ಪುಟ:ಕನ್ನಡದ ಬಾವುಟ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೪ ಆಸರಲಿ ಕಣ್ಣೆವೆಯು ಮುಚ್ಚಿ ಬರುತಿರಲು ಹೊಸತವಕದೊತ್ತಿನಲಿ ಮೇಲೆತ್ತಿದೆ ! - ಅಭೀಃ ! ಅಭೀಃ ! ಅಭೀಃ ! ಇದೆ ಮಂತ್ರವನ್ನು ತೆ ಎಂಟು ದಿಕ್ಕಿನ ಗಾಳಿಗುಸಿರೆತ್ತಿ ಊದುತಿದೆ ! ನೀಳ್ಕೊರಲ ತುತ್ತುರಿಯನೂದಿಸುತಿದೆ ! ಯುಗದಗಲ ಜಗದಗಲ ಎಡರೆದ್ದು ನಿಂತಾವು ! ಸಂರಾಜರಬ್ಬರವು ನಡುಗಿಸೀತು ! ಕುಲವೆಂಬ ಮತವೆಂಬ ಕೆಳೆಯೆಂಬ ನಾಡೆಂಬ ಮಮತೆಗಳು ದಾರಿಯಲಿ ಕತ್ತಲಿಟಾವು ! - ಅಭೀಃ ! ಅಭೀಃ ! ಅಭೀಃ ! ಎಂಬ ಧುವ ತಾರಗೆಯು ಕತ್ತಲಲಿ ತವಿಲಲ್ಲಿ ದಿಕ್ಕನ್ನು ಕಾಣಿಪುದು ನಿಜಕಿಟ್ಟ ಮುಸುಕೆತ್ತಿ ಮರೆ ತೆರೆವುದು ಮಣಿಯದಿಹ ಮನವೊಂದು ಸಾಧಿಸುವ ಹಟವೊಂದು ನಿಜದ ನೇರಕೆ ನಡೆವ ನಿಶ್ಚಲತೆಯೊಂದುಅನ್ಯಾಯಕೆಂದೆಂದು ಬಾಗದೆಚ್ಚರವೊಂದು ಮರುಕಕ್ಕೆ ಪ್ರೇಮಕ್ಕೆ ಚಿರ ತೆರೆದ ಎದೆಯೊಂದು - ಅಭೀಃ ! ಅಭೀಃ ! ಅಭೀ& ! ಎಂಬ ತಾರಕವಾಕ್ಯ ನಾಡಿಯನು ನಡಸುತಿರೆ, ಬಾಳನ್ನು ತಿದ್ದುತಿರೆ | ನಡೆ ಮುಂದಕೆನ್ನು , ಕೂಗುತಿವೆ ನುಗ್ಗಿಸುತಿವೆ. ವಿ. ಸೀ. (ವಿ. ಸೀತಾರಾಮಯ್ಯ) ೪೫. ನ ನೀ ನ ನಾಡಿನ ಪುಣ್ಯದ ಪೂರ್ವದಿಗಂತದಿ ನವ ಅರುಣೋದಯ ಹೊಮುತಿದೆ ! ಚಿರ ನೂತನ ಚೇತನದುತ್ಸಾಹದಿ ನವೀನ ಜೀವನ ಚಿಮ್ಮುತಿದೆ ! ಅಭಿನವ ಮಧುಕೋಕಿಲ ಕಲಕಂಠದಿ ಸ್ವರಸುರಚಾಪಗಳುಣ್ಮುತಿವೆ ! ಶ್ಯಾಮಲ ಕಾನನ ಸುಮಸಮ್ಮೇಲದಿ ಇಂಚರ ಸಾಸಿರ ಪೊಣ್ಮುತಿವೆ! ಕಿವಿ ಕಣ್ಣಾಗುತಿದೆ ! ಕಣ್ ಕಿವಿಯಾಗುತಿದೆ !