ಪುಟ:ಇಂದ್ರವಜ್ರ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅನೇಕ ದೇವಸ್ಥಾನಗಳೂ ಧರ್ಮಸತ್ರಗಳೂ ಆತನ ಔದಾರ್ಯವನ್ನು ಹೊಗಳುತ್ತಿವೆ. ಕಾಲಕ್ರಮದಲ್ಲಿ ಆ ಮಾರಾಯನು ಈ ಲೋಕವನ್ನು ಬಿಟ್ಟನು. ಆಗ ಆತನ ಧರ್ಮಪತ್ನಿಯು ಗರ್ಭವನ್ನು ಧರಿಸಿದ್ದಳು, ಪುರಾತನ ಸಂಪ್ರದಾಯದಂತೆ, ಆತನ ಸಿಂಹಾಸನಕ್ಕೆ ಆತನ ಮ ಗನೇ ಬಾಧ್ಯನಾಗಿದ್ದ ಕಾರಣ, ಜನರು ಆತನ ಪಟ್ಟದ ರನಿಯ ಬಸಿರಲ್ಲಿದ್ದ ಮಗುವನ್ನು ರಾಜನೆಂದೆಣಿ ಸಿ, ಆಕೆ ಯು ಹೆತ್ತಮೇಲೆ ಅದನ್ನು ಗಾದಿಯ ಮೇಲೆ ಕೂಡಿಸ ಬೇಕೆಂದು ನಿಶ್ಚಯಿಸಿದರು. ಆದರೆ ಆರಾಜನಿಗೆ ಬಲುದುಮ್ಮನಾದ ಒಬ್ಬ ತಮ್ಮ ನಿದ್ದನು, ಅವನು ರಾಜ್ಯವನ್ನ ಸಹರಿಸಬೇಕೆಂದು ಚಿಂತಿಸಿ, ಕೆಲವು ಕೆಟ್ಟ ಜನರ ಸಹಾಯದಿಂದ ತನ್ನ ಅತ್ತಿಗೆಯನ್ನು ಬಲುವಿಧವಾಗಿ ಕಾಡಿಸಿ, ಕಾಡಿಗೆ ಅಟ್ಟಿದನು (“ಅಯ್ಯೋ ಪಾಪ! ಆಕೆಯು ಮಹಾರಾಣಿ; ಅದರ ಲ್ಲಿಯ ಬಸುರಿ; ಎಂದೂ ನಡೆದವಳಲ್ಲ; ಕಸ್ಮ ಪಟ್ಟವ ಳಲ್ಲ, ಅಂತಹವಳಿಗೆ ಈಗ ಕಲ್ಲು ಮುಳ್ಳುಗಳಮೇಲೆ ನ ಡೆದು, ಎಲೆ ಕಾಯಿಗಳನ್ನು ತಿನ್ನುವಗತಿ ಬಂದಿತು.... ('ಹೀಗಿರಲಾಗಿ, ಒಂದಾನೊಂದು ದಿನ ಅವಳೊಂದು ಕಡೆ ಜ್ಞಾನ ವಿಲ್ಲದೆ ಬಿದ್ದಿದ್ದಳು; ಅವಳ ಪಕ್ಕದಲ್ಲಿ ಆಗ ತಾನೆ ಹುಟ್ಟಿದ ಕೂಸೊಂದು ಬಿದ್ದಿತ್ತು. ಅದನ್ನಾ ರೋ ಆದಾರಿಯಲ್ಲಿ ಹೋಗುತ್ತಿದ್ದವರು ಕೆಂಡು, ಅವರನ್ನು ಪಕ್ಕದಲ್ಲಿದ್ದ ಗ್ರಾಮಕ್ಕೆ ಕರೆದುಕೊಂಡುಹೋಗಿ