ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹರಿಃ ಓಂ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ತಂದೆ, ಮಕ್ಕಳ ಸಂವಾದ ಸುಪ್ರಭಾತ ಸಮಯ, ಕಾಶೀನಾಥಪಂತರು ಸತ್ಯನಾರಾಯಣನಿಗೆ ಅರ್ಥ್ಯವನ್ನಿತ್ತು, ಜಪವನ್ನು ಮುಗಿಸಿ, ಗೀತೆಯ ಪಾರಾಯಣದಲ್ಲಿ ಮಗ್ನರಾಗಿ ದ್ದಾಗ “ಅಣ್ಣಾ, ನಾನು ನಾಳಿನಿಂದ ಶಾಲೆಗೆ ಹೋಗುವದಿಲ್ಲ' ಎಂಬ ಧ್ವನಿಯ ಕೇಳಬಂದಿತು. ಕತ್ತೆತ್ತಿ ನೋಡುತ್ತಾರೆ- ಹದಿನೈದು ವರುಷದ ಚಪಲನಾದ ಲಖು (ಲಕ್ಷಣ) ! “ಶಾಲೆಯನ್ನು ಬಿಟ್ಟು ಏನು ಮಾಡುವವನಿರುವೆ ?” ಎಂದು ಕಾಶೀನಾಥಪಂತರು ಗಂಭೀರವಾಗಿ ವಿಚಾರಿಸಿದರು. ಲಕ್ಷ್ಮಣನ ಉತ್ತರವು ಸಿದ್ದವಿದ್ದಿತು. “ಮುಂಬಯಿಗೆ ಹೋಗಿ ಚಿತ್ರಕಲೆಯ ಅಥವಾ ಯಂತ್ರ ಕಲೆಯ ಶಿಕ್ಷಣ ಪಡೆವ ಇಚ್ಚೆ ನನಗಿದೆ, ಈ ವಿಷಯಗಳು ನನಗೆ ಬಹಳ ಸೇರುತ್ತವೆ, ಈ ಮಾತನ್ನು ರಾಮೂ ಅಣ್ಣನಿಗೂ ತಿಳಿಸಿದ್ದೇನೆ. ಅವನಿಗೆ ಇದು ಪೂರ್ಣವಾಗಿ ಮನಸ್ಸಿಗೆ ಬಂದಿದೆ.” - “ಒಳ್ಳೆಯದು, ನಿನ್ನ ಇಚ್ಛೆಯಂತೆಯೇ ಆಗಲಿ, ಆದರೆ ನಾವು ಎಷ್ಟು ಬಡವರಿರುವೆನೆಂಬ ಕಲ್ಪನೆಯು ನಿನಗೆ ಇದೆಯೇ ? ನನಗೆ ಬರುವ ಹನ್ನೆರಡು ರೂಪಾಯಿ ಮಾಸಿಕ ವೇತನದಲ್ಲಿ, ನಿನಗಾಗಿ ಬಹಳವಾದರೆ ಎರಡು ರೂಪಾಯಿ ಗಳನ್ನು ಮಾತ್ರ ಕೊಡಬಲ್ಲೆ.” “ಅಣ್ಣಾ, ಅದರ ಯೋಚನೆಯೇ ನಿನಗೆ ಬೇಡ, ನಾನು ಅದನ್ನು ನೋಡಿಕೊಳ್ಳುವೆ.”