ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
27

ಕಂಡ ಕನಸನ್ನು ನೆನೆದು ಅವನೆಂದ: "ಏನಾಶ್ಚರ್ಯ! ನನ್ನನ್ನು ಕನಸಿನಲ್ಲಿ ಕರೆದ ಮುನಿಗಳೇ ಇಲ್ಲಿರುವರಲ್ಲಾ ಅದೇ ರೂಪು, ಅವೇ ನುಡಿಗಳು! ಸಂಗಮ ಇವರನ್ನೇ ಕಳುಹಿಸಿದ್ದನೇ ನನ್ನೆಡೆ? ಬಸವಣ್ಣನ ಮನಸ್ಸನ್ನರಿತು ಮುನಿಗಳೆಂದರು: "ಅಚ್ಚರಿಪಡುವ ಅಗತ್ಯವಿಲ್ಲ, ಕಂದಾ, ಸಂಗನ ಕರುಣದಿಂದ ಇಂಥ ಸಂಗತಿಗಳು ಜರುಗುವವು... ನೀನೀಗ ತುಂಬ ಬಳಲಿರುವಿ. ನಮ್ಮ ಆಶ್ರಮಕ್ಕೆ ನಡೆ, ಸ್ನಾನಭೋಜನಗಳನ್ನು ತೀರಿಸಿ ವಿಶ್ರಾಂತಿ ಪಡೆ, ಸಕಾಲಕ್ಕೆ ಎಲ್ಲವೂ ತಿಳಿಯಬಹುದು!