ಪುಟ:ಕರ್ನಾಟಕ ಗತವೈಭವ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫ನೆಯ ಪ್ರಕರಣ - ವಾಙ್ಮಯ ವೈಭವ

೧೧೫


ಕೈಯನ್ನು ಕೂಡಿಸಿ ಉಭಯರಿಗೂ ತಮ್ಮ ಧರ್ಮಕ್ಕನುಸಾರವಾಗಿಯೇ ವರ್ತಿಸಲು ಬೋಧಿಸಿದನು. ಇದಕ್ಕಿಂತ ಪರಧರ್ಮ ಸಹಿಷ್ಣುತೆಯು ಸಿಕ್ಕುವುದೇ? ಈ ಸದ್ಗುಣವು ನಮ್ಮ ಅರಸರಿಗೆ ಪೂರ್ಣವಾಗಿ ಗೊತ್ತಿತ್ತು. ಜಾತಿ ಜಾತಿಗಳಿಗೆ ಅವರು ಎಂದೂ ದ್ವೇಷವನ್ನು ಬೆಳಿಸಲಿಲ್ಲ. ಬುದ್ದಿವಂತರು ಕೇವಲ ತಮ್ಮ ಬುದ್ಧಿಬಲದಿಂದಲೇ ಜನರನ್ನು ತಮ್ಮ ಕಡೆಗೆ ಒಲಿಸಿಕೊಳ್ಳಬೇಕೆಂಬ ತತ್ವವನ್ನು ಅವರು ಅರಿತವರಾಗಿದ್ದರು.

ಇರಲಿ! ಕನ್ನಡಿಗರೇ! ಈಗ ಆ ಧಾರ್ಮಿಕ ಸಂಪತ್ತು ಎಲ್ಲಿ ಉಳಿದಿದೆ? ನಾವು ನಾಮ ಮಾತ್ರಕ್ಕೆ ಶೈವರೂ ವೈಷ್ಣವರೂ ಆಗಿದ್ದೇವೆ. ಇದು ಅನುಕಂಪನೀಯವಲ್ಲವೋ?



೧೫ನೆಯ ಪ್ರಕರಣ.


ವಾಙ್ಮಯ ವೈಭವ

"No scheme of self-government, however benevolently or generously it may be bestowed upon us, will ever make us a self-governing nation, if we have no respect for the languages our mothers speak"
-M. K. Gandhi.
“ಯಾರು ಎಷ್ಟೇ ಪರೋಪಕಾರ ಬುದ್ಧಿಯಿಂದ ಅಥವಾ ಉದಾರ ಬುದ್ಧಿಯಿಂದ ಯಾವ ತರದ ಸ್ವರಾಜ್ಯವನ್ನೇ ನಮಗೆ ಕೊಡಲಿ; ನಮ್ಮ ತಾಯಿಯಂದಿರಾಡುವ ಭಾಷೆಯ ವಿಷಯದಲ್ಲಿ ನಮ್ಮ ಮನದಲ್ಲಿ ಆದರ ಬುದ್ಧಿಯಿಲ್ಲದಿದ್ದರೆ ನಾವು ನಿಜವಾದ ಸ್ವರಾಜ್ಯ ಭೋಗಿಗಳಾಗಲಾರೆವು.
-ಮಹಾತ್ಮಾ ಗಾ೦ಧಿ.
ಕ್ರಿ.ಶಕದ ೧೫೦ರಲ್ಲಿ ಹಿಂದುಸ್ಥಾನಕ್ಕೆ ಬಂದ ಪ್ರಖ್ಯಾತ ಪ್ರವಾಸಿಯಾದ ಟಾಲೆಮಿಯು ಬಾದಾಮಿ, ಇಂಡಿ, ಕಲಕೇರಿ, ಪಟ್ಟದಕಲ್ಲ, ಇವೇ ಮುಂತಾದ