ಪುಟ:ಭವತೀ ಕಾತ್ಯಾಯನೀ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

38

ಧನದಿಂದ ಆಗಬಹುದು. ದ್ರವ್ಯವು ಜಡವಿರುವದರಿಂದ ಬಹಳವಾದರೆ ಅದು ಈ ಜಡ ದೇಹದ ಪರಿಪೋಷಣವನ್ನು ಮಾಡೀತು. ದ್ರವ್ಯವಿಲ್ಲದೆ ಸಂಸಾರಯಾತ್ರೆಯು ನಡೆಯಲಾರದು. ಸಂಸಾರದಲ್ಲಿ ಮುಕ್ತಿಯ ಹೆಸರನ್ನು ಎತ್ತಲಾಗದು.

ಕಾತ್ಯಾಯನಿ--ಮಹಾರಾಜ, ಶರೀರವು ಪುಷ್ಟವಾದ ಮಾತ್ರದಿಂದ ನಮ್ಮ ಕರ್ತ

ವ್ಯವು ಮುಗಿದಂತಾಗಲಿಲ್ಲ. ಅಮರತ್ವವನ್ನು ದೊರಕಿಸಿಕೊಡದೆಯಿದ್ದ ಧನವನ್ನು ತಕ್ಕೊಂಡು ನಾವು ಮಾಡುವದೇನು? ಅದರಿಂದ ನಮಗಾಗುವ ಹಿತವೇನು?

ಮೈತ್ರೇಯಿ--ಭಗವಾನ್, ಅಮರಪದಪ್ರಾಪ್ತಿಗೆ ಬೇಕಾದದ್ದನ್ನಷ್ಟು ನಮಗೆ

ಕೊಟ್ಟು ಹೋಗಬೇಕು. ಉಳಿದದ್ದೇನು ನಮಗೆ ಬೇಡ. ಜನ್ಮಮರಣಗಳ ಘರ್ಷಣದಿಂದ, ಹಾಗು ತಾಪತ್ರಯಾಗ್ನಿಗಳ ತಾಪದಿಂದ ಬೇಯುವ ನಮ್ಮನ್ನು ಭವಸಾಗರದಿಂದ ಮುಕ್ತವಾಗಮಾಡಿರಿ. ನಮಗೆ ಶಾಂತಿಯನ್ನು ಕೊಡುವವರು ತಮ್ಮ ಹೊರತು ತ್ರೈಲೋಕ್ಯದಲ್ಲಿ ಮತ್ತೆ ಯಾರೂ ನಮಗೆ ಕಾಣುವದಿಲ್ಲ .

