ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಕಬರಬಿ(ರಬಲ ಚಾತುರ್ಯವಾದ ವಿನೋದಕಧೆಗಳು. ೩೫೭

ನೇದು ತಾವು ಕೂಟ್ಟದ್ದೂ ;ಎಂದೂ ಎರಡನೇದು ಈ ಕುದುರೆಯು ನಿಮ್ಮ ಅಜ್ಜ ಎಂದು ಹೇಳಿದಂತೆ. ] ಬಾದಶಹನು ನಿರುತ್ತರನಾದನು ೧೯೮. ಕಲಪು ( ಮೀಶಿಗೆ ಹಚ್ಚಿಕೂಳ್ಳುವ ಬಣ್ಣ ) ಹಚ್ಚಿ

ಕೊಳ್ಳುವದರಿಂದ ಸುಂದರತ್ಯವು ಬರುವದಿಲ್ಲ.

ಅಕಬರ ಬಾದಶಹನು ವೃಧ್ಧನಾಗಲು, ಅವನ ಕೂದಲುಗಳೆಲ್ಲ ಬಿಳು ಪಾಗಿಹೋದವು. ಅದರಿಂದ ಅವುಗಳಿಗೆ ಕಲವು ಹಚ್ಚಿ ಕೊಳ್ಳುತ್ತಿದ್ದನು ಆ ಸ ಮದಲ್ಲಿ ಬೀರಬಲನು ಅಲ್ಲಿಗೆ ಬಂದನು ಆಗ ಬಾದಶಹನು ಅವನನ್ನು ನೋಡಿ ಬೀರಬಲ್ಲ ! ಕಲವನ್ನು ಹಚ್ಚಿ ಕೊಳ್ಳುವದರಿಂದ ಸುಂದರತ್ಯವು ಉಂಟಾಗುವ ದಿಲ್ಲ ! ಎಂದನು ಅದಕ್ಕೆ ಬೀರಬಲನು ಧೈರ್ಯದಿಂದ - "ಹೀಗೆ ತಿಳಿದಿದ್ದ ರು ಕಲವನ್ನು ಹಚ್ಚಿ ಕೊಳ್ಳುತ್ತಿರುವರೆಲ್ಲಾ ! ಅವರು ಕಲಪು ಹಚ್ಚಿ ಕೊಂಡರೆ ವೃದ‍್ಧತ್ಯವು ಹೋಗಿ, ತರುಣತ್ಯವು ಪ್ರಾಪ್ತವಾಗುವದೆಂದು ತಿಳಿದು ಕೊಂಡಂ ತೆ ಕಾಣುತ್ತದೆ "ಎಂದನು.

ಆ ದಿವಸದಿಂದ ಬಾದಶಹನು ಕಲಪು ಹಚ್ಚಿ ಕೊಳ್ಳುವದನ್ನು ಬಿಟ್ಟು ಬಿಟ್ಟನು.

_ ( ೧೯೯ ಉದ್ಯಾನದ ವೃಕ್ಷವೂ ಮತ್ತು ಅರಣ್ಯದ ವೃಕ್ಷವೂ. ) _ ಒಂದು ದಿವಸ ಬಾದಶಹನು ಅರಣ್ಯದ ಮಾರ್ಗ ವನ್ನು ಹಿಡಿದು ಹೊ ರಟದ್ದನು ಆಗ ಒಂದು ಏಳೆಕೂನನ್ನು ಬುಟ್ಟಯೊಳಗೆ ಇಟ್ಟುಕೊಂಡು, ಹೋಗುತ್ತಿರುವ ಕಾಡಿನ ಸ್ತ್ರೀಯನ್ನು ನೋಡಿದನು ಅದನ್ನು ನೋಡಿ ಅ ವನಿಗೆ ಬಹಳ ಆಶ್ಚರ್ಯವಾಯಿತು ಆಗ ಅವನ ಮನಸ್ಸಿನ ಲ್ಲಿ " ಸ್ತ್ರೀ ಯರೆಂದರೆ ಎಲ್ಲರೂ ಒಂದೇತರ ಹೀಗಿದ್ದು ನಮ್ಮ ಅಂತಃಪುರದ ಸ್ತ್ರೀಯರು ಸುಮ್ಮ ಸುಮ್ಮನೆ ಒಣ ಜಂಭವನ್ನು ಮಾಡುತ್ತಿರುವರು . ಹೀಗ್ಯಾಕೆ ಇರಬಹುದು ; ಇದನ್ನು ಪರೀಕ್ಷಿಸಿ ನೋಡಬೇಕೆಂದು " ಕಲ್ಪನೆಯು ಹುಟ್ಟತು ಅವನು ಹಾಗೆಯೇ ತಿರುಗಿ ,ಅಂತಃಪುರಕ್ಕೆ ಬಂದನು. ಒಬ್ಬ ಬೇಗಮ್ಮಳನ್ನು ಸಹಾ ಮಾತಾಡಿಸಲಿಲ್ಲ.ಆಗ ಅವರು ಗಾಬರಿಯಾಗಿ ಬೀರಬಲನನ್ನು ಕರೆಯಿಸಿ ಕೊಂಡು, ಇದಕ್ಕೆ ಏನುಉಪಾಯ ಮಾಡಬೇಕೆಂದು ಪ್ರಶ್ನೆ ಮಾಡಿದರು. ಅದಕ್ಕೆ ಬೀರಬಲನು - " ನಾಳೆಯ ದಿವಸದಿಂದ ಉದ್ಯಾನದೂಖಗಿನ ಯಾವ ವೃಕ್ಷಗಳಿಗೂ ನೀರು ಹಾಕಬೇಡಿರೆಂದು, ತೋಟಗರಿಗೆ ಅಪ್ಪಣೆ ಮಾಡಿರಿ" ಎಂದು ಹೇಳಿ ಕಳುಹಿಸಿ ಕೊಟ್ಟನು ಅವರು ಅದರಂತೆಯೇ ಅಪ್ಪಣೆ ಮಾಡಿ ದರು. ನಾಲ್ಕಾರು ದಿವಸಗಳೊಳಗಾಗಿ ಲತೆ ; ವೃಕ್ಷಗಳೆಲ್ಲ ಶುಷ್ಕವಾಗಿ ಹೋ ದವು, ಅದನ್ನು ನೋಡಿ ಬಾದಶಹನು ಕುಪಿತನಾದನು ಆಗ ಒಬ್ಬ ಬೇಗಮ್ಮ