ಪುಟ:ಕನ್ನಡದ ಬಾವುಟ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಗಲಿರುಳೆನ್ನ ದೆ ಹೊಡೆಯುವ ಜಡಿಮಳೆ ಬಡಿಕೊ೦ಚಿನ ಲಾಗುಗಳು ಮನೆಗಳ ಮನಗಳ ಒಳಗೂ ಹೊರಗೂ ಜಿನುಗುತಿರುವ ಹನಿಸೋನೆಗಳು. ಮುಗಿಲಿನ ಹುಬ್ಬಿನ ಗಂಟಿಕ್ಕುತ ಬಿರು ದನಿಯಲಿ ಬೆದರಿಸುತಿಹನಲ್ಲ ನಲ್ಲನೆನುತೆ ಆ ಗಸವೆಣಗುತೆ ಸುರಿಸದ ಕಣ್ಣಿಝಿನಲೆಲ್ಲ. ಕ, ಶಂಕರಭಟ್ಟ •೧೭. ಹೈದರಾಬಾದು ಸರ ಸರನೆ ಸಲ ಸರಿದು ನೆರೆಯನ್ನು ತೆರೆಬಿದ್ದು ಸುಳಿ ಸುಳಿಯುತಿದೆ ಮಾಸಿ ಹೊನಲು ಇಕ್ಕೆಂದೆ ಪವಡಿಸಿದೆ ಕಣೆಲೆಗೆ ಸಿಕ್ಕಿದೆಯೆ ಬಿತ್ತರದಿ ಹೈದರಾಬಾದು. ಇಂತೆಂದು ತನ್ನೆ ರೆಯನೊಂದೆದೆಯ ವೈಶಾಲ್ಯವೆಂಬುದನು ಉಗ್ಗಡಿಪ ತೆರದಿ ಬಾನುದಿಯ ಮುದ್ದಿಡುವ ಸೌ ಧಾಳಿ ಸಾರುತಿದೆ ದೊರೆಯ್ಕೆ ಸಿರಿಯ ಪರಿ ಸರಿಯಲಿ ರಾಜ್ಯದಧಿದೇವತೆಯ ಕರುನಾಡದಂದದಲಿ ಬಿಮ್ಮನಿದೆ ಚಾರುಮಾನಾರು ನಾಡ ಸಿರಿವೆಲ್ಲಿ ಹಗಲಿರುಳು ಎನಗೆಯರಳು ಸೂಸಿ ನಲಿ ನಲಿಯುತಿಹಳು ಆಗಸದಿ ನೇಸರನು ಬಳಸಿರುವ ಗರಗಳೆನೆ ಹೊಳಲ ಸುತ್ತಲಿನೆ ತುಂಬುಕೆರೆ ಬೀದಿಯಿತ್ತಂಡದಲ್ಲಿ ಸಾಲೋ೦ಡ ವೃಕ್ಷಗಳು ತಣ್ಣೆಳಲುಗಳನೆರಚುತಲಿವೆ ತಾರಗೆಗಳಂದದಲಿ ಬೆಳಕುಗಳು ಇರುಳಿನೊಳು ಬಾಂದವ ನೆರೆವೆಗ್ಗಳಿಸಿವೆ ಸಿಂಗರವ ಸದನಂಗಳೊರಣದಿ ಚೆಂದಳಿರ ಚಮನುಗಳ ಮಾಲೆಯಲಿ ಭರದಿ ಹರಿದಾಡುತಿಹ ವಾಹನಗಳೋಟದಲಿ ನೋಟದಲಿ ರಂಜಿಸಿದೆ ರಾಜಧಾನಿ - ಹೊಳಲೊಡತಿಯೊಡಲೊಳಡಗಿರುವುದೇಂ ? ಆಡಳತೆ ಕೊರತೆಗೆಡೆ ಯಾಗದಂದದಿ ನಡೆದ ಮಂತ್ರಿಮಂಡಲವು ಪ್ರಭುವಿನಾಣತಿಗೆ ತಲೆವಾಗುತಲಿ ಪ್ರಜೆಗಳೊಲುಮೆಯನಾಂತಿರುವುದು ನನ್ನೆ ಯರ ಹೆಕ್ಕಳಿಕೆ ವಂಶದೌನ್ನತ್ಯವಗ್ಗಳಿಕೆ ಬೀರುತಿದೆ