ಪುಟ:ಇಂದ್ರವಜ್ರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೀಗೆ ಹೇಳಿ ಅನ್ನಪೂರ್ಣೆಯು ಅಗೋಚರಳಾದಳು. ಆ ಕಾಲದ ಜನರಿಗೆ ಇಂತಹ ಸ್ಪಶ್ನೆಗಳಲ್ಲಿ ವಿಶೇಷ ನಂಬುಗೆಯಿತ್ತು. ಅವರ ಸಹಾಯದಿಂದ ದೇವದ್ವಾರದ ಪುರೋಹಿತನು ದೇವತಾಲಯJನ್ನು ಕಟ್ಟಿಸಿ ನಂದಾ ದೇವಿಯನ್ನು ಪ್ರತಿಪ್ಪಿಸಿದನು, ಅವನು ಸಾಯುವಾಗ ಆ ಊರಿನ ಮುಖಂಡನೊಬ್ಬನನ್ನು ಕರೆಸಿ ಅವನೊಡನೆ, ಸೃಥ್ವಿಪಾಲನು ಆವೂರಿನಲ್ಲಿಯೇ ಪುನಃ ಹುಟ್ಟುವನೆಂ. ದೂ, ಅವನು ನಂದಾದೇವಿಯ ಜಾತ್ರೆಯದಿನ ಆಸ್ಥಳ ದಲ್ಲಿ ಅಗೆದರೆ ಆ ವಜ್ರಾಭರಣವು ದೊರಕುವುದೆಂದೂ, ಅವನೇ ರಾಮಗಂಗಾನದಿಯ ಮತ್ತೊಂದುದಕದಲ್ಲಿ ರುವ ರಾಜ್ಯಕ್ಕೆ ಅರಸಾಗುವನೆಂದೂ ಹೇಳಿದನು. - ಅವನ ಮಾತಿನಂತೆಯೇ ಈಗಲೂ ವರ್ಷಕ್ಕೆಂದಾ ವರ್ತಿ ದೇವದ್ವಾರದ ಬಳಿ ನಂದಾದೇವಿಯ ಪರಿಪೆ ಜರ ಗುವದು. ಆಗ ಸುತ್ತುಮುತ್ತಲ ಹಳ್ಳಿಗಳವರು ಅಲ್ಲಿಗೆ ಗುಂಪು ಗುಂಪಾಗಿ ಬರುವರು ಅವರ ಹುಡುಗರಲ್ಲಿ ಯಾರಾ ದರೋಬ್ಬನು ಸೃಥಿಪಾಲನಾಗಿರಬಹುದೆಂದು ನಿರೀ ಕ್ಷಿಸಿ, ಅವರು ಆದೇವತಾಲಯದ ಪ್ರದೇಶದಲ್ಲೆಲ್ಲಾ ಅಗೆಯುವರು, ಆದರೆ ಇದುವರೆಗೂ ಆದಿವಾಳರ ಇವು ಯಾರಿಗೂ ದೊರೆತಿಲ್ಲ. ಈ ಕಥೆಯನ್ನು ಮಾತ್ರ ಅಲ್ಲಿನವರು ಭಕ್ತಿಯಿಂದ ಹೇಳುತ್ತಿರುವರು. ಕ**