ಪುಟ:ಅಜಿತ ಕುಮಾರ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ಮಾಯಾವಿಯಾದ ಮಾಧವಿ.


ಅದಕ್ಕೆ ಅಜಿತನು “ನನಗಿಲ್ಲಿ ಕೊಂಚ ಆಸರೆ ಬೇಕಾಗಿದೆ,” ಎಂದನು.

ಆಗ ಮಾಧವೇಯರು ಈ ಕೊಂಚವೇಕೆ ? ಬೇಕಾದಷ್ಟು ಕೊಡೋಣ ! ನೀನೊಬ್ಬ ವೀರನಂತೆ ಕಾಣಿಸುತ್ತೀಯೆ ! ವೀರರು ನಮ್ಮೊಡನೆ ಕುಡಿವುದೆಂದರೆ, ನಮಗೆ ತುಂಬ ಇಷ್ಟ !” ಎಂದರು.

ಅದಕ್ಕೆ ಅಜಿತನು, ನಿಮ್ಮೊಡನೆ ನಾನೇನೂ ಕೇಳುವುದಿಲ್ಲ! ನಿಮ್ಮ ಯಜಮಾನನಾದ ತಾರಾಪತಿ ಎಲ್ಲಿ ? ಆತನೊಡನೆ ಕೇಳುತ್ತೇನೆ!” ಎಂದನು. ಇದನ್ನು ಕೇಳುತ್ತಲೇ ಮಾಧವಿಯ ಮಕ್ಕಳಲ್ಲಿ ಕೆಲವರು ನಗುವುದಕ್ಕೂ, ಕೆಲವರು ಹುಚ್ಚುನಾಯಿಗಳಂತೆ ಬೊಗಳುವುದಕ್ಕೂ ಹತ್ತಿದರು. ಅವರಲ್ಲಿ ಹಿರಿಯವನು ಎಲೋ, ನಾವೆಲ್ಲರೂ ಇಲ್ಲಿ ಯಜಮಾನರೆ!” ಎಂದನು.

“ಹಾಗಾದರೆ, ನಿಮ್ಮಷ್ಟು ಯಾಜಮಾನ್ಯವು ನನಗೂ ಇದೆ!” ಎಂದು ಹೇಳಿ, ಅಜಿತನು ಒಳಕ್ಕೆ ಬಂದು ಅತ್ತಿತ್ತ ನೋಡಿದನು, ಆದರೆ ತಾರಾಪತಿಯು ಅಲ್ಲಿ ಎಲ್ಲಿಯೂ ಕಾಣಿಸಲಿಲ್ಲ.

ಮಾಧವೇಯರು ಅಜಿತನ ಧೈರ್ಯವನ್ನು ಕಂಡು, ಬೆರಗಾಗಿ ಒಂದು ಸಲ ಆತನ ಮೋರೆಯನ್ನೂ, ಮತ್ತೊಂದು ಸಲ ತಮ್ಮವರ ಮುಖಗಳನ್ನೂ ನೋಡುವುದಕ್ಕೆ ತೊಡಗಿದರು. ಪ್ರತಿಯೊಬ್ಬನು “ ಏನು ಹುಳಿ! ಕುತ್ತಿಗೆಗೆ ಕೈ ಹಾಕಿ ದೊಬ್ಬಿಬಿಡೋಣ ” ಎಂದು ತನ್ನ ಪಕ್ಕದವರೊಡನೆ ಹೇಳಿದನು, ಆ ಮಾತಿನೊಂದಿಗೆ “ಈತನ ತೋಳುಗಳು ಬಲವಾಗಿವೆ ! ನೀನೇ ಮೆಲ್ಲಗೆ ಎದ್ದು ಹೊರಗೆ ಹಾಕುವೆಯಾ ?” ಎಂದು ಕೇಳುವುದಕ್ಕೆ ಕೂಡ ಮರೆಯಲಿಲ್ಲ ! ಆದರೆ ಯಾರಿಗೂ ಧೈರ್ಯವಿಲ್ಲದೆ ಎಲ್ಲರೂ ಕುಳಿತಲ್ಲಿಯೇ ಕುಳಿತುಕೊಂಡರು.

ಅಷ್ಟರಲ್ಲಿ ಅಜಿತನು ಸೇವಕರನ್ನು ಕರೆದು, ತಾರಾಂಗಣದ ಅಜಿತನು ಬಂದಿದ್ದಾನೆಂದು ತಾರಾಪತಿಗೆ ತಿಳಿಸುವಂತೆ ಹೇಳಿದನು.

ಆಗ ತಾರಾಪತಿಯು ಕೊಟಡಿಯೊಳಗೆ ಒರಗಿಕೊಂಡು, ಮಾಧವಿ