ಪುಟ:ಭವತೀ ಕಾತ್ಯಾಯನೀ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೧೮-

ಸಾತ್ವಿಕಗಂಧವನ್ನೂ, ಸಾತ್ವಿಕ ಸ್ಪರ್ಶ ವನ್ನೂ, ಸಾತ್ವಿಕ ಶಬ್ದವನ್ನೂ ಸೇವಿಸುತ್ತಿರಬೇಕು.ಈ ಸಾತ್ವಿಕ ಪದಾರ್ಥಗಳ ಸೇವನದಿಂದ ನಿಶ್ಚಯವಾಗಿ ಸತ್ವಗುಣದ ಪೋಷಣವಾಗಿ,ಅಂತ:ಕರಣವು ಶುದ್ಧವಾಗುತ್ತದೆ ಅಂತ:ಕರಣ ಶುದ್ದಿಯೆಂದರೆ- ರಜಸ್ತಮೋಗುಣಗಳ ಅವನತಿಪೂರ್ವಕವಾಗಿ ಸತ್ವವಿಜೃಂಭಣವು. ಅರ್ಥಾತ್ ಸತ್ವವಿಜೃಂಭಣವಾದರೆ ರಜಸ್ತಮೋಗುಣಗಳ ಅವನತಿಯಾಗುತ್ತದೆ ಸತ್ವವಿಜೃಂಭಣವಾದಾಗ ರಜೋಗುಣವು ಕಾರ್ಯಪ್ರವೃತ್ತಿಯನ್ನೂ, ತಮೋಗುಣವು ಅಜ್ಞಾನವಿಲಾಸವನ್ನೂ ಮಾಡುವದಿಲ್ಲ.ಕೇವಲ ಸತ್ವಕ್ಕೆ ಪ್ರೋತ್ಸಾಹನವಾಗುತ್ತಿರುವದರಿಂದ ಅದರ ಕಾರ್ಯವೆನಿಸುವ ಜ್ಞಾನವೂ, ಸುಖವೂ ತಪ್ಪದ ಆಗುತ್ತವೆ. ಹೀಗಾಗಹತ್ತಿದರೆ ಅಂತಃಕರಣಶುದ್ಧಿಯಾಯಿತೆಂದು ಭಾವಿಸಬೇಕು, ಯಾವಾಗಲೂ ಸಾತ್ವಿಕವಾದ ರೂಪ, ರಸ, ಮುಂತಾದ ಪದಾರ್ಥಗಳ ಸೇವನದಿಂದ ನಮ್ಮ ಅಂತಃಕರಣಕ್ಕೊಂದು ವಿಲಕ್ಷಣವಾದ ಪ್ರಕಾಶ ಸಾಮರ್ಥ್ಯವುಂಟಾಗುತ್ತದೆ ಅದರಿಂದ ಆ ಮನಸ್ಸು ಅತಿಸೂಕ್ಷ್ಮವಾದ ವಸ್ತುವನ್ನೂ, ಅತಿಗಹನವೆನಿಸುವ ವಿಷಯವನ್ನೂ ಸಹ ಹಿಡಿಯುತ್ತದೆ. ಆದ್ದರಿಂದ ಯಾವಜನರು ಕೇವಲ ರಾಜಸತಾಮಸರಾಗಿ ಸತ್ವಹೀನರಾಗಿರುವರೋ ಅಂಥವರ ದರ್ಶನವನ್ನೂ, ಸ್ಪರ್ಶವನ್ನೂ, ಅವರ ಶಬ್ದಶ್ರವಣವನ್ನೂ, ಅವರಗೂಡ ಗ್ವ್ಯವಹಾರವನ್ನೂ, ಹೆಚ್ಚು ಹೇಳುವದೇನು ಅವರ ಮೈಗೆ ತಗಲಿಬಂದ ಗಾಳಿಯನ್ನೂಕೂಡ ಬಿಡಬೇಕು. ಕದಾಚಿತ್ ಅವನ್ನು ಸೇವಿಸ ಹತ್ತಿದರೆ ನಾವು ಎಷ್ಟು ಸಾತ್ವಿಕ ಪದಾರ್ಥಗಳನ್ನು ಉಪಯೋಗಿಸುತ್ತಿದ್ದರೂ, ನಮ್ಮ ಸತ್ವಹಾನಿಯಾಗತಕ್ಕ ಸಂಭವವಿರುತ್ತದೆ. ಇನ್ನು ರಾಜಸ-ತಾಮಸ ಜನರಗೂಡ ಸರ್ವಥಾ ವ್ಯವಹಾರವನ್ನು ಬಿಡುವದು ನಮ್ಮ ಪ್ರಾಪಂಚಿಕರಿಗೆ ಶಕ್ಯವಲ್ಲ, ಯಾವಜನರು ಸರ್ವಸಂಗ ಪರಿತ್ಯಾಗಮಾಡಿ ಅರಣ್ಯವನ್ನು ಸೇರಿಕೊಂಡು ತಪೋನಿಷ್ಠರಾಗಿರುವರೋ, ಅಂಥವರು ಈ ಕೆಲಸವನ್ನು ಮಾಡಬಹುದು. ಅದರೆ ನಾವು ನಮ್ಮ ಸತ್ವವೃತ್ತಿಯನ್ನು ಕಾಯ್ದು ಕೊಂಡು ಕಾರ್ಯಪರತ್ವದಿಂದ ರಾಜಸ-ತಾಮಸರಗೂಡ ವ್ಯವಹಾರವನ್ನಿಡಬೇಕು; ಆದರೆ ಅವರೂ ಕೂಡ ನಮ್ಮ ಪ್ರಜ್ವಲಸತ್ವವನ್ನು ನೋಡಿ ನಮ್ಮ ಗೂಡ ಸಾತ್ವಿಕ ವ್ಯವಹಾರ ವಿಡುವಂತೆ ನಾವು ನಡೆದುಕೊಳ್ಳಬೇಕು. ಇದರಿಂದ ಅವರಿಗೂ ಸಾತ್ವಿಕವ್ಯವಹಾರದ ಚಟ ಯುಬಿದ್ದು, ಕ್ರಮದಿಂದ ಅವರ ವೃತ್ತಿಯೂ ತಿದ್ದುವದು. ಇನ್ನು ಪಂಚೇಂದ್ರಿಯಗಳ ಆಹಾರಗಳ ದಿಗ್ದರ್ಶನವನ್ನು ಸಾಮಾನ್ಯವಾಗಿ ಮಾಡುವಾ:-

೧ ನೇತ್ರೇಂದ್ರಿಯ ವಿಷಯಗಳಾದ ರೂಪಗಳು- ಗೋಮುಂತಾದ ಪ್ರಾಣಿಗಳ

ರೂಪವೂ, ಸತ್ಪುರುಷರರೂಪವೂ, ದೇವರಪ್ರತಿಮೆಗಳರೂಪವೂ, ಇವೇ ಮುಂತಾದ ಭಕ್ತಿ ಜನಕ ರೂಪಗಳು ಸಾತ್ವಿಕರೂಪಗಳು. ಕಾಮಜನಕವಾದ ಸ್ತ್ರೀ ಮುಂತಾದವಸ್ತುಗಳ ರೂಪಗಳು ರಾಜಸಗಳು. ಅಜ್ಞಾನಜನಕಪಾದಮದ್ಯ ಮುಂತಾದ ವಸ್ತುಗಳರೂಪಗಳು ತಾಮಸಗಳು

೨ ರಸನೇಂದ್ರಿಯದ ವಿಷಯಗಳಾದ ರಸಗಳು- ಸಾತ್ವಿಕ ಪದಾರ್ಥಗಳಲ್ಲಿಯ

ರಸಗಳು ಸಾತ್ವಿಕರಸಗಳು, ವೃಂತಾಕ-ಪಲಾಂಡು೦ಶುನ ಮುಂತಾದ ವಸ್ತುಗಳಲ್ಲಿಯ ರಸವು ರಾಜಸಗಳು. ಮದ್ಯ ಮುಂತಾದ ಮಾದಕವಸ್ತುಗಳಲ್ಲಿಯ ರಸಗಳು ತಾಮಸಗಳು.