ಪುಟ:ಕನ್ನಡದ ಬಾವುಟ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೨ ಶಿಶಿರ ಸಾಮ್ರಾಜ್ಯಕ್ಕೆ ಚ್ಯುತಿಯು ಬಂದಿಲ್ಲ ; ಚ್ಯುತಿ ಬರುವುದೆಂಬೊಂದು ಚಿಹ್ನೆಯಿಲ್ಲ. ತರಗೆಲೆಗಳುದಿರಿಲ್ಲ ತಾರೆಮೊಗವರಳಿಲ್ಲ ತರುವೊಂದು ಚಿಗುರಿಲ್ಲ ಚಿಗುರ್ವಿಡಿವುದೆಂಬೊಂದು ಚಿಹ್ನೆ ಯಿಲ್ಲ ; ಹಿಮಕರನ ಬಿಳಿ ಕಿರಣ ನಗುಬೀರುವಂತಿಲ್ಲ, ಬೆಳುದಿಂಗಳುಂಡಾರು ಆಡುವವರಿಲ್ಲ. ಹಸುರಿನಿಸು ಕಾಣದಿಹ ಬರಲು ಕೊಂಬೆಗಳೇರಿ ಮರದ ತುದಿಯನ್ನು ಸಾರಿ ಏಕಾಂಗಿ ನೀನೇಕೆ ಉಲಿಯುತಿಹೆ ಇ೦ತು ? ಆವ ಸಂತಸ ನಿನದು ಹೇಳು ಕೋಗಿಲೆಯೇ ! ಏಂ ಪ್ರಮತ್ತತೆ ಇಂದು ನಿನ್ನ ಕೂಗಿನಲಿ ! ಎತ್ತಲೇ೦ ಚೆಲುವಿಲ್ಲ ಸಂಗಡಿಗರಾರಿಲ್ಲ -ಗಿಳಿವಿಂಡು ಗೊರವಂಕ ಹೋ೦ಬಕ್ಕಿ ಹಾಡುತಿಹ ಸರ ಕೇಳುತ್ತಿಲ್ಲ ; ಆವ ಸೊಗ ಬರುವುದನು ನೀನಲ್ಲಿ ಕಾಣುತಿಹೆ, ನಡುಚೈತ್ರವೆಂಬಂತೆ ಉಲಿಯುತಿಹೆಯೇ ! ನಿಡುಬಯಲನಿರಿಯುತಿಹೆ ದೆಸೆಗಳನು ತುಂಬುತಿಹೆ ಕಿವಿಗಳನು ಬಿರಿಸುತಿಹೆ ಎದೆವೊಕ್ಕು ಆಸೆಗಳ ಕೆರಳಿಸುತ್ತಿದೆಯೇ ! ಬಂದೀತು ಬಂದೀತು ನಗುಗಾಲ, ಅಕ್ಕ ಓ ಎಂದು ಕಂಠವನೆತ್ತಿ ಹಾಡುತಿಹೆಯೇ ! ನಮಗೆ ಗೋಚರಿಸದಿಹ ಪರರಾರು ಅರಿಯದಿಹ ನೀನೊರ್ವ ಕಾಣುತಿಹ ಹೊಸಜೀವ ಸಂಚಾರವಾವುದಿಹುದೊ ! ನೆಲದಿಂದ ಬೇರಿಂಗೆ, ಬೇರಿ೦ದ ತರುವಿಂಗೆ ಜೀವರಸವೇರುವುದ ಕಾಣುತಿಹೆಯಾ!