ಪುಟ:ಇಂದ್ರವಜ್ರ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಶವು ಅನೇಕ ರಾಜಾಧಿರಾಜರುಗಳ ಸಾಮ್ರಾಜ್ಞವೈ ಭವಕ, ಅನೇಕ ಕವಿಪುಂಗರವರ ವರ್ಣನಾ ವಿಕೆ ಪಕ್ಕ ಕಾತ್ರವಾಗಿ, ಹಿಂದೂ ಜನರಿಗೆ ತನ್ನ ಹಿಂದಿನ ಉನ್ನತ ಸ್ಥಿತಿ ಯನ್ನು ಜ್ಞಾಸಕ ಪಡಿಸುತ್ತಿರುವುದು. - ಹಾ ಉಜ್ಜಯನಿ ! ನಿನ್ನ ಹೆಸರನ್ನು ಹೇಳಿದೊಡ ನೆಯೆ ಎಷ್ಟೊಂದು ಅಂಶಗಳು ಸ್ಮತಿಗೆ ಬರುತ್ತಲಿನ ! ಪೂರ್ವದಲ್ಲಿ ನಿನ್ನನ್ನು ಅವಂತಿಯೆಂದು ಕರೆಯುತಲಿ ದ್ದರು ನೀವಾಗ ಭರತವರ್ಷದ ಎಳು ಪುಣ್ಯ ಪತನ ಗಳಲ್ಲಿ ಒಂದಾಗಿದ್ದೆ, ಅಪಾರವಾದ ವಿದ್ಯೆಯ ಐಶ ರ್ಯವೂ ನಿನ್ನನ್ನೇ ಆಶ್ರಯಿಸಿದ್ದುವು. ಈಚೆಗೆ ಬೌದ್ಧ ಚಕ್ರವರ್ತಿಯಾದ ಅಶೋಕನ ಕಾಲದಲ್ಲಿ ನೀನುವು ಇಷ್ಟು ಪ್ರಬಲಳಾಗಿ,ಆತನ ರಾಜ್ಯದಲ್ಲಿ ಮುಖ್ಯನಗರ ವಾ ಗಿದ್ದೆ, ತನ್ನ ಒಂದಾನೊಂದು ವಿಜಯದ ಜ್ಞಾಪಕಾರ್ಥ ವಾಗಿಯೇ ಆ ರಾಜರ್ಸಿಯು ನಿನ್ನನ್ನ ಉಜ್ಜಯಿನಿ” ಎಂದು ಕರೆದಿರಬಹುದು. ಆತನಿಂದೀಚೆಗೆ ನಿನ್ನ ಪ್ರಶಸ್ತಿಯು ಇನ್ನೂ ಹೆಚ್ಚಿತು. ನೀನುಮಾಲವದೆ:ಶದ ರಾಜಧಾನಿಯಾಗಿ, ಶಾಶತಕೀ ರ್ತಿಯಾದ ಭತ್ಯಹರಿಯ ಮಹಿಮೆಯನ್ನು ಕಣ್ಣಾರ ನೋಡಿದೆ. ಆತನೆಂತಹ ಮಹಾರಾಜ! ಎಂತಹ ಮಹಾ ಪಂಡಿತ! ಎಂತಹ ಮಹ9 ಕವಿ!ಎಂತಹ ಮಹಾಯೋಗಿ! ಅಂತಹ ಮತ್ತೊಬ್ಬ ವ್ಯಕ್ತಿಯನ್ನು ವಿಧಿಯು ಇದು ವರೆಗೂ ಸೃಷ್ಟಿಸಿಲ್ಲ: ಆತನ ಸುಭಾವಿತವನ್ನು ಓದ ದವರೂ ಕೇಳದವರೂ ನಿರ್ಭಾಗ್ಯರೇಸರಿ! ಆಮಾರಾ