ಈ ಮಾತುಗಳನ್ನು ಕೇಳಿ ಯಾಜ್ಞವಲ್ಕ್ಯರಿಗೆ ಪರಮಾನಂದವಾಯಿತು. ಅವರು

ತಮ್ಮ ಪತ್ನಿಯರನ್ನು ಕುರಿತು-- "ನೀವಿಬ್ಬರೂ ನನಗೆ ಅತ್ಯಂತ ಪ್ರಿಯರಾಗಿರುವಿರಿ. ನನಗೆ ಪ್ರಿಯವಾದ ಮಾತುಗಳನ್ನೇ ನೀವು ಆಡಿದಿರಿ. ನಾನು ನಿಮಗೆ ಅಮರತ್ವವು ಪ್ರಾಪ್ತವಾಗುವದಕ್ಕಾಗಿ ಹೇಳುವ ಮಾತುಗಳನ್ನು ಲಕ್ಷಪೂರ್ವಕವಾಗಿ ಕೇಳಿರಿ. ಈ ವರೆಗೆ ಗೃಹಸ್ಥಾಶ್ರಮದ ಧರ್ಮಗಳಂತ ಆಚರಿಸಿ ನೀವು ಧನ್ಯರಾಗಿರುವಿರಿ. ನಿಮಗೆ ಮೋಕ್ಷೋಪಾಯಗಳನ್ನು ಕುರಿತು ಸಾಮಾನ್ಯವಾಗಿ ಇಂದು ನಿಮ್ಮನ್ನು ಬೋಧಿಸುವೆನು. ನಿಮಗೆ ಶಾಶ್ವತ ಶಾಂತಿಯ ಪ್ರಶಸ್ತವಾದ ಮಾರ್ಗವನ್ನು ತೋರಿಸಿಯೇ ನಾನು ಚತುರ್ಥಾಶ್ರಮವನ್ನು ಸ್ವೀಕರಿಸುವೆನು; ಮುಂದೆ ತಪಶ್ಚರ್ಯದಿಂದ ಆ ಮಾರ್ಗವನ್ನು ಕ್ರಮಿಸಿ, ಶಾಶ್ವತಶಾಂತಿಸಾಮ್ರಾಜ್ಯವ ಮುಟುವ ಕೆಲಸವನ್ನು ನೀವೇ ಮಾಡಬೇಕಾಗುವದು; . ಅಲ್ಲಿ ಅನ್ಯರ ಸಹಾಯವು ವಿಶೇಷವಾಗಿ ಉಪಯೋಗಿಸುವದಿಲ್ಲ. ಅಧಿಕಾರ ಸಂಪನ್ನರೂ, ಆಜ್ಞಾಪಾಲನ ಧುರೀಣರೂ ಆದ ನಿಮಗೆ ಸವಿಸ್ತರ ಬೋಧವು ಅನವಶ್ಯಕವಾದ್ದರಿಂದ ಸಂಕ್ಷೇಪವಾಗಿಯೇ ಹೇಳುವದನ್ನು ಹೇಳುವೆನು. ಸತಿಯರ ಮುಖ್ಯ ಧರ್ಮವು ಪತಿಯ ಅನುಸರಣವು. ಸತಿಗೆ ಪತಿಯೇ ದೈವತವು. ಆತನೇ ಸದ್ಗುರುವು. ಆತನ ವೇದೋಕ ಕರ್ಮಾಚರಣೆಯ ಅನುಸರಣದಿಂದ ಚಿತ್ತಶುದ್ಧಿಯೂ, ಆತನ ಆಜ್ಞಾಪಾಲನರೂವವಾದ ಔಪಾಸನೆಯಿಂದ ಚಿತ್ತೈಕಾಗ್ರತೆಯೂ ಆಗುವವು. ಇವೇ ಬ್ರಹ್ಮಜ್ಞಾನದ, ಅಥವಾ ಸ್ವಾನಂದಸಾಮ್ರಾಜ್ಯದ ಪ್ರಾಪ್ತಿಗೆ ಮುಖ್ಯ ಸಾಧನಗಳಾಗಿರುವವು . ಸದ್ಗುರು ರೂಪನಾದ ಪತಿಯ ಕೃಪಾಸಂಪಾದನವೇ ಬ್ರಹ್ಮಜ್ಞಾನ ಪ್ರಾಪ್ತಿಯು. ಹೀಗೆ ಸತಿಗೆ ಪತಿಯ ಹೊರತು ಅನ್ಯಗತಿಯಿಲ್ಲ. ಸತಿಯು ಸತ್ಯ, ಶಾಂತಿ, ಕ್ಷಮಾ, ಧೈರ್ಯ, ಸಂತೋಷ, ಅಕ್ರೋಧ, ನಿರಭಿಮಾನ, ನಿರ್ಮಾತ್ಸರ್ಯ, ಪ್ರಾಣಿಜಾತಗಳಲ್ಲಿ ಭಗವದ್ರೂಪಭಾವನೆ, ಆರ್ಜನ ಈ ಗುಣಗಳನ್ನು ಪ್ರಯತ್ನವೂರ್ವಕ ಸಂಪಾದಿಸಬೇಕು. ಮೋಕ್ಷಾಪೇಕ್ಷಿಯು ಈ ಜಗತ್ತು, ಬಹಳಹೇಳುವದೇನು , ಈ