ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 107 ಅಂಥವರನ್ನು ಕೊಂದವನು ಸಾಧಾರಣನೇ ? ನೀನು ಹೆದರಿ ಸ್ನೇಹಿತನನ್ನಾಗಿ ಮಾಡಿ ಕೊಂಡ ವಾಲಿಯನ್ನು ಒಂದೇ ಬಾಣದಿಂದ ಕೊಂದವನು ಮಾನುಷಮಾತ್ರನೇ ? ಈ ಮೊದಲಾದ ಸಂಗತಿಗಳನ್ನೆಲ್ಲಾ ನಿನ್ನ ಮನಸ್ಸಿನಲ್ಲಿ ಚೆನ್ನಾಗಿ ಯೋಚಿಸದೆ ಅಜ್ಞಾ ನದಿಂದ ಆ ರಾಮನಲ್ಲಿ ಹಗೆತನವನ್ನು ಬೆಳಿಸಿ ಹಾಲುಣ್ಣುವ ಬಾಯಲ್ಲಿ ಮಣ್ಣು ಹಾಕಿ ಕೊಳ್ಳಬೇಡ. ಈ ಸೀತೆಯನ್ನು ಆ ರಾಮನ ಬಳಿಗೆ ಕಳುಹಿಸಿ ಸರ್ವರೊಡನೆ ಕೂಡಿ ಸುಖವಾಗಿ ಬದುಕು ಎಂದನು. - ಆ ಮಾತುಗಳನ್ನು ಕೇಳಿ ರಾವಣನು ಮಹಾ ಕೋಪವುಳ್ಳವನಾಗಿ ವಿಭೀಷಣ ನನ್ನು ನೋಡಿ-ಎಲೇ ತಮ್ಮ, ನಮ್ಮಲ್ಲಿ ನಿನಗೆ ಇಷ್ಟು ನೈಷ್ಟು ರ್ಯವು ಏಕೆ ? ನೀನು ನಮ್ಮ ವೀರಭಟರ ಸಾಹಸಶಕ್ತಿ ಪರಾಕ್ರಮದಿಗಳನ್ನು ಬಲ್ಲವನಾದಾಗ ಗರ್ವದಿಂದ ಹೀಗೆ ಹೀಯಾಳಿಸಿ ನುಡಿಯಬಹುದೇ ? ಲೋಕಭೀಕರಪರಾಕ್ರಮಶಾಲಿ ಗಳಾದ ನಮ್ಮ ಅ೦ಜಿಕೆಯನ್ನು ಬಿಟ್ಟು ನಮ್ಮನ್ನು ಹಲ್ಲಿಗಿಂತಲೂ ಕಡೆಯಾಗಿ ಎಣಿಸಿ ಈ ರೀತಿಯಾಗಿ ಹೇಳುವುದು ನಿನಗೆ ಯುಕ್ತವೇ ? ನಾನು ನಿನಗಿಂತಲೂ ಹಿರಿಯವನ ಲ್ಲವೇ ? ಹೀಗಿರುವಲ್ಲಿ ನೀನು ನನ್ನನ್ನು ತಿರಸ್ಕರಿಸಿ ಮಾತಾಡುವುದನ್ನು ನೋಡಿದರೆ ನನಗೆ ಹಗೆಯ ಅಲ್ಪನೂ ಆದ ರಾಮನು ದುರುಪದೇಶದಿಂದ ನಿನ್ನನ್ನು ಪ್ರೇರಿಸಿ ನನ್ನ ದೆಸೆಯಿಂದ ಹಿಗ್ಗು ದೆಗೆದಿದ್ದಾನೆಂದು ತಿಳಿಯಬೇಕಾಗಿದೆ. ನೀನು ಹೋಗಿ ಆ ರಾಮ ನನ್ನೇ ಸೇರಿಕೊ, ನಾನು ದ್ರೋಹಿಯಾದ ನಿನ್ನ ನ್ಯೂ ರಾಮನನ್ನೂ ಸಂಹರಿಸದೆ ಎಂದಿ ಗೂ ಬಿಡುವುದಿಲ್ಲ ಇನ್ನು ಮೇಲೆ ನೀನು ನಮ್ಮೆದುರಿನಲ್ಲಿ ನಿಂತು ಹೆಚ್ಚಾಗಿ ಗಳಹಿದರೆ ನಾಲಿಗೆಯನ್ನು ಕೊಯ್ದಿಬಿಡುವೆನು ಎಂದು ಹೇಳಿ ದೂತರನ್ನು ಕರೆದು ಈ ಪಾಪಿ ಯನ್ನು ನೂಕಿಬಿಡಿರಿ ಎಂದು ಹೇಳಲು ; ಆಗ ವಿಭೀಷಣನು-ನೀನು ನನ್ನನ್ನು ನೂಕು ವುದೇಕೆ ? ಈ ದುಷ್ಟಸಂಗದಿಂದ ನಾನೇ ನನ್ನನ್ನು ನೂಕಿಕೊಳ್ಳುವೆನು ಎಂದು ಹೇಳಿ ಮನಸ್ಸಿನಲ್ಲಿ ಶ್ರೀರಾಮನಡಿದಾವರೆಗಳನ್ನು ಚಿಂತಿಸುತ್ತ ಚಾವಡಿಯಿಂದ ಶೀಘ್ರವಾಗಿ ಹೊರಟು 'ತನ್ನ ತಾಯಾದ ಕೈಕಸೆಯ ಮನೆಗೆ ಬಂದು ಆಕೆಯ ಚರಣಂಗಳಿಗೆ ನಮ ಸ್ಕರಿಸಲು ; ಆಕೆಯು ವಿಭೀಷಣನನ್ನು ತಬ್ಬಿ ಕೊಂಡು ತೊಡೆಯ ಮೇಲೆ ಕುಳ್ಳಿರಿಸಿ ಕೊಂಡು-ಮಗನೇ, ರಾವಣನ ದುರುಕ್ತಿಗಳನ್ನೆಲ್ಲಾ ಕೇಳಿದೆನು, ಅದರಿಂದ ನಿನಗೆ ಒಳ್ಳೆಯದಾಯಿತು. ಅದು ಕಾರಣ ಸ್ವಲ್ಪವೂ ವ್ಯಸನಪಡಬೇಡ. ನೀನು ನಿರಪರಾಧಿಯಾಗಿ ರಾಘವನನ್ನು ಮರೆಹೊಗುವುದಕ್ಕೆ ಇದೇ ಸಮಯವು. ಈ ಸ್ಥಳವನ್ನು ಬಿಟ್ಟು ಹೋಗು, ಆ ದಯಾಳುವಾದ ರಾಮನು ನಿನಗೆ ಚ್ಯುತಿಯಿಲ್ಲದ ಆಯುಸ್ಸನ್ನೂ ಐಶ್ವ ರ್ಯವನ್ನೂ ದಯಪಾಲಿಸುವನು. ನೀನು ಮುಂದೆ ಮೃತರಾಗುವ ನಮ್ಮೆಲ್ಲರಿಗೂ ತಿಲೋದಕವನ್ನು ಕೊಟ್ಟು ಸದ್ದತಿಯನ್ನು ಹೊಂದಿಸುವವನಾಗು ನಡೆ ಎಂದು ಕಣ್ಣೀರು ಗಳನ್ನು ಸುರಿಸುತ್ತ ಅಪ್ಪಣೆಯನ್ನು ಕೊಡಲು ; ಆಗ ವಿಭೀಷಣನೂ ದುಃಖಿಸುತ್ತ ತಾಯಿಯ ಅಡಿಗಳಿಗೆರಗಿ ನಾಲ್ಕು ಜನ ಮಂತ್ರಿಗಳೊಡನೆ ತೇರನ್ನೇರಿ ರಾಮನನ್ನು ನೆನಸುತ್ತ ಸಂಭ್ರಮದಿಂದ ಆಕಾಶಕ್ಕೆ ಹಾರಿ ಪುನಃ ಅಣ್ಣನ ವಿಷಯದಲ್ಲಿ ಮನಸ್ಸು ಮರುಗಿ-ಝರನಾದ ಅಣ್ಣನಿಗೆ ಇನ್ನೊಂದುಸಾರಿ ವಿವೇಕವನ್ನು ಹೇಳಿ ನೋಡುವೆ