ಪುಟ:ಕನ್ನಡದ ಬಾವುಟ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೦ ಎನ್ನ ಜೀವನ ನಿನ್ನ ಸೊಗದಿನಾವರಿಸು ಹಣ್ಣೆಲೆವೊಲೆನ್ನ ಹಳೆಗನಸುಗಳ ಹರಿಸು ಚೆನ್ನ ಹೊಸಬಾಳ ಹೊಸ ರಸಗಳನೂಸರಿಸು ಚೆನ್ನ ಹೊಸ ತಳಿರು ಸುಮಫಲಗಳನು ತರಿಸು. ಅರಿಯದವರಾವು ಎಮ್ಮಯ ಮನದ ನೂರು ವಿರಸತೆಯ ತೊಟ್ಟುಗಳ ಕಳಚಿ ಅವ ತೂರು ಮರಣದಲಿ ಜೀವನದ ಮೊಳೆಯಿಹುದ ತೋರು ಪರಮಾತ್ಮನುಂಟು ಸುಖದೊಳಮೆಂದು ಸಾರು. ಮೆಲುಮೆಲನೆ ಪಸರಿಸುತ ತೆಂಕಣಿಂ ಬಾರ ಪಲವಿಧದ ಸಿಂಗರವ ವನಗಳಿಗೆ ತಾರ ನಲವಿನಂಕೆಯ ನಿತ್ಯತೆಯ ತೋರು ಧೀರ ಚೆಲುವು ದೊರೆಯಾಳ್ಳು ದನು ಸಾರೆ ಸವಿಾರ. ಶ್ರೀನಿವಾಸ (ಮಾಸ್ತಿ ವೆಂಕಟೇಶ ಐಯಂಗಾರ್) ೪೨. ಕಸ್ಮಿ ದೇವಾಯ? ಅಂದಿನಾ ದೇವರುಗಳೆಲ್ಲ ಮಡಿದುರುಳಿಹರು ಇಂದ್ರ ವರುಣರು ಧನದ ಮಿತ್ರ ಪೂಷಣರು - ಸಂದಿದ್ದ ವೈವತ್ವದಗ್ಗಳಿಕೆ ಹೋಗಿಹುದು ಅಂದಿನವರುನ್ನ ತಿಯ ಕಳಶ ಕೂಲಿಹುದು ಮಾನವರ ಸುಪ್ರಖರ ಮನದ ಮೊನೆಯಲುಗಿನ ಘಾತದಲಿ ಕಡುನೊಂದು ಸೋಲನೊಸ್ಸಿವರು ಧ್ಯಾನ ಪೂಜೆಗಳನ್ನು ತಮಗೆ ಸಲ್ಲವು ಎಂದು ಮಾತಿನೊಪ್ಪಿಗೆಯಿತ್ತು ಶರಣು ಬೇಡಿದರು ಅಚ್ಚರಿಯ ಮೋಹದಲಿ ಆಗಸವ ನೋಡುತ್ತೆ ಉಚ್ಚ ಕಂಠದಿ ಹಾಡಿದಾ ಭಕ್ತರಳಿದಿಹರು ನಯದಿಂದ ಭಯದಿ೦ದಲವರನೊಲಿಸುವ ಪಾಡು ಭುವಿಯಿಂದ ಜನದಿಂದ ತೊಲಗಿ ಹೋಗಿಹುದು ಸಾಗರನ ಸುರನೀಲ ನೀಲಿನತೆಯನು ನೋಡಿ ಭೋರ್ಗರೆಯುತುರ್ಕುಮಾರ್ಭಟಿಯ ಕೇಳಿ ನಾಲೆಸೆಯೋಲೊಡಿ ರುವಾರ ಗಂಭೀರತೆಗೆ ಬಾಗಿ ಗೈಯುವ ವರುಣ ಪೂಜೆ ಕಾಣಿಸದು