ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

102

ಕೊನೆಗೆ ತಮ್ಮಲ್ಲಿ ಕಾಮ, ಕ್ರೋಧ, ದಂಭ, ಅಹಂಕಾರಾದಿ ದುರ್ಗುಣಗಳ ರಾಶಿಯು ತುಂಬಿರುವದು. ತಮ್ಮ ತಪ್ಪು ಅನಂತಕೋಟಿ. ಆದರೆ ಭಗವಂತನ ಸೈರಣೆಗೆ ಲೆಕ್ಕವಿಲ್ಲ. ಭಗವಂತನು ತಮ್ಮ ಅವಗುಣಗಳನ್ನು ಲೆಕ್ಕಿಸದೆ, ಉತ್ತಮಿಕಿಯನೆ ಪೂರೈಸಬೇಕು. ಶರಣರ ಭಕ್ತಿಭಾಂಡಾರವನ್ನು ತಮಗೆ ದಯಪಾಲಿಸಬೇಕೆಂದು ಬಸವಣ್ಣನವರು ಬೇಡಿಕೊಂಡರು.
ಎಂತೋ ಶಿವಭಕ್ತಿಯ ನಾನುಪಮಿಸುವೆನಯ್ಯಾ ?
ಎಂತೋ ಶಿವಾಚರವೆನಗೆ ವೇದ್ಯವಪ್ಪುದಯ್ಯಾ ?
ಕಾಮ, ಕ್ರೋಧ, ಲೋಭ, ಮೋಹದಿಂದ ಕಟ್ಟುಪಡೆದೆನು;
ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ ;
ಪಂಚೇಂದ್ರಿಯ, ಸಪ್ತಧಾತು.
ಹಂಚು ಹರು ಮಾಡಿ ಕಾಡಿಸುವಯ್ಯಾ !
ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ -
ಕೂಡಲಸಂಗಮದೇವಾ, ನಾನೇವೆನೇವೆನಯ್ಯಾ ?
ಮೇರು ಗುಣವನರಸುವದೆ ಕಾಗೆಯಲ್ಲಿ ?
ಪರುಷ ಗುಣವನರಸುವದೆ ಕಬ್ಬುನದಲ್ಲಿ ?
ಸಾಧು ಗುಣವನರಸುವನೆ ಅವಗುಣಿಯಲ್ಲಿ ?
ಚಂದನ ಗುಣವನರಸುವದೇ ತರುಗಳಲ್ಲಿ ?
ಸರ್ವಗುಣಸಂಪನ್ನ ಲಿಂಗವೇ, ನೀನೆನ್ನಲ್ಲಿ ಅವಗುಣವನರಸುವರೇ,
ಕೂಡಲಸಂಗಮನ ಶರಣರ ಭಕ್ತಿ ಭಂಡಾರವು
ಎನಗೆಂತು ಸಾಧ್ಯವಪ್ಪುದು ? ಹೇಳೆನ್ನ ತಂದೆ.
ತಮ್ಮ ವಿಕಾರಗಳನ್ನು ಅವಗುಣಗಳನ್ನು ಅಲ್ಲಗಳೆಯಲು ಭಗವಂತನು ತನ್ನ ಕರುಣದ ಬೆಂಬಲವನ್ನು ನೀಡಬೇಕೆಂದು ಆತನನ್ನು ಬಸವಣ್ಣನವರು ಬೇಡಿಕೊಂಡಂತೆ, ತಮ್ಮನ್ನು ಅತಿಯಾಗಿ ಕಾಡುತ್ತಿರುವ ಸಂಸಾರದ ಬಂಧನವನ್ನು ಕಡಿಯಲು ನೆರವಾಗಬೇಕೆಂದು ಆತನನ್ನು ಅವರು ಅಂಗಲಾಚಿ ಬೇಡಿಕೊಂಡರು.