ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚತುರ್ಥಾಶ್ವಾಸಂ

೭೯

ಕರ್ಣಕುಂಡಲಮಂ ಬಾಲಕನ ಕರ್ಣಯುಗಳಂಗಳೊಳಮರ್ಚಿ ಪರ್ಣಲಘುವಿದ್ಯೆಯಿ
ನೀಡಾಡಿ ಪೋಪುದುಂ--
ಚ||ತನುರುಚಿ ಕರ್ಣಕುಂಡಲಮರೀಚಿ ವಿಯತ್ತಳಮೆಲ್ಲಮಾ ಪಳ|
    ಚ್ಚನೆ ಬೆಳಪಂತು ಪರ್ಣಲಘುವಿದ್ಯೆಯೊಳೊಯ್ಯನೆ ಬಂದು ಖೇಚರೇ೦||
    ದ್ರನ ಮೃದುತಲ್ಪದೊಳ್ ಸುರ ಕುಮಾರಕನಂದುಪಪಾತ ತಲ್ಪದೊಳ್ |
    ಜನಿಯಿಸಿದಂತೆ ಕಣೆ ಪಡೆದಂ ಶಿಶು ನಿರ್ಭರ ಹರ್ಷ ಭಾರಮಂ||೨೦||
    
    ಅಂತಾ ಶಿಶುವಂ ದಕ್ಷಿಣಶ್ರೇಣಿಯ ರಥನೂಪುರಚಕ್ರವಾಳಪುರಮನಾಳ್ವಿಂದುಗತಿ ವಿಯಚ್ಚರೇಂದ್ರನಂದಿನ ಸೂತೃವಂದ ಪುಷ್ಪವತಿ ವೆಸರ ಮಹಾದೇವಿ ಫಲವತಿಯಾದ
ಳೆನಿಸಿ ಕೊಟ್ಟು ಕುಂಡಲ ಪ್ರಭಾ ಮಂಡಲ ವಿಳಾಸಮಂ ತಳೆದನಪ್ಪುದರಿಂ ಪ್ರಭಾ
ಮಂಡಲನೆಂದು ಹೆಸರನಿಟ್ಟನನ್ನೆಗಮಿತ್ತಲ್‌--

ಉ|| ಈಗಳೆ ಪುಟ್ಟದೆನ್ನ ಶಿಶುವಂ ಕರುಣಂ ತನಗಿಲ್ಲದೆತ್ತಿಕೊಂ|
     ಡಾಗಸದತ್ತಲಂತಕನ ದೂತನವೋಲ್ ಪಿಡಿದುಯ್ದ ನೊರ್ವಸಿ||
     ನ್ನೇ ಗಳ ಗೆಯ್ವೆನೆಂದಳಿ ವಿದೇಹಿ ನವೋತ್ಪಲಮಾಲೆ ಕಾರುವಂ|
     ತಾಗೆ ಕದುಷ್ಣ ವಾರಿಗಳನುಣ್ಮಿದುವಾಕೆಗೆ ಬಾಷ್ಪವಾರಿಗಳ್||೨೧||

     ಕಂ॥ ಬಡವಂ ಚಿಂತಾಮಣಿಯಂ
          ಪಡೆವಂತೆಂತಾನುಮೊರ್ವನಂ ತನಯನನಾ೦||
          ಪಡೆದಾಗಳೆ ಮತ್ತೊರ್ವ೦
          ಪಿಡಿದುಯ್ದಂ ದನುಜನೆಂದು ಶೋಕಂಗೆಯ್ದಳ್||೨೨||

          ರಕ್ಷಾವಿಧಾನಮಂ ತನು
          ರಕ್ಷಕರಂ ಬಗೆಯದೆನ್ನ ತನಯನನುಯ್ದಂ||
          ರಾಕ್ಷಸನೆಂದಳ್ತಿಳ್ ಧವ
          ಳೇಕ್ಷಣೆ ದಳದಳಿಸಿ ಸುರಿಯೆ ಬಾಷ್ಪಜಲಂಗಳ್||೨೩||

          ಕುಳವೃದ್ಧೆಯರುಂ ಧಾತ್ರೀ
          ಕುಳಮುಂ ಶುದ್ದಾಂತ ಕಾಂತೆಯರ್ಕಳುಮಳಿಲಿಂ||
          ದರೆ ಕಂಡು ಜನಕನತಿ ವಿ
          ಹ್ವಳ ಚಿತ್ತಂ ಶೋಕರಸಮನೊಳಕೊಂಡಿರ್ದಂ||೨೪||

     ಆಗಳ್ ಮೌಹೂರ್ತಿಕರೀ ಶುಭಮುಹೂರ್ತದೊಳ್ ಪುಟ್ಟಿದ ಬಾಲಕ೦ಗ ಮೋ ಘಮಪಾಯಮಾಗದೀಕೆಯುಮಗಣ್ಯ ಪುಣ್ಯವತಿಯಕ್ಕುಮೆಂದು ಶೋಕಮನದಿರ್ಪೆ