ಪುಟ:ಕಥಾವಳಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ೧೯, ಅಭಿಮನ್ಯುವಿನ ಕಥೆ. ಅಭಿಮನ್ಯುವ ಅರ್ಜುನನ ಮಗನು. ಅರ್ಜುನನು ಪಂಚಪಾಂಡವ ರೆಂಬ ಐದುಮಂದಿ ಅಣ್ಣ ತಮ್ಮಂದಿರಲ್ಲಿ ಒಬ್ಬನು, ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ, ಇವರೇ ಪಂಚಪಾಂಡವರು. ಇವರಿಗೂ ಇವರ ದಾಯಾದಿಗಳಾದ ಕೌರವರಿಗೂ ರಾಜ್ಯಕ್ಕಾಗಿ ದೊಡ್ಡ ಯುದ್ಧವು ನಡೆಯಿತು. ಆ ಯುದ್ಧದಲ್ಲಿ ಒಂದು ದಿನ ಮಗುವಾದ ಅಭಿಮನ್ಯುವು ತೋರಿಸಿದ ಪರಾ ಕ್ರಮವನ್ನು ಈ ಹೊತ್ತು ಹೇಳುವೆನು ಕೇಳಿ. ಕೌರವರಿಗೆಲ್ಲಾ ದುರೊಧನನು ದೊರೆಯು, ದುರೊಧನನ ಕಡೆ ಬಹು ಶಕ್ತರಾದ ದ್ರೋಣ, ಕೃಪ, ಅಶ್ವತ್ಥಾಮ, ಕರ್ಣ, ಶಲ್ಯ, ಸೈಂಧವ ಇವರೇ ಮುಂತಾದ ಮಹಾ ಶೂರರೂ, ಅನೇಕಸೈನಿಕರೂ ಇದ್ದರು, ಯು ಧ್ವವು ನಡೆಯುತ್ತಿದ್ದಿತು. ದ್ರೋಣಾಚಾರರು ಸೇನಾಧಿಪತಿಯಾಗಿದ್ದರು. ಅಂದು ಪಾಂಡವರನ್ನು ಸೋಲಿಸುವೆನೆಂದು ಹಟವನ್ನು ಮಾಡಿದ್ದರು. ಅದ ಕ್ಯಾಗಿ ಸೈನ್ಯದಿಂದಲೆ ಒಂದುಬಲವಾದ ಕೋಟಿಯನ್ನು ಕಟ್ಟಿದ್ದರು. ಆ ಕೋ ಟೆಯೊಳಗೆ ನುಗ್ಗಿ ಹೆಡೆಯಲು ಅರ್ಜುನನಿಗೂ, ಅವನ ಸಾರಥಿ ಶ್ರೀ ಕೃಷ ನಿಗೂ ಗೊತ್ತು ಇದ್ದಿತು; ಧರ್ಮರಾಜ ಭೀಮರಿಗೆ ತಿಳಿದಿರಲಿಲ್ಲ. ಕೌರ ವರು ಉಪಾಯದಿಂದ ಅರ್ಜುನನನ್ನು ಬೇರೆ ಕಡೆ ಯುದ್ಧಕ್ಕೆ ಸೆಳೆದು,ಧರ ರಾಜಭೀಮರಿಗೆ ಈ ಕೋಟೆಯೊಳಕ್ಕೆ ಬಂದು ಯುದ್ಧ ಮಾಡುವಂತೆ ಹೇಳಿ ಕಳುಹಿಸಿದರು, ಕ್ಷತ್ರಿಯರು ಯುದ್ಧಕ್ಕೆ ಬರಲಾರೆವೆಂದು ಹೇಳಿಕಳುಹಿ ಸಲು ಆದೀತೆ? ಆಗ ಏನು ಮಾಡಬೇಕು ? ಅರ್ಜುನನಾದರೋ ಬೇರೆ ಹೋ ಗಿದ್ದನು. ಭೀಮನಿಗೆ ಗದೆ ತಿರುಗಿಸಿ ಶತ್ರುಗಳನ್ನು ಕೊಲ್ಲಲು ಬರುತ್ತಿದ್ದಿತೇ ಹೊರತು ಅ೦ತಹ ಕೋಟೆಯನ್ನು ಬಾಣದಿಂದ ಭೇದಿಸಲು ಬಾರದು.ನಕುಲ ಸಹದೇವರು ಅಷ್ಟು ಸಮರ್ಥರಾಗಿರಲಿಲ್ಲ. “ಏನು ಮಾಡುವುದು?” ಎಂದು ಧರರಾಯನು ಯೋಚಿಸುತ್ತಿದ್ದಾಗ, ಅಲ್ಲಿ ಓಡಾಡುತ್ತಿದ್ದ ಅಭಿಮನ್ಯುವ, ಧರರಾಯನಿಗೆ ನಮಸ್ಕರಿಸಿ, “ನನಗೆ ಅಪ್ಪಣೆಯನ್ನು ಕೊಡಬೇಕು, ನಾನು ಆಕೋಟೆಯನ್ನು ಮುರಿದು ಕೌರವ ಸೈನ್ಯವನ್ನು ಧ್ವಂಸವಾಡಿ, ಅತಿರಥ ಮಹಾರಥರನ್ನು ಸೋಲಿಸಿ, ಜಯಶಾಲಿಯಾಗಿ ಬರುವೆನು, ಎಂದನು. ಅದಕ್ಕೆ ಧರರಾಯನು ನೀನು ಮಗು, ನಿನಗೆ ಸಾಧ್ಯವೆ ? ಯುದ್ದದಲ್ಲಿ