ಆ ಪಲ್ಲವಿಯ ಬಳಿಕ –
“ಬಾಲದಳದವರಾವು ಕಾಲಿಗೆರಗುವೆವು
ಬಾಲಭಟರಾವುಗಳು ಹರಕೆ ಬೇಡುವೆವು”
ಬಾಲದಳದವರ-ಸ್ಕೌಟು ಚಳವಳಿಯ-ಹಾಡು.. ಎದುರು ಪುಟದಲ್ಲಿ ಸ್ಕೌಟೊಬ್ಬನ ಚಿತ್ರವೇನೋ ಇತ್ತು, ಆದರೂ ಸ್ಕೌಟು ಚಳುವಳಿಯ ಕಲ್ಪನೆ ಆ ಹುಡುಗರಿಗೆ ಇರಲಿಲ್ಲ, ಆ ಹಾಡು ಅಷ್ಟಾಗಿ ಅವರಿಗೆ ರುಚಿಸಲಿಲ್ಲ.
ಒಂದೆಡೆ ಇತ್ತು:
“ಆವ ಸಮಯದೊಳಾರು ಸಾಹ್ಯ ಬೇಡಿದರು
ನಾವೊಡನೆ ಸಿದ್ಧರಾಗಿರುವ ವೃತ್ತಿಯನು”
ಸಾಹ-ಅದೆಂತಹ ಪದವೋ! ಜಯದೇವ ಕೊನೆಯ ಪುಟಗಳನ್ನು ಮಗುಚಿ ಟಿಪ್ಪಣಿಯನ್ನೋದಿದ. ಅಲ್ಲೇನೂ ಇರಲಿಲ್ಲ, ಸಹಾಯ ಎಂದೇ ಇರಬೇಕೆಂದು ಕೊ೦ಡ.
'ಈ ಪದ್ಮವನು ಯಾರಾದರೂ ಓದ್ದೀರೇನಪ್ಪಾ?"
ಒಬ್ಬ ಹುಡುಗನೆದ್ದು ಹೇಳಿದ:
“ನನಗೆ ಬಾಯಿಪಾಠ ಬರುತ್ತೆ ಸಾರ್.”
“ಹೇಳು ಹಾಗಾದರೆ.”
“ಹರ ಹರ ಮಹಾದೇವ್ವ ಶಮ್ ಭೋ...”
ಆ ಉಚ್ಚಾರವೂ ತಾಳಲಯವೂ ವಿಚಿತ್ರವಾಗಿದ್ದವು.
ಕೊನೆಯ ಸಾಲುಗಳನ್ನಾತ, ಎರಡೂ ಕೈಗಳನ್ನೆತ್ತಿ, ಛಾವಣಿಯ ಹೆಂಚು ಹಾರಿಹೋಗುವ ಹಾಗೆ ಗಟ್ಟಿಯಾಗಿ ಹೇಳಿದ:
“ಭೀಮ ಬಲವನು ಎಮ್ಮ ಬಾಹುವಿಗೆ ಬರಿಸು
ಎಮ್ಮ ದಂಡದೊಳಿರಿಸು ಭೀಮ ಗದೆಯನ್ನು.”
ಅವನು ಹೇಳಿದ ರೀತಿ ಏನೂ ಚೆನಾಗಿರಲಿಲ್ಲ.ಆದರೂ ಜಯದೇವನೆಂದ: * ಚೆನ್ನಾಗಿ ಹೇಳ್ದೆ. ಕೂತ್ಕೊ”
ಸತ್ಯಕ್ಕೆ ದೂರವಾದ ಪ್ರಶಂಸೆ! ಆದರೆ ಆ ಸಂದರ್ಭದಲ್ಲಿ ಉತ್ತೇಜನವೀಯುವ ಮಾತುಗಳೇ ಮುಖ್ಯವಾಗಿದ್ದುವು.
ಅದೇ ಊರಿನ ಪಾಥಮಿಕ ಶಾಲೆಯಿಂದ ಉತ್ತೀರ್ಣರಾಗಿ ಬಂದಿದ್ದ ಹುಡುಗರು.ಉಪಾಧ್ಯಾಯನಾದ ತನ್ನಿಂದ ಮೊದಲ ಪಾಠ ಹೇಳಿಸಿ ಕೊಂಢ ತಂಡ...,