೆ ಕಲ್ಯಾಣದಲ್ಲಿ ತನ್ನ ಮತಪ್ರಚಾರಕಾರ್ಯವು ಭರದಿಂದ ಸಾಗಲು ಬಸವಣ್ಣನು ಕೆಲವು ಪವಾಡಗಳನ್ನು ಮೆರೆದನು ನಿಜ