ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 463 463 - ಆ XXIV. ಷರಾ ಇತರ ಪರಿಷೇಕದ ಹೀನಾತಿಯೊಗಗಳ ಲಕ್ಷಣಗಳು ಪಟಪಾಕದಂತೆ ಆಗಿರುತ್ತವೆ ನೇತ್ರರೋಗದ ಆರಂಭದ ಮೂರು ದಿನ ಲಘುಭೋಜನ ಮಾಡಿಕೊಂಡಿದ್ದು, ನಾಲ್ಕನೇ ದಿನ ರೋಗದ ಲಕ್ಷಣಗಳು ಸರಿಯಾಗಿ ಕಂಡ ದ್ದನ್ನು ನೋಡಿ, ಆಕ್ಟೋತನ ಪರಿಷೇಕಗಳನ್ನು ನಡಿಸತಕ್ಕದ್ದು ನಿ ಸಂ ವ್ಯಾ 16. ವ್ಯಕ್ತರೂಪೇಷು ದೋಷೇಷು ಶುದ್ಧ ಕಾಯಸ್ಯ ಕೇವಲೇ | ನೇತ್ರ ಏವ ಸ್ಥಿತೇ ದೋಷೇ ಪ್ರಾಪ್ತ ಮಂಜನಮಾಚರೇತ್ || ಲೇಖನಂ ರೋಪಣಂ ಚಾಪಿ ಪ್ರಸಾದನವಧಾಪಿ ವಾ | ತತ್ರ ಪಂಚ ರಸಾನ್ ವ್ಯಸ್ತಾನಾಕರಸವರ್ಜಿತಾನ್ || ಪಂಚಧಾ ಲೇಖನಂ ಯುಂಜ್ಯಾದ್ಯಧಾದೋಷಮತಂದ್ರಿತಃ | ನೇತ್ರವರ್ತ್ಮಶಿರಾಕೇಶಣೋತಃಶೃಂಗಾಟಕಾಶ್ರಿತಃ || ಅಂಜನದಲ್ಲಿ ಲೇಖ ಮುಖನಾಸಾಕ್ಷಿಭಿರ್ದೋಷಮೋಜಸಾ ಸಾವಯೇತ್ತು ತತ್ | ನಾದಿ ಭೇದಗಳು ಮತ್ತು ಅವುಗಳ ಕಪಾಯತಿಕ್ತಕಂ ಚಾಪಿ ಸಸ್ನೇಹ ರೋಪಣಂ ಮತಂ || ಉಪಯೋಗ ತತ್ ಸ್ನೇಹಶೈತಾದ್ವರ್ಣ್ಯ೦ ಸ್ಯಾದ್ ದೃಷ್ಟಶ್ವ ಬಲವರ್ಧನಂ | ಮಧುರಂ ಸ್ನೇಹಸಂಪನ್ನಮಂಜನಂ ತು ಪ್ರಸಾದನಂ || ದೃಷ್ಟಿದೋಷಪ್ರಸಾದಾರ್ಧಂ ಸ್ನೇಹನಾರ್ಧಂ ಚ ತದ್ದಿತಂ | ಯಧಾದೋಷಂ ಪ್ರಯೋಜ್ಯಾನಿ ತಾನಿ ದೋಷವಿಶಾರದೆ || ಅಂಜನಾನಿ ಯಥೋಕ್ತಾನಿ ಪ್ರಾಜ್ಞಸಾಯಾಗ್ನರಾತ್ರಿಷು ! (ಸು 710.) ಕಣ್ಣಿನಲ್ಲಿಯೇ ನಿಂತಿರುವ ದೋಷದಲ್ಲಿ, ದೋಷಗಳ ಲಕ್ಷಣಗಳು ಸುಯಾಗಿ ಕಂಡ ಮೇಲೆ (ದೋಷಗಳು ಪಕ್ಕವಾದ ಮೇಲೆ), ರೋಗಿಯ ದೇಹವನ್ನು ಶುದ್ಧ ಮಾಡಿ (ವಿರೇಚ ನಾದಿಗಳಿಂದ), ಅಂಜನವನ್ನು ಲೇಖನರೂಪವಾಗಿಯೂ, ರೋಪಣರೂಪವಾಗಿಯೋ, ಅಧವಾ ಪ್ರಸಾದನರೂಪವಾಗಿಯೋ, ತಕ್ಕ ಹಾಗೆ ಉಪಯೋಗಿಸತಕ್ಕದ್ದು. ಹಾಗೆ ಮಾಡು ವಲ್ಲಿ ಲೇಖನವನ್ನು ಆದ್ಯ ರಸವಾದ ನೀ ಬಿಟ್ಟು ಮಿಕ್ಕ ಐದು ರಸಗಳೊಳಗೆ ಒಂದರಿಂದೊಂದ ರಂತೆ ಐದು ವಿಧವಾಗಿ ದೋಷಕ್ಕೆ ತಕ್ಕ ಹಾಗೆ ಬುದ್ದಿವಂತಿಕೆಯಿಂದ ಉಪಯೋಗಿಸಬೇಕು. ಹಾಗೆ ಉಪಯೋಗಿಸಿದ ಅಂಜನವು ಕಣ್ಣಿನ ರೆಪ್ಪೆಗಳ ಶಿರೆ, ಕೋಶ ಮತ್ತು ಪ್ರೋತಸ್ಸು, ಇವುಗಳಲ್ಲಿ ಮತ್ತು ಶೃಂಗಾಟಕದಲ್ಲಿ ಆಶ್ರಯಿಸಿಕೊಂಡ ದೋಷವನ್ನು ಬಾಯಿ, ಮೂಗು, ಮತ್ತು ಕಣ್ಣುಗಳ ದ್ವಾರ ತನ್ನ ಶಕ್ತಿಯಿಂದ ಹೊರಗೆ ಸುರಿಸುತ್ತದೆ. ಚೊಗರು ಮತ್ತು ಕಹಿ ಗಳಿಂದ ತಯಾರಿಸಿದ ಸ್ನೇಹ ಕೂಡಿದ ಅಂಜನವು ರೋಪಣವನ್ನಿಸಿಕೊಳ್ಳುತ್ತದೆ ಅದು ತನ್ನ ಸ್ನೇಹದ ಶೈತ್ಯಗುಣದಿಂದ ವರ್ಣ ಕೊಡುತ್ತದೆ ಮತ್ತು ದೃಷ್ಟಿಗೆ ಬಲಕೊಡುತ್ತದೆ. ಸೀಯಿಂದ ತಯಾರಿಸಿದ ಸ್ನೇಹ ಕೂಡಿದ ಅಂಜನವು ಪ್ರಸಾದನವೆನ್ನಿಸಿಕೊಳ್ಳುತ್ತದೆ. ಅದು ದೃಷ್ಟಿಯ ದೋಷವನ್ನು ಶಮನ ಮಾಡುವದಕ್ಕೂ, ಸ್ನೇಹನಕ್ಕೂ, ಹಿತವಾಗಿರುತ್ತದೆ. ದೋಷಭೇದ ಗಳನ್ನು ಚೆನ್ನಾಗಿ ತಿಳಿದ ವೈದ್ಯರು ಮೇಲೆ ವಿವರಿಸಿದ ಅಂಜನಗಳನ್ನು ದೋಷಕ್ಕೆ ತಕ್ಕ ಹಾಗೆ ಪೂರ್ವಾಹ್ನ (ಕಫಕ್ಕೆ), ಸಾಯಾಹ್ನ (ವಾತಕ್ಕೆ), ಮತ್ತು ರಾತ್ರಿ (ಪಿತ್ತಕ್ಕೆ) ಪ್ರಯೋ ಗಿಸಬೇಕು. ಷರಾ ರಾತ್ರಿಯಲ್ಲಿ, ನಿದ್ರೆಕಾಲದಲ್ಲಿ, ಮಧ್ಯಾಹ್ನ ದಲ್ಲಿ ಮತ್ತು ಬಿಸಿಲಿನ ಉಷ್ಣತೆಯಿಂದ ಕಣ್ಣು ದಾಡಿರುವಾಗ್ಗೆ, ಅಂಜನವನ್ನು ಉಪಯೋಗಿಸಬಾರದಾಗಿ ವಾ (ಪ 105 ) ಹೇಮಂತ-ತಿತಿರ ಋತುಗಳಲ್ಲಿ ಮಧ್ಯಾಹ್ನ, ಗ್ರೀಷ್ಮ-ಶರತ್