ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

88
ನಿಮ್ಮೊಡನೆ ಸದಾಚಾರ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತರು ಹೋದರು.
ಅಣ್ಣಾ ! ಮರ್ತ್ಯಲೋಕದ ಮಹಾಮನೆಯು ಶೂನ್ಯವಾಯಿತು.
ಅಯ್ಯಾ, ಬಸವಣ್ಣಾ! ಎನ್ನ ನೊಯ್ಯದೆ ಹೊದೆಯಲ್ಲಾ!
ಪಂಚಪರುಷರಮೂರುತಿ ಬಸವಣ್ಣ
ಬಸವಣ್ಣ ಪ್ರಿಯ ಚನ್ನಸಂಗಯ್ಯಂಗೆ,
ಪ್ರಾಣಲಿಂಗವಾಗಿ ಹೋದೆಯಲ್ಲಾ! ಸಂಗನಬಸವಣ್ಣ!

★ ★ ★ ★

ಈ ಅವಧಿಯಲ್ಲಿ ಇತ್ತ ಕಡೆ ಜಗದೇವ ಬೊಮ್ಮಣ್ಣರು ಮಾಚಯ್ಯನ ಆಶೀರ್ವಾದವನ್ನು ಪಡೆದು, ತಮ್ಮ ಸಮಯವನ್ನು ಕಾಯುತ್ತಿದ್ದರು. ಅವರು ಬಿಜ್ಜಳನ ಪಂಚು ಹಿಡಿಯುವವರಿದ್ದಮೂಲಕ ಒಂದು ದಿನ ರಾತ್ರಿ ತಕ್ಕ ಅವಕಾಶವನ್ನು ಕಂಡು ಅವರು ರಾಯನನ್ನು ತೀರಿಸಿಬಿಟ್ಟರು. ಈ ಕ್ರೂರ ಕೊಲೆಯ ಮೂಲಕ ಶರಣರಲ್ಲಿ ರಾಜಪರಿವಾರದ ಪ್ರಚಂಡ ಕ್ರೋಧಕ್ಕೆ ತುತ್ತಾದರು. ಅವರು ಅಂದಿನಿಂದ ಕಲ್ಯಾಣದಲ್ಲಿ ಇರುವದೇ ಅಸಾಧ್ಯವಾಯಿತು. ಪ್ರಭುದೇವರೊಡನೆ ಒಂದು ತಂಡವು ಶ್ರೀಶೈಲದೆಡೆ ತೆರಳಿತು. ಮತ್ತೊಂದು ತಂಡವು ಚೆನ್ನಬಸವಣ್ಣನೊಡನೆ ಉಳವಿಯೆಡೆ ಸಾಗಿತು. 'ಒಬ್ಬ ಜಂಗಮನ ಅಭಿಮಾನದಿಂ ಕಲ್ಯಾಣಮಯ ಕಲ್ಯಾಣವು ಹಾಳಾಯಿತು ! ಭಗವಂತನ ಇಚ್ಛೆ !

★ ★ ★ ★

ಇಲ್ಲಿ ಒಂದು ಮಾತು ಓದುಗರ ಜಿಜ್ಞಾಸೆಯನ್ನು ಕೆರಳಿಸದಿರದು. “ಕೆಟ್ಟಿತ್ತು ಕಲ್ಯಾಣ ಜಂಗಮನ ಹಟದಿಂದ' ಎಂಬುದನ್ನು ಅರಿತ ಬಸವಣ್ಣನವರು, ಪವಾಡವನ್ನು ಮೆರೆದು ಅದನ್ನು ಯಾಕೆ ರಕ್ಷಿಸಲಿಲ್ಲ? ಸಂಗನಾದರೂ ಅವರಿಗಾಗಿ ಹಿಂದಿನಂತೆ ಪವಾಡವನ್ನೇಕೆ ಮೆರೆಯಲಿಲ್ಲ. ಅಗಮ್ಯವಾದ ಭಗವಂತನ ಉದ್ದೇಶವನ್ನು ನಾವು ಊಹಿಸಲರಿಯವು. ಆದರೆ ಬಸವಣ್ಣನವರು ಈ ಸಂದರ್ಭದಲ್ಲಿ ಪವಾಡವನ್ನು ಮೆರೆಯದಿರುವ ಕಾರಣವನ್ನು ಮಾತ್ರ ಊಹಿಸಬಲ್ಲೆವು. ಬಸವಣ್ಣನವರಲ್ಲಿ