ಪುಟ:ಕನ್ನಡದ ಬಾವುಟ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉರಿ ಕೊಳೆ ಸಗ್ಗ ದೆ ಶಿಲೆಯಲ್ಲಿ ಬೀಡು ಉರಿಯನೆ ಹೊದೆಯುತ ನಗುವುದು ನೋಡು, ಹೊಳೆವುದು, ಬೆಳೆವುದು, ಸೆಳೆವುದು, ನೋಡು, ಸುಖದಲಿ ನೆರೆದಾ ಜನವನು ನೋಡು, ನಾಲ್ಮಡಿ ಕೃಷ್ಣನ ಹರಸುವರು ; ಆತನ ಸುಖದಲಿ ಬೆರಸುವರು ; ಇಂತಹ ಜನವನು, ನಾಡನು, ದೊರೆಯನು ನಾನೆಂದೆಂದೂ ಹರಸುವೆನು, ನಾನೆಂದೆಂದೂ ಕಾಯುವೆನು, ಕಾಯುವೆನು.” ಕಾಯಿ, ತಾಯಿ, ಗೌರಿದೇವಿ, ಕೃಷ್ಣರಾಜನ ! ಬೆಳ್ಳಿ ಬೆಟ್ಟ ದೊಡತಿ, ಗೌರಿ, ಬೆಳ್ಳಿಯೊಸಗೆಗೊಸಗೆ ಬೀರಿ ಕಾಯಿ ಕೃಷ್ಣನ. ಕನ್ನಡಿಗರ ವಯರಮುಡಿಯ ರಾಯ ಕೃಷ್ಣನ ! ೩೭, ಕನಸಿನೊಳಗೊಂದು ಕಣಸು * ಯಾರು ನಿಂದವರಲ್ಲಿ ತಾಯೆ ! ” ಎಂದೆ ! * ಯಾರು ಕೇಳುವರೆನಗೆ ಯಾಕೆ ತಂದೆ ? " * ಬೇಸರದ ದನಿಯೇಕೆ ಹೆಸರ ಹೇಳಲ್ಲ.” * ಹೆಸರಾಗಿಯೂ ಕೂಡ, ಹೇಳಹೆಸರಿಲ್ಲ.” “ನೀನಾರ ಮನೆಯವಳೊ ಮುತೈದೆ ಹೇಳು." * ನಾನಾರ ಮನೆಯವಳೊ ಬಯಲನ್ನೆ ಕೇಳು." * ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ ? ” * ಗುಪ್ತರಾದರೊ ಏನೊ ಇಷ್ಟರಲ್ಲೇ ! ? ಇರುವರೇ ಇದ್ದರೇ ಮಕ್ಕಳೆಂಬವರು ?? * ಇರುವರೆಂದರು ಕೂಡ ಯಾರು ನಂಬುವರು ? ” * ಮನೆಯಿಲ್ಲವೇ ಇರಲು ಪರದೇಶಿಯೇನು ? ) * ಮನೆಯ ಮುನಿದೆದ್ದಿರಲು ಯಾ ದೇಶವೇನು ? '