ಪುಟ:ಕನ್ನಡದ ಬಾವುಟ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮ ಹಸಗೆಯ್ಕೆ, ಹೊಸಗೆಯ್ಯನೆಂಬೊಲುಮೆ ; ನಾವೆಲ್ಲರಾ ನಾಯಕನ ದಳದಿ ದೀಕ್ಷೆ ಪಡೆದು, ಮಾರಿ ಬಳಸುವ ಬನ್ನಿ ಬುದ್ಧಿಯನು ಶ್ರದ್ಧೆಯನು, ಕನ್ನಡಿಗರೈಸಿರಿಯ ಬೆಳೆಯ ಬೆಳಸಿ. ಬೆಳೆಯುವ ನಾಡದು, ಮೈಸೂರು. ಇಳೆಯ ಮಾದರಿಯದು, ಮೈಸೂರು. ಕನ್ನ ಡಿಗನುಸಿರದು, ಮೈಸೂರು. ನಾಲುಮಡಿ ಕೃಷ್ಣನ ಮೈಸೂರು. • ೪, ಸ್ವಾಗತ (ಹೈದರಾಬಾದಿಗೆ) ಈ ನಮ್ಮ ನಾಡಿಂಗೆ ಓಡಿಬನ್ನಿ, - ನಿಮ್ಮವರ ನೋಡಬನ್ನಿ, ಕಕ್ಕುಲತೆಯಿಂದ ಮಾತಾಡಬನ್ನಿ , ಎಮ್ಮೊಡನೆ ಕೂಡಬನ್ನಿ, ತುಂಗನಾಳಿದ ತಿರುಳುಗನ್ನಡದ ನಾಡು, ದಾಸರಿಂ ಪಾವನತೆಯೊಂದಿದೀ ನಾಡು, ಇಕ್ಕೆಲದ ಸೆಳತಕ್ಕೆ ಸೀಳಾಗಿ ಪಾಡು ವಿಂಗಡಿಸಿ ಹೇಗಾಗಿ ಹೋಗಿಹುದು ನೋಡು. ಕಳೆದುದಕೆ ಅಳುತಳುತ ಕುಳಿತು ಫಲವೇನು ? ಮೊಳೆತಿರಲು ತನ್ನರಿವು ಸಾಲದೇನು ? ಮೊಳಕೆ ಕಮರದ ತೆರದಿ ಮಳೆಗರೆದು ನೀನು, ಪಾಲಿಸ್ಯೆ, ಲಾಲಿಸೈ, ಕೇಳಲಿನ್ನೇನು ? ಬಿಸಿಲ ಬೇಗೆಗೆ ಬೆಂದು ಬಾಡುತಿದೆ ನಾಡು ಆಚಾರ್ಯ ನಿನಗೆ ಮರೆಹೊಗುತಲಿದೆ ಕಾಡು. ಬೇಗ ಬಾ, ಬೇಗ ಬಾ, ಬಂದು ಕಾಪಾಡು. ಶುಷ್ಕ ಹೃದಯಕೆ ತಂಪ- ಕಂಪ- ನೀಡು.