ಕವಿರತ್ನ ಕಾಳಿದಾಸ - ಅಳ್‌ಬ್ಯಾಡ್ ಕಣೇ ಸುಮ್ಕಿರೆ

ವಿಕಿಸೋರ್ಸ್ದಿಂದ

ಚಿತ್ರ: ಕವಿರತ್ನ ಕಾಳಿದಾಸ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ಡಾ| ರಾಜ್‍ಕುಮಾರ್



ಅಳ್‌ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ

ಅಳ್‌ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್‌ಬ್ಯಾಡ್ ಕಣೆ ಸುಮ್ಕಿರೆ ಏಯ್..ಏಯ್...ಏಯ್..ಏಯ್
ವೀರನಂಥ ಶೂರನಂಥ ಮಾರನಂಥ ಗಂಡ ನಾನು
ಏಕೆ ಅಳ್ತಾ ನಿಂತುಕೊಂಡೆ ಅಳ್‍ಬುರ್‍ಕಿಯಂತೆ
ನನ್ನ ಮ್ಯಾಲೆ ನಿನಗೆ ಕೋಪಾ ಯಾಕೆ
ಕೇಳೆ ಇಲ್ಲೇ ನಿನ್ನ ಮುದ್ದಾಡ್‍ಬೇಕೆ

ನೆತ್ತಿ ಮೇಲೆ ಹೊತ್ತು ನಿನ್ನ
ಬೆಟ್ಟಾನಾದ್ರೂ ಹತ್ತುತೀನಿ
ಶಾಲೇನಾದ್ರೂ ಒಕ್ಕೊಡ್ತೀನಿ
ಸುಮ್ಕಿರು ಮತ್ತೆ
ನೀ ಸುಮ್ಕಿರು ಮತ್ತೆ
ಹೇ.. ಹೆಹೆಹೆ..ಹೇ..

ಅಳ್‌ಬ್ಯಾಡ್ ಕಣೇ ಸುಮ್ಕಿರೆ ನನ್ನ ಮುದ್ದಿನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಏಯ್..ಏಯ್..ಏಯ್..ಏಯ್

ಬೆಟ್ಟಾದ ಕೆಳಗೆ ಆಲದ ಮರವೊಂದೈತೆ
ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ಹೌದು ಚಿನ್ನ
ಬೆಟ್ಟಾದ ಕೆಳಗೆ ಆಲದ ಮರವೊಂದೈತೇ

ಅಲ್ಲಿ ನಮ್ಮ ಬೀರಪ್ಪ ದ್ಯಾವರ ಗುಡಿ ಒಂದೈತೆ
ನಾನು ನೀನು ಕೂಡಿಕೊಂಡು ಕುರಿಗಳ್ನಲ್ಲಿ ಮೇಯಿಸ್ಕೊಂಡು
ಬಿಸಿಲಾಗ್ ಅಲ್ದು ಹಿಟ್ಟು ಉಂಡು
ಒಂಗೆ ನೆರಳಲ್ ಕಂಬ್ಳಿ ಬೀಸಿ
ಜೋಡಿ ಕುರಿಗಳಂಗೆ ನಾವು ಮಲ್ಗಿಕೊಳ್ಳೋಣ
ಸೇರಿ ಗೊರ್‍ಕೆ ಹೊಡ್ಯೋಣ

ಗೊರ್ರ್...ಗೊರ್ರ್
ಹೇ.. ಹೆಹೆಹೆ.. ಹೇ..

ಅಳ್‌ಬ್ಯಾಡ್ ಕಣೇ ಸುಮ್ಕಿರೆ ನನ್ ಮುದ್ದಿನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಏಯ್..ಏಯ್...ಏಯ್..ಏಯ್

ಮುಂಜಾನೆ ಸೂರ್ಯ ಅಂದ

ಅಕ್ಕಿಗಳ ಚಿಲಿಪಿಲಿ ಚಂದ
ಆಹ ಆಹ ಆಹ ಏನ್ ಹೇಳ್ಲಿ ಅದ್ರ ಅಂದಾವಾ?
ಮುಂಜಾನೆ ಸೂರ್ಯ ಅಂದ
ಅಕ್ಕಿಗಳ ಚಿಲಿಪಿಲಿ ಚಂದ
ಬೀಸೋ ಗಾಳಿ ತೂಗೋ ಮರವಾ
ಹರಿಯೋ ನದಿಯಾ ಕಾಣೋಣಾ

ಗುಡುಗೊ ಸಿಡಿಲೊ
ಚಳಿಯೊ ಮಳೆಯೊ
ದಿನವೂ ಅಲೆಯೋಣ ಬಾ..ಹ ಹ ಹ ಹ ಹಾ..

ಅಳ್‌ಬ್ಯಾಡ್ ಕಣೇ ಸುಮ್ಕಿರೇ ನನ್ನ ಮುದ್ದಿನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಈ ಕುರುಬನ ರಾಣಿ
ಅಳ್‌ಬ್ಯಾಡ್ ಕಣೇ ಸುಮ್ಕಿರೆ ಏಯ್ ಏಯ್ ಏಯ್ ಏಯ್..

ತಳಾಂಗು ತದಿಗಿಣತೋಂ ||೩||
ಅಯ್ಯಯ್ಯಪ್ಪಾ...

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