ಪುಟ:ಕನ್ನಡದ ಬಾವುಟ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೧ ನಭದೆಡೆಗೆ ಮೊಗವೆತ್ತಿ ಪೂಪತ್ರವೆರಚುತ್ತೆ ಕರುಣಿಸೈ ಪರ್ಜನ್ಯ ಎಂಬುದಿಲ್ಲಾಯ್ತು ಗುಡುಗು ಗರ್ಜನೆ ಕೇಳಿ ನಡುಗಿ ಬಲಿಯೊಪ್ಪಿಸುತೆ ಒಡೆಯ ರುದ್ರನ ರೌದ್ರವಿಳಿದ ಪರಿ ಪೋಯ್ತು ಗೋಧನವನುಳುಹಯ್ಯ ಹೆಚ್ಚಿಸೈ ಹೇ ಪೂಷ ! ದವಸಧಾನ್ಯಗಳೀಯೊ ದೇವ ದೇವೇಶ ! ಧನಕನಕ ವಾಹನವ ಕರುಣಿಸ್ಯೆ ಧನದ, ಭೋ ಘನರನರ್ಘರೆ, ಎಂಬ ಮೊರೆಯು ಕೇಳಿಸದು. ಅನ್ಯ ದೇವರ್ಕಳು ದಾಳಿಟ್ಟ ರೇರಿದರು ಸುಮನಸರು ಪರಬ್ರಹ್ಮ ಹರಿಹರಾದಿಗಳು ಇನ್ನೈದು ಸಾವಿರ ವರುಷವಾಳಿದರಿವರು ಇಂದಿವರ ಆಳಿಕೆಗು ಚ್ಯುತಿಯು ಬಂದಿಹುದು. ಹಳೆಯಕಾಲದ,- ತಂದೆತಾತದಿರ ದೇವರುಗ ಇಳಿದು ಹೋಗುವ ಕಡಿದು ಕಾಲ ಬರುತಿಹುದು ಇಳಿದಿಹುದು ಕಡುನಿಡಿದು ನೆಳಲೊಂದು ಮೇಲಿಂದ ಅಳಿಸಿಹೋಗುತಲಿಹುವು ಅವರ ಮೂರ್ತಿಗಳೂ, ಪೋಪವರ ಪದವಿಗಳಿಗಿನ್ಯಾರು ಬಂದರೆ ಕೋಪಿಗಳೊ ಕರುಣಿಗಳೊ ತಿಳಿಸ ಕೋವಿದರೊ ಆರನರಸುತೆ ಹೋಗಿ ಹವಿಸನೀಯಲು ಬೇಕೊ ಆವ ಶೀಲವನವರು ಜಗದಿ ಬಿತ್ತುವರೊ. ಇಲ್ಲದಿರೆ ಬೇರಾವ ದೇವರೇ ಬಾರೋ ಇಲ್ಲದೊಂದಕೆ ಹೆಸರನ್ನು ಕರೆಯುವೆವೋ ಇಲ್ಲದಿರೆ ಮಾನವನ ಸುಗುಣವೇ ದೈವವೋ.. ಎಲ್ಲಿಗೂ ಹರಿಯದಿಹ ಸಂಶಯವೆ ಕೊನೆಯೊ ! ವಿ. ಸೀ. (ವಿ. ಸೀತಾರಾಮಯ್ಯ) ೪೩. ಕೋಗಿಲೆ ಹಿರಿಮಂಜು ಬಿಟ್ಟಿಲ್ಲ ಚಳಿಗಾಳಿ ನಿಂತಿಲ್ಲ | ಮೈ ನಡುಕ ಪೋಗಿಲ್ಲ ಇಬ್ಬನಿಯು ಸುರಿಮಳೆಯ ನಿಲ್ಲಿಸಿಲ್ಲ ;