ಪುಟ:ಇಂದ್ರವಜ್ರ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೆಲವೇ ತಿಂದು ಬಿಟ್ಟಿತು,ಅವು ಮೊಳೆಯಲೇ ಇಲ್ಲ. ಮುದುಕಿಯು ಹಿಂದಿನ ವರ್ಷ ಸೇರಿಸಿಟ್ಟಿದ್ದ ಕಾಳು ಕಡ್ಡಿಯೆಲ್ಲವೂ ಚಳಿಗಾಲದ ವೇಳೆಗೇ ಮುಗಿದು ಹೋ ಯಿತು. ಇನ್ನು ಅವಳೂ ಅವಳ ಮಗನೂ ತಿನ್ನುವು ದೇನು ? ಸೊಪ್ಪುಹೊದೆ ಕೂಡ ದೊರೆಯದು, ಮಾ ಡುವುದೇನು ?-'ಉಪವಾಸವೊಂದೇ, ಮುದುಕಿಯು ಅದನ್ನೇ ಮಾಡಲು ಪ್ರಾರಂಭಿಸಿ, ಮಗನಿಗೆ ಮಾತ್ರ ಏ ನೇನೋ ಸಾಹಸದಿಂದ ಸಲ್ಪ ಗಂಜಿಮಾಡಿ ಹಾಕುತ್ತಿ ದ್ದಳು. ಎಷ್ಟು ದಿನ ತಾನೇ ಉಪವಾಸ ಮಾಡಲಾಗು ವುದು ? ಅವಳಿಗೂ ಕಡೆಗಾಲವು ಸಮೀಪಿಸಿತು. ಅದ ಇವಳು ತಿಳಿದುಕೊಂಡು, ಮಗನಾದ ಪೃಥಿವಾಲ ನನ್ನು ಬಳಿಗೆ ಕರೆದು, ಕುಳ್ಳಿರಿಸಿ, ಮುದ್ದಿಟ್ಟು, ಮೈದ ಡವಿ,ಹೀಗೆಂದಳು:- (ಕಂದ, ನಾನು ಹೇಳುವುದ ಕೇಳು, ಯಮಭ ಟರು ಬಂದು ನನ್ನನ್ನು ಕರೆಯುತ್ತಿರುವರು. ಅವರು ನನ್ನನ್ನು ಎಳೆದು ಕೊಂಡು ಹೋಗುವಮ್ಮರೊಳಗಾಗಿ ಒಂದು ವಿಷಯವನ್ನು ಹೇಳುವೆನು, ಅದನ್ನು ಈ ಹನ್ನೆ ರಡು ವರ್ಷಗಳಿಂದ ನಿನಗೆ ಹೇಳದೆ ಗುಟ್ಟಾಗಿಟ್ಟಿದ್ದೆನು. ಈಗ ಬಿಚ್ಚಿ ಹೇಳಬೇಕಾದ ಕಾಲ ಬಂದಿದೆ, ಕೇಳು.... (• ರಾಮಗಂಗೆಯ ಆಚೆಯದಡದಲ್ಲಿ ಪೂರ್ವದಲ್ಲಿ ಒಬ್ಬ ಮಹಾರಾಜನು ರಾಜ್ಯವಾಳುತ್ತಿದ್ದನು. ಆತನು ಚಂದ್ರ ವಂಶದವನು. ಆತನು ದೇವರ ಕೃಪೆಗೂ ಪ್ರಜೆಗ ಳ ವಿಶ್ವಾಸಕ್ಕೂ ಪಾತ್ರನಾಗಿದ್ದನು. ಆತನು ಕಟ್ಟಿಸಿದ