ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

272 ಕಥಾಸಂಗ್ರಹ-೫ ನೆಯ ಭಾಗ ನೆಂದು ಆ ಗಾಡಿಯನ್ನು ತೊಟ್ಟಿಲಿನ ಮೇಲೆ ನೂಕಲು ; ಆ ಗಾಡಿಗೆ ಮಗುವಿನ ಕಾಲಿನ ಉಂಗುಟವು ತಗಲಿ ಆ ಶಕಟಾಸುರನು ಸತ್ತು ಬಿದ್ದುದರಿಂದ ಅವನ ಹೆಣವು ಒಂದು ಮಹಾಪರ್ವತದಂತೆ ಕಾಣಿಸಲು ; ಈ ಹಸುಗೂಸಿನ ಸಾಹಸವೆಷ್ಟೋ ಎಂದು ನೋಡಿದವರು ಆಶ್ಚರ್ಯಪಟ್ಟಾರೆಂದು ಯೋಚಿಸಿ ಆ ಅಸುರನ ಹೆಣವನ್ನು ಆ ಶಿಶುರೂ ಪನಾದ ಹರಿಯೇ ಮಾಯಮಾಡಿ ತೊಟ್ಟಿಲಲ್ಲಿ ಕಾಲ ಹೆಬ್ಬೆರಳನ್ನು ಬಾಯಿಯಲ್ಲಿಟ್ಟು ಕೊಂಡು ಚೀಪುತ್ತ ಆಡುತ್ತಿದ್ದನು. ಅಷ್ಟರಲ್ಲಿ ಗೋಪಿಯು ಬಂದು ನುಚ್ಚು ನುರಿಯಾ ಗಿರುವ ಬಂಡಿಯನ್ನು ನೋಡಿ-ಇದೇನು ಮಹಾಶ್ವರ್ಯವು ? ಈ ಬಂಡಿಯು ಇದ್ದುದಕ್ಕಿದ್ದ ಹಾಗೆಯೇ ಚೂರುಚೂರಾಗಿರುವುದು ! ಮಗುವು ಎಷ್ಟು ಹೆದರಿಕೊಂ ಡಿತೋ ! ಎಂದು ಮಗುವನ್ನು ಎತ್ತಿಕೊಂಡು ಗಂಡನಿಗೆ ಹೇಳಿ ಆ ಶಿಶುವಿಗೆ ಬಹಳ ವಾಗಿ ಶಾಂತಿಕರ್ಮವನ್ನು ಮಾಡಿಸಿದಳು. ಆ ಮೇಲೆ ಕೃಷ್ಣನು ಮನೆಯಲ್ಲಿ ನಿಲ್ಲದೆ ಬೀದಿಗೆ ಓಡಿಯೋಡಿ ಹೋಗುತ್ತಿ ರಲು ; ಗೋಪಿಯು ಕೋಪಗೊಂಡು ಏನು ಮಾಡಿದರೂ ಮನೆಯನ್ನು ಬಿಟ್ಟು ಹೋಗುವುದನ್ನು ಬಿಡುವುದಿಲ್ಲವಲ್ಲಾ ! ಎಂದು ಅವನ ಸೊಂಟಕ್ಕೆ ಒಂದು ಹಗ್ಗೆ. ವನ್ನು ಕಟ್ಟಿ ಆ ಹಗ್ಗದ ತುದಿಯನ್ನು ಒಂದು ಒರಳುಕಲ್ಲಿಗೆ ಬಿಗಿದು ಮನೆಗೆಲಸಕ್ಕೆ ಹೋಗಲು ; ಆ ಸಮಯದಲ್ಲಿ ಕೃಷ್ಣನು ಆ ಒರಳುಕಲ್ಲನ್ನು ಎಳೆದುಕೊಂಡು ಹೊರ ಗೆ ಹೋಗಿ ಮನೆಯ ಮುಂದೆ ನಾರದ ಮಹರ್ಷಿಯ ಶಾಪದಿಂದ ಕುಬೇರನ ಇಬ್ಬರು ಮಕ್ಕಳು ಎರಡು ಮಮರಗಳ ರೂಪದಿಂದಿರಲು, ಅವುಗಳ ನಡುವೆ ಹೋಗಲು ; ಆಗ ಆ ಮರಗಳಿಗೆ ಈ ಒರಳುಕಲ್ಕು ತಗುಲಿದುದರಿಂದ ಎರಡು ಮರಗಳೂ ಬೇರಿ ನೊಡನೆ ಮುರಿದುಬಿದ್ದು ವು. ಆ ವೇಳೆಯಲ್ಲಿ ಹೊರಗೆ ಹೋಗಿದ್ದ ನಂದಗೋಪನು ಬರು ತ್ಯ ಬಿದ್ದಿರುವ ಆ ದೊಡ್ಡ ಮರಗಳನ್ನೂ ಅವುಗಳ ನಡುವೆ ಸಂತೋಷದಿಂದ ಆಡುತ್ತ ಒರಳುಕಲ್ಲಿನೊಡನೆ ಕೂಡಿ ಸೊಂಟದಲ್ಲಿ ಹಗ್ಗವುಳ್ಳ ಕೃಷ್ಣನನ್ನೂ ಕಂಡು ಕೌತುಕಾ ನಂದಭರಿತನಾಗಿ ನೋಡುತ್ತಿರುವಷ್ಟರಲ್ಲೇ ಮನೆಯಲ್ಲಿ ಯಶೋದೆಯು ತಾನು ಕಟ್ಟಿಹಾಕಿದ್ದ ಸ್ಥಳದಲ್ಲಿ ಕೃಷ್ಣನನ್ನೂ ಒರಳುಕಲ್ಲನ್ನೂ ಕಾಣದೆ ಹೊರಗೆ ಓಡಿ ಬಂದು ಬಿದ್ದಿರುವ ಮರಗಳ ಸಂದಿನಲ್ಲಿರುವ ಕೃಷ್ಣನನ್ನು ಕಂಡು ಬೇಗನೆ ಎತ್ತಿಕೊಂಡು ಮುದ್ದಿಸಿ ಮನೆಗೆ ಕರೆದುಕೊಂಡು ಹೋದಳು. ಅನಂತರದಲ್ಲಿ ಹೀಗೆ ಕೆಲವು ದಿವಸಗಳು ಕಳೆಯಲು ; ಒಂದಾನೊಂದು ದಿವಸ ಬಲರಾಮನು ಬಂದು ಕೃಷ್ಣನು ಬೀದಿಯ ಮಣ್ಣನ್ನು ತಿಂದನು ಎಂದು ಗೋಪಿಯ ಸಂಗಡ ಚಾಡಿಹೇಳಲು ; ಆಗ ಗೋಪಿದೇವಿಯು-ಏನೋ ಕೃಷ್ಣಾ, ಮಣ್ಣು ತಿಂದಿಯಾ ? ಎಂದು ಕೇಳಿದುದಕ್ಕೆ ಅವನು--ಇಲ್ಲಮ್ಮಾ, ಅಣ್ಣನು ನನ್ನ ಮೇಲೆ ಚಾಡಿಹೇಳುತ್ತಾನೆ, ನೋಡು ಎಂದು ಬಾಯಿಯನ್ನು ತೆರೆದು ತೋರಿಸಲು ... ಆ ಬಾಯಿಯೊಳಗೆ ಸಪ್ತ ಸಾಗರಗಳೂ ಸಪ್ತಕುಲಾಚಲಗಳೂ ಸಪ್ತದ್ವೀಪಗಳೂ ಸಪ್ತಲೋ ಕಗಳೂ ಕಂಡುಬಂದುದರಿಂದ ಈತನೇ ಮಹಾವಿಷ್ಣು ವೆಂದು ಆತನ ಮಾಯಾಶ ಕ್ತಿಯಿಂದ ಅರಿಯಲಾರದೆ ಬಾಯಿಯನ್ನು ಮುಚ್ಚಿಕೋ ಎಂದು ಹೇಳಿ ಸಮಾಧಾನ ಪಡಿಸಿದಳು.