ಪುಟ:ಕರ್ನಾಟಕ ಗತವೈಭವ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೪೨

ಕರ್ನಾಟಕ-ಗತವೈಭವ


ಮತ್ತು ಕೂಡ ಇಲ್ಲಿಯ ಲೇಖಗಳನ್ನು ಲೆಫ್ಟಿನೆಂಟ್ ಬ್ರಾಟ್ (Lieut. Brat) ಎಂಬವರು ೧೮೫೪ನೆಯ ಇಸವಿಯಲ್ಲಿ ರಾಯಲ್ ಏಶಿಯಾಟಿಕ್ ಸೊಸೈಟಿಯ ಮುಂಬಯಿ ಶಾಖೆ (Bombay Branch of the Royal Asiatic Society)ಯ ಮಾಸಪತ್ರಿಕೆಯ ೫ ನೇ ಸಂಪುಟ (Vol.) ನಲ್ಲಿ ಮುದ್ರಿತವಾಗಿರುತ್ತವೆ. ಆರನೆಯದರಲ್ಲಿ ಕಾನ್ಹೆರಿಯ ವಿಷಯಕ್ಕೆ ಉತ್ತಮವಾದ ಲೇಖಗಳು ಮುದ್ರಿತವಾಗಿವೆ. ೭ನೆಯದರಲ್ಲಿ ನಾಸಿಕದ ಲೇಖಗಳಿವೆ. ೮ನೆಯದರಲ್ಲಿ ಬಾಡ್ಸಾ ವಿಷಯಕ ಲೇಖಗಳಿವೆ. ಶಾತವಾಹನರು ೨ನೆಯ ಶತಮಾನದವರೆಗೆ ಆಳಿದರು. ಮುಂದೆ ೫ನೆಯ ಶತಮಾನದವರೆಗೆ ಯಾರು ಆಳಿದರೆಂಬುದು ಚೆನ್ನಾಗಿ ಗೊತ್ತಾಗುವುದಿಲ್ಲ. ಬಹಳವಾಗಿ ತ್ರೈಕೂಟರೆಂಬವರು ಆಳಿದಂತೆ ತೋರುತ್ತದೆ. ಅವರದೊಂದು ತಾಮ್ರಶಾಸನವು ಕಾನ್ಹೆರಿಯಲ್ಲಿ ದೊರೆತ್ತಿದ್ದು, ಅದು ೫ನೆಯ ಸಂಪುಟದಲ್ಲಿ ಮುದ್ರಿತವಾಗಿದೆ. ಮತ್ತೊಂದು ೧೬ನೆಯದರಲ್ಲಿ ಮುದ್ರಿತವಾಗಿದೆ.

ಇನ್ನು, ಚಾಲುಕ್ಯರ ವಿಷಯವಾಗಿ ಈ ಸೊಸಾಯಿಟಿಯ ಮಾಸಪತ್ರಿಕೆಯಲ್ಲಿ ಯಾವ ಲೇಖಗಳಿರುತ್ತವೆಂಬುದನ್ನು ನೋಡುವ. ೨ನೆಯ ಸಂಪುಟದಲ್ಲಿ ಚಾಲುಕ್ಯ ವಿಷ್ಣುವರ್ಧನನ ತಾಮ್ರಶಾಸನವು ಮುದ್ರಿತವಾಗಿದೆ. ಅದರಲ್ಲಿಯೇ ಪುಲಕೇಶಿಯ ತಮ್ಮನಾದ ಜಯಸಿಂಹನಂಬವನ ಮಗನಾದ ನಾಗವರ್ಧನನ ತಾಮ್ರಶಾಸನಗಳು ಮುದ್ರಿತವಾಗಿವೆ. ೧೮೫೧ನೆಯ ಇಸವಿಯಲ್ಲಿ ನೇರೂರಲ್ಲಿ ದೊರೆತ ಎರಡು ತಾಮ್ರ ಶಾಸನಗಳೂ ೯ನೆದರಲ್ಲಿ ಮುದ್ರಿತವಾಗಿವೆ. ಅವುಗಳಲ್ಲಿ ಒಂದು ಚಾಲುಕ್ಯರ ೯ನೆಯ ಅರಸನಾದ ವಿಜಯಾದಿತ್ಯನದು; ಮತ್ತೊಂದು ಪುಲಕೇಶಿಯ ಮಗನಾದ ಚಂದ್ರಾದಿತ್ಯನೆಂಬವನ ಹೆಂಡತಿಯಾದ ವಿಜಯಭಟ್ಟಾರಿಕಾ ಎಂಬವಳದು. ಅದೇ ವಿಜಯಭಟ್ಟಾರಿಕೆಯ ಕೋಚೇರಮ್ ದಲ್ಲಿ ದೊರೆತ ಮತ್ತೊಂದು ತಾಮ್ರಶಾಸನವು ೯ನೆಯದರಲ್ಲಿ ಮುದ್ರಿತವಾಗಿದೆ. ೧೦ನೆಯದರಲ್ಲಿ ರೇವತಿ ದ್ವೀಪದಿಂದ ಸತ್ಯಾಶ್ರಯನು (ಪುಲಿಕೇಶಿಯು) ಮತ್ತು ರಾಜೇಂದ್ರ ವರ್ಮನೆಂಬವನು ೫೩೨ನೆಯ ಶಕದಲ್ಲಿ ಕೂರಿಸಿದ ತಾಮ್ರಶಾಸನವು ಅಚ್ಚು ಹಾಕಲ್ಪಟ್ಟಿದೆ. ೯ನೆಯದರಲ್ಲಿ ಡಾ. ಭಾವುದಾಜೀಯವರು ಧಾರವಾಡ ಮತ್ತು ಮೈಸೂರ ಶಿಲಾಲೇಖಗಳ ಬಗ್ಗೆ ಬರೆದಿರುವರು. ೧೪ನೆಯ ಸಂಪುಟದಲ್ಲಿ, ಹಿಂದಕ್ಕೆ ಹೇಳಿದ ನಾಗವರ್ಧನನ ತಾಮ್ರಶಾಸನದ ಸುಧಾರಿಸಿದ ಆವೃತ್ತಿಯು ಪ್ರಸಿದ್ಧವಾಗಿದೆ.