ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXI - 420 - ಕ್ಷೀರೇಕ್ಷುರಸಘೃತಶೋಣಿತಸಂಸೃಷ್ಟೈಶೈನಂ ವಸ್ತಿಭಿರುಪಾಚರೇತ್ | ಶೋಣಿತಷ್ಠಂವನೇ ರಕ್ತಪಿತ್ತ ರಕ್ತಾತಿಸಾರಕ್ರಿಯಾಶ್ವಾಸ್ಯ ವಿದಧ್ಯಾತ್ || 'ನ್ಯಗ್ರೋಧಾದಿಂ ಚಾಸ್ಯ ವಿದಧ್ಯಾತ್ವಾನಭೋಜನೇಷು | (ಸು. 556.) ವಿರೇಚನವು ಕೊಟ್ಟದ್ದು ಅತಿಯಾದರೆ, ನೀರು ಚಂದ್ರಾಕಾರದ ಗುಳ್ಳೆಗಳಿಂದ ಕೂಡಿ ಕೊಂಡು ಕೆಳಗೆ ಸ್ರವಿಸುವದು, ಅನಂತರ ಮಾಂಸ ತೊಳದ ನೀರಿನ ಹಾಗಿನ ಕಫ ಮತ್ತು ಕಡೆಗೆ ಜೀವರಕ್ತವು ಸ್ರವಿಸುವದು, ಅದಕ್ಕೆ ಮೇಲೆ ಆಸನವು ಹೊರಗೆ ಬರುವದು, ನಡುಕು ಮತ್ತು ವಮನಾತಿಯೋಗದಲ್ಲಿ ಉಂಟಾಗುವ ಉಪದ್ರವಗಳು ಸಹ ಸಂಭವಿಸುತ್ತವೆ. ಅಂಧವ ನಿಗೆ ಸುರಿದುಹೋಗುವ ರಕ್ತಕ್ಕೆ ಹೇಳಿರುವ ವಿಧಾನದಲ್ಲಿ ಉಪಚಾರಮಾಡತಕ್ಕದ್ದು. ಹೊರಗೆ ಬಂದ ಆಸನಕ್ಕೆ ಸ್ನೇಹ ಹಚ್ಚಿ, ಸುತ್ತು ಬೆವರಿಸಿ, ಒಳಗೆ ನೂಕಬೇಕು, ಅಥವಾ ಕ್ಷದ್ರರೋಗ ಚಿಕಿತ್ಸೆಯನ್ನು ನೋಡಿಕೊಂಡು ಅಲ್ಲಿ ಹೇಳಿರುವ ಪ್ರತಿಕ್ರಿಯೆ ನಡೆಸಬೇಕು. ನಡುಕಿಗೆ ವಾತವ್ಯಾಧಿವಿಧಾನವನ್ನು ನಡಿಸತಕ್ಕದ್ದು ನಾಲಿಗೆ ಹೊರಗ ಒಂದದ್ದು ಮುಂತಾದ ಉಪದ್ರವಗಳಿಗೆ ಮೊದಲು (ಹಿಂದಿನ ಸಂ ಯಲ್ಲಿ) ಹೇಳಿದ್ದೇ ಚಿಕಿತ್ಸೆ ಜೀವರಕ್ತವು ಅತಿ ಯಾಗಿ ಹೋದಾಗ್ಗೆ, ಕಾಶ್ಮೀರೀ ಹಣ್ಣು, ಬೊಗರಿ, ದೂರ್ವೆ, ಲಾವಂಚ, ಇವುಗಳನ್ನು ಕೂಡಿಸಿ ಕಾಯಿಸಿದ ಹಾಲಿಗೆ ಘೃತಮಂಡ ಮತ್ತು ಅಂಜನ ಕೂಡಿಸಿ, ಚೆನ್ನಾಗಿ ತಣಿಸಿ, ಅದರಿಂದ ಆ ಸ್ಥಾಪನೆ ಕ್ರಮ ನಡಿಸತಕ್ಕದ್ದು, ಮತ್ತು 'ನ್ಯಗೋಧಾದಿವರ್ಗದ ಕಷಯ, ಹಾಲು, ಕಬ್ಬಿನ ರಸ, ತುಪ್ಪ, ಮತ್ತು ರಕ್ತಗಳಿಂದ ಕೂಡಿದ ವಸ್ತಗಳಿಂದ ಉಪಚರಿಸುವದು ರಕ್ತ ಉಗಿ ಯುವ ಸಂಗತಿಯಲ್ಲಿ, ರಕ್ತಪಿತ್ತಕ್ಕ ಮತ್ತು ರಕ್ತಾತಿಸಾರಕ್ಕೆ ಹೇಳಿದ ಕ್ರಿಯೆಗಳನ್ನು ನಡಿಸ ತಕ್ಕದ್ದು. ಮತ್ತು ಪಾನಕ್ಕೂ ಭೋಜನಕ್ಕೂ ನೈಟ್ರೋಧಾದಿ ವರ್ಗದ ಔಷಧಗಳನ್ನೇ ಉಪ ಯೋಗಿಸಬೇಕು ಷರಾ ಅಂಜನ ಎಂಬದು ಸೋತೋಂಜನ ಎಂತ ನಿ ಸಂ ವ್ಯಾ 39. ಜೀವಶೋಣಿತರಕ್ತಪಿತ್ರಯೋಶ್ವ ಜಿಜ್ಞಾಸಾರ್ಧಂ ತಸ್ಮಿನ್ 'ಪಿಚುವ್ಲೋತಂ ವಾ ಕ್ಷಿಪೇತ್ | ಯದ್ಯುಷ್ಣೋದಕಪ್ರಕ್ಷಾಲಿತಮಪಿ ವಸ್ತಂ ರಂಜಯತಿ ಚೀವರಕ್ತ-ಪಿತ್ತ ರಕ್ತಗಳ ಪರೀಕ್ಷೆ

ತಜ್ಜೀವಶೋಣಿತಮವಗಂತವ್ಯಂ ಸಭಕ್ತಂ ಚ ಶುನೇ ದದ್ಯಾತ್ ಶಕ್ಕುಸಂ

ಮಿಶ್ರಂ ವಾ ಸ ಯದ್ಯುಪಭುಂಜೀತ ತಜ್ಜೀವಶೋಣಿತಮವಗಂತವ್ಯಂ | (ಸು. 556.) ಜೀವರಕ್ತವೋ, ರಕ್ತಪಿತ್ತವೋ ಎಂಬ ಸಂಶಯನಿವೃತ್ತಿಗಾಗಿ, ಅದರಲ್ಲಿ ಒಂದು ಹತ್ತಿಯ ವಸ್ತ್ರದ ತುಂಡನ್ನು ಹಾಕಬೇಕು ಅದನ್ನು ಬಿಸಿನೀರಿನಿಂದ ತೊಳೆದಾಗಲೂ ವಸ್ತ್ರದಲ್ಲಿ ಬಣ್ಣ ಉಳಿಯುತ್ತದಾದರೆ, ಅದು ಜೀವರಕ್ತವೆಂತ ತಿಳಿಯುವದು, ಮತ್ತು ಅದನ್ನು ಅನ್ನ ದೊಂದಿಗೆ ಅಧವಾ ಹಿಟ್ಟಿನೊಂದಿಗೆ ಬೆರಸಿ ನಾಯಿಗೆ ಕೊಟ್ಟಲ್ಲಿ ಅದನ್ನು ನಾಯಿಯು ತಿನ್ನುತ್ತ ದಾದರೆ, ಅದು ಜೀವರಕ್ಕೆ ಎಂತ ನಿಶ್ಚಯಿಸಬೇಕು ಷರಾ 'ಪಿಚುಂ' ಎಂತ ಪಾರ ಇಟ್ಟು, ಅದಕ್ಕೆ ಎಕ್ಕೆಯ ಹತ್ತಿ ಎಂದು ಅರ್ಥ ಎಂತ ನಿ ಸಂ ವ್ಯಾ 40. ಅಸ್ನಿಗ್ದಸ್ವಿನ್ನೇನ ರೂಕ್ಷಮೌಷಧಮುಪಯುಕ್ತ ಮಬ್ರಹ್ಮಚಾರಿಣಾ ವಾ ವಾಯುಂ ಕೋಪಯತಿ | ತತ್ರ ವಾಯುಃ ಪ್ರಕುಪಿತಃ ಪಾರ್ಶ್ವದೃಷ್ಟ

M