ಪುಟ:Vimoochane.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಯೋಚಿಸ್ಲೇ ಬಾರ್ದು ಆ೦ತಿಯೇನು? ಸರಿ ಹಾಗಾದರೆ."

ಆದರೆ ಎ೦ದಾದರೊಮ್ಮೆ ನಾನು ಯೊಚಿಸಬೇಕಾಗುತಿತ್ತು. ಅಂಥ ಕೆಲವು ಸನ್ನಿವೇಶಗಳು ಒದಗಿ ಬರುತ್ತಿದ್ದವು.

ಅದೊಂದು ಸನ್ನಿವೇಶ-?

ನಾಲ್ವತ್ತೆರಡರ ಚಳವಳಿ ಆರಂಭವಾಗಿ ಆರೆಂಟು ತಿಂಗಳುಗಳಾ ಗಿಡದ್ದುವು. ದೇಶದ ಹಲವೆಡೆಗಳಲ್ಲಿ ಅರಾಜಕತೆ ನೆಲೆಸಿತ್ತು. ಹಿಂದೆ ಯಾಗಿದ್ದರೆ ನನಗೆ ನಿಮಿಷವೂ ಬಿಡುವೇ ಇರುತಿರಲಿಲ್ಲ. ಹನ್ನೆರಡು ವರ್ಷಗಳ ಹಿಂದೆ ಬೊಂಬಾಯಿಯ ಚೌಪಾಟಯಲ್ಲಿ ಉಪ್ಪಿನ ಸತ್ಯಾ ಗ್ರಹವನ್ನು ಅಮಿರನೊದನೆ ನೋಡಿದ್ದೆ. ದೆಶಪ್ರೇಮಿ ಜೀಬುಗಳ್ಳ ರಗಿ ನಾವು ಕಂಡಿದ್ದ ಲಾಕಪ್ಪು.... ಆದರೆ ಈ ಚಳವಳಿ ಭಿನ್ನವಾಗಿತ್ತು ಅತ್ಯಂತ ಸಮರ್ಥನಾದ ರಾಜಕಾರಣಿಯಂತೆ ನನಗೆ ಯಾವಾಗಲೂ ಕಾಣಿಸುತಿದ್ದ. ಗಾಂದೀಜಿ ಕರೆಕೊತಟ್ಟಿದ್ದರು: "ಮಾಡು ಇಲ್ಲವೆ ಮಡಿ!" ತಂತಿಗಳು ಕತ್ತರಿಸಿ ಬೀಳುತಿದ್ದುವು; ಮಿಲಿಟರಿಗೆ ಸಾಮಗ್ರಿ ಒಯ್ಯುವ ರೈಲುಗಳು ಉರುಳಿ ಹೋಗುತಿದ್ದವು; ಈ ದೇಶದಲ್ಲಿ ಸುಭಧ್ರವಾಗಿದ್ದಂತೆ ತೋರಿದ ವಿದೇಶೀಯ ರಾಜ್ಯವ್ಯವಸ್ಥೆಯ ಕಾಂಡ ವನ್ನೆ ಕೋಟಿ ಕೈಗಳು ಹಿಡಿದು ಭೀಮಶಕ್ತಿಯಿಂದ ಅಲುಗಿಸುತಿದ್ದುವು; ಜನ ಮಾಡುತಿದ್ದರು,ಇಲ್ಲವೆ ಮಡಿಯುತಿದ್ದರು.ಆಗಲೊಮ್ಮೆ___

ಮಳೆಧೋ ಎಂದು ಸುರಿತಯುತಿದ್ದಾಗಲೆ ಶ್ರೀಕಂಟಠ ಕಾರು ಓಡಿಸಿ ಕೊಂಡುಬಂದ.ಅವನೊಡನೆ ಗಾತ್ರದ ಒಬ್ಬ ವ್ಯಕ್ತಿಯೂ ಕೆಳಕ್ಕಿಳಿದು, ನನ್ನ ಮನೆಯನ್ನು ಹೊಕ್ಕಿತು.

"ಚಂದ್ರೂ...ಇವರು ನಮ್ಮ ಮಾವನ ಸ್ನೆಹಿತರು...ಇವರು ಇರೋಕೆ ಮಾವ ಬೇರೆ ಕಡೆ ಏರ್ಪಾಟು ಮಾದಡ್ತರೆ. ಆದರೆ ಅವರಿಗೆ ___ಎರಡು ಮೂವರು ದಿವಸ__ಇಲ್ಲೇ ಇರುಸ್ಕೊ. ಈ ವಿಷಯ ಯಾರಿಗು ತಿಳೀಬಾರ್ದು."

ಆ ವ್ಯಕ್ತಿಯನ್ನು ಸೂಖಕ್ಷ್ಮವಾಗಿ ನೋಡಿದೆ.ಆ ಉಣ್ಣೆಯ ಪೋಷಖಕಿನೊಳಗೆ ಯಾರೋಬ ದೇಶಭಕ್ತರಿರಬೇಕು ಎನ್ನಿಸಿತು. ಆ