ಪುಟ:ಕನ್ನಡದ ಬಾವುಟ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಲೆದೂಗೆ ತೆಂಗು, ನೇಗಿಲು ನಗಲು, ಹೊಳೆಯು ಸುಳಿದೋ ಡೆ, ತಲೆ ಎತ್ತಿ ಕಂಗೊಳಿಸೆ ಬೆಳೆಯು, ಮಳಿಗೆ ತಕ್ಕಡಿ ಕುಣಿಯೆ, ಶಂಖ ದೇಗುಲದಿ ಮೊಳಗೆ, ಮನೆ ಮಕ್ಕಳಿಂದುಲಿಯ ಗದ್ದಲದಿ - _ಮೆರೆಯಲಿಂತಾಂಗೈಯರೊಡೆತನದಿ ನಾಡು ! ಪರಮೇಶನೊಲುಮೆಯಿಂ; ಶಾಂತಿಗಿದು ಬೀಡು ! ಬರಲೆನಗೆ ಜನ್ಮ ನಿನ್ನು ದರದಲಿ, ತಾಯೆ ! ದೊರೆಯಲೆಮಗನುದಿನವು ನಿನ್ನ ಡಿಯ ಸೇವೆ ! , ಎನ್, ಕಾನುತ್ ೧೨. ಕನ್ನಡನಾಡ ರಾಣಿ ಏಳು ಶೂರರ ಖಣೀ ಏಳು ಶೂರರ ರಾಣಿ ಏಳು ತೀರದ ವೀರರಸದ ವಾಣಿ ಏಳು ಮಾರಿದ ಜಾನಿ ಏಳು ಈ ಸ್ಥಿತಿಗಾಣಿ ಏಳು ವರ ವರದ ಪಾಣಿ. ಶೂರ ಪುರುಷರ ಕೊನೆಯು ವೀರ ಕವಿಗಳ ಗೊನೆಯು ಭೀರುತನವೆಂಬ ಶಲ್ಯಕ್ಕೆ ಮೊನೆಯು ಧೀರ ಸತಿಯರ ತೆನೆಯು ವೀರರಸಗಳ ಸೊನೆಯು ಈ ರೀತಿ ನಿನ್ನ ಮನೆಯು. ಭರದೆ ಬೆಳೆಯುವ ಬೆಳೆಯು ತ್ವರದೆ ಹರಿಯುವ ಹೊಳೆಯು ಇರದೆ ಪ್ರತಿ ಕಾಲಕ್ಕೆ ಬರುವ ಮಳೆಯು ವರಲಕ್ಷಣದ ಕಳೆಯು ಸುರರ ಸೀಮೆಯ ಬೆಳೆಯು ಇರುವಂಥ ನಿನ್ನ ಇಳೆಯು. ಸತ್ತಿರುವುದೆರೆ ಸೇರು ಸುತ್ತಿರುವ ವಿಷ ಹೀರು ಬತ್ತಿರುವುದನ್ನ ತ ಝುರಿ ಮತ್ತೆ ತೋರು | ಸತ್ತುಳ್ಳ ನೂರಾರು ಬಿತ್ತುಗಳ ನೀನೂರು ಕಿತ್ತು ಭಯಬಿಟ್ಟ ಬೇರು. ಅ೦ದಿನ೦ತಹ ಧನವು ಅ೦ದಿನ೦ತಹ ತನುವು ಅಂದಿನಂತವರ ಹಿರಿದಾದ ಮನವು ಅಂದೆ ಅಂದಿನತನವು ಚಂದದಾಟಕೆ ಅನುವು ಎಂದು ತಂದೀತು ದಿನವು !