ಈ ಪುಟವನ್ನು ಪರಿಶೀಲಿಸಲಾಗಿದೆ
೪೦ ಉಮರನ ಒಸಗೆ
ಬಾಲ್ಯದಲಿ ತಾರ್ಕಿಕರ ತಾತ್ವಿಕರ ಸಭೆಗಳಿಗೆ
ಆದರದೊಳಾಂ ಸಾರಿ ವಾದಗಳ ಕೇಳಿ,
ಕಾದಾಟಕೆ ಕೊನೆಯೆಂದು ಕಾಣದೆಯಿರಲು
ಪೋದ ದಾರಿಯೋಳೆ ನಡೆಯುತ ಮರಳಿ ಬಂದೆಂ ೨೦
ಬಳಿಕ ನಾಂ ಜೀವನನದೃಶ್ಯಲೋಕಕೆ ಕಳುಪಿ
ಮುಂದೆ ಗತಿಯೇನೆಂದು ತಿಳಿದು ಬಾರೆನಲು,
ತಿರುಗಿಬಂದಾಜೀವವೆನಗುಸಿರಿತೀ ತೆರದಿ:
"ನಾಕ ನರಕಗಳೆರಡುಮಾನಲ್ಲದಾರು ?" ೨೧